ಚಿಕ್ಕಮಗಳೂರು: ದಲಿತ ಸಂಘಟನೆಗಳು ಅಟ್ರಾಸಿಟಿ ಪ್ರಕರಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಜಿಲ್ಲಾ ವಕ್ಕಲಿಗರ ಸಂಘದ ಅಧ್ಯಕ್ಷರು ಮತ್ತು ಯುವ ವಕ್ಕಲಿಗರ ಸಂಘದ ಅಧ್ಯಕ್ಷರು ನೀಡಿರುವ ಹೇಳಿಕೆಯನ್ನು ಹಿಂಪಡೆಯದಿದ್ದರೆ, ದಲಿತ ಸಮುದಾಯವನ್ನು ಕ್ಷಮೆಯಾಚಿಸಬೇಕು. ಇಲ್ಲವಾದರಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿ, ದಲಿತ ಸಂಘಟನೆಗಳ ವಿರುದ್ಧ ಮಾತನಾಡುವಾಗ ದಾಖಲೆಯನ್ನು ಒದಗಿಸಬೇಕು. ಎಸ್.ಸಿ,ಎಸ್.ಟಿ. ಕಾಯ್ದೆಯನ್ನು ಯಾರು ದುರುಪಯೋಗ ಪಡಿಸಿಕೊಂಡಿದ್ದಾರೆಂಬುದನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿ, ವಕ್ಕಲಿಗರ ಸಂಘದ ಅಧ್ಯಕ್ಷರು ಮತ್ತು ವಕ್ಕಲಿಗರ ಸಂಘದ ಯುವವೇದಿಕೆ ಅಧ್ಯಕ್ಷರು ತಮ್ಮ ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
ಜಿಲ್ಲೆಯಲ್ಲಿ ವಕ್ಕಲಿಗರ ಯುವತಿಯರ ಮೇಲೆ ದೌರ್ಜನ್ಯಗಳು ನಡೆದಾಗ ಘಟನೆ ಖಂಡಿಸಿ ಹೋರಾಟಕ್ಕೆ ವಕ್ಕಲಿಗರ ಸಂಘದ ಮುಖಂಡರು ಏಕೆ ಮುಂದಾಗಲಿಲ್ಲವೆಂದು ಪ್ರಶ್ನಿಸಿ, ಅಧಿಕಾರ, ಭೂಮಿ, ಆರ್ಥಿಕವಾಗಿ ಸಬಲರಾಗಿದ್ದೇವೆಂದು ಬಾಯಿಗೆ ಬಂದಂತೆ ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಬೇಕು. ದಲಿತ ಸಂಘಟನೆಗಳ ಹಲವಾರು ಇರಬಹುದು ಆದರೆ ಸಂಘಟನೆ ಮೇಲೆ ಆರೋಪ ಬಂದಾಗ ನಾವೆಲ್ಲ ಒಗ್ಗೂಡಿ ಕೆಲಸ ಮಾಡುತ್ತೇವೆಂದು ತಿಳಿಸಿದರು.
ಆಯಾ ಸಮುದಾಯಗಳು ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ನ್ಯಾಯಕ್ಕಾಗಿ ಹಲವು ರೀತಿಯ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ ಪ್ರಚಾರಕ್ಕಾಗಿ ಅನ್ಯರ ಹೇಳಿಕೆ ಮಾತನ್ನು ಕೇಳಿ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಯುವ ವಕ್ಕಲಿಗರ ಸಂಘದ ಅಧ್ಯಕ್ಷ ಸಂದೀಪ್ ವಿವೇಚನೆಯಿಂದ ಮಾತನಾಡಬೇಕು ಎಂದರು.
ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ,ಕೊಲೆ, ಮಾರಣಾಂತಿಕ ಹಲ್ಲೆ ನಡೆದಾಗ ವಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ಯುವ ವಕ್ಕಲಿಗರ ಸಂಘದ ಅಧ್ಯಕ್ಷ ಸಂದೀಪ ಯಾವತ್ತೂ ಧ್ವನಿ ಎತ್ತಿದವರಲ್ಲ ಒಂದು ವೇಳೆ ವಕ್ಕಲಿಗರ ಸಂಘದ ಅಧ್ಯಕ್ಷರು,ಯುವ ವಕ್ಕಲಿಗರ ಸಂಘದ ಅಧ್ಯಕ್ಷರ ಕುಟುಂಬದ ಮೇಲೆ ದೌರ್ಜನ್ಯಗಳು ನಡೆದರೆ ಮೊದಲು ಬೀದಿಗಿಳಿದು ಹೋರಾಟ ಮಾಡುವುದು ದಲಿತ ಸಂಘಟನೆಗಳು ಎಂಬುದನ್ನು ಮನಗಾಣಬೇಕಿದೆ ಎಂದರು.
ಯಾವ ಸಮುದಾಯ ದಲಿತರ ಭೂಮಿ ಕಿತ್ತುಕೊಂಡಿದೆ. ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ ದೆ.ಮಾರಣಾಂತಿಕ ಹಲ್ಲೆ ನಡೆಸಿದೆ ಎಂಬುದು ಜಿಲ್ಲೆಯ ಜನರಿಗೆ ತಿಳಿದಿದೆ. ದೌರ್ಜನ್ಯ ಪ್ರಕರಣ ದಾಖಲಾಗುತ್ತಿ ದ್ದಂತೆ ಕೇಸನ್ನು ವಾಪಸ್ ಪಡೆಯುವಂತೆ ನಾವುಗಳು ಯಾರ ಬಳಿಯೂ ಕೈಮುಗಿದು ಬೇಡಿಕೊಂಡಿಲ್ಲ, ನಮ್ಮ ಮುಂದೆಬೇಡಿಕೊಂಡಿರುವ ನಿದರ್ಶನಗಳು ಬಹಳಷ್ಟಿವೆ ಎಂದು ತಿಳಿಸಿದರು.
ವಕ್ಕಲಿಗರ ಸಂಘದ ಅಧ್ಯಕ್ಷರು ಹೇಳಿರುವಂತೆ ಸಾವಿರಾರು ಎಸ್ಸಿ,ಎಸ್ಟಿ ಪ್ರಕರಣಗಳು ಬಿ ವರದಿಯಾಗುತ್ತಿವೆ. ಕಾರಣ ಇವರ ಮನಸ್ಥಿತಿಯುಳ್ಳ ಅಧಿಕಾರಿಗಳು ಹಾಗೂ ರಾಜಕಾರಣಿಗಳು,ಕಾನೂನು ವ್ಯವಸ್ಥೆಯನ್ನು ಹಗುರವಾಗಿ ಮಾತನಾಡುವ ವ್ಯಕ್ತಿಗಳಿಂದ ಮತ್ತು ಹಣದಿಂದ ಸತ್ಯದಿಂದ ಮುಚ್ಚಿಹಾಕುವ ಪ್ರಭಾವಿಗಳಿಂದಲೂ ದೌರ್ಜನ್ಯ ಪ್ರಕರಣಗಳು ಬಿ ವರದಿಯಾಗುತ್ತಿವೆ ಎಂದರು.
ಎಸ್.ಡಿ.ಪಿ.ಐ. ಮುಖಂಡ ಅಂಗಡಿ ಚಂದ್ರು ಮಾತನಾಡಿ, ದೌರ್ಜನ್ಯ ಪ್ರಕರಣಗಳು ದಾಖಲಾದಾಗ ಪ್ರಕರಣ ಹಿಂಪಡೆಯುವಂತೆ ಕೈ,ಕಾಲು ಹಿಡಿಯುವ ಹಂತಕ್ಕೆ ಬಂದವರು ಯಾರೇಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯಮಾತನಾಡಿ, ದಲಿತಸಂಘಟನೆಗಳ ಬಗ್ಗೆ ಆರೋಪಮಾಡಿದವರು ದಲಿತ ಪರವಾಗಿ ಹೋರಾಟ ಮಾಡಿದವರಲ್ಲ, ವಕ್ಕಲಿಗ ಸಮುದಾಯದಲ್ಲಿಟ್ಟುಕೊಂಡು ಬಿ.ಕೆ.ಸುಂದರೇಶ್, ರಾಧಾಸುಂದರೇಶ್, ಎಂ.ಎಲ್.ಮೂರ್ತಿ, ಹೆಚ್.ಹೆಚ್. ದೇವರಾಜ್ ಸೇರಿದಂತೆ ಅವರುಗಳು ದಲಿತರಿಗೆ ಅನ್ಯಾಯಾವಾದ ಅವರ ಪರವಾಗಿ ಹೋರಾಟ ಮಾಡಿದ್ದಾರೆ. ಇಲ್ಲೆಯಲ್ಲಿ ಕೋಮು ಸಾಮಾರಸ್ಯ ಹಾಳುಗೆಡವಂತೆ ನೋಡಿಕೊಂಡಿದ್ದಾರೆ. ಈಗಿರುವ ವಕ್ಕಲಿಗರ ಸಂಘದ ಅಧ್ಯಕ್ಷರು, ಯುವ ವಕ್ಕಲಿಗರ ಸಂಘದ ಅಧ್ಯಕ್ಷರು ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಲು ಕೆಲಸಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು. ದಲಿತ ಸಂಘಟನೆ ಜಿಲ್ಲಾಸಂಚಾಲಕ ಪಿ.ಟಿ.ಚಂದ್ರಶೇಖರ್, ಸಂವಿಧಾನ ಸಂರಕ್ಷಣೆ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ದಲಿತ ಸಂಘರ್ಷ ಸಮಿತಿಜಿಲ್ಲಾ ಪ್ರಧಾನ ಸಂಚಾಲಕ ಬಾಚಿಗನಹಳ್ಳಿ ಮಂಜಯ್ಯ ಇದ್ದರು.
Coalition of Dalit organizations demands apology from Dalit community
Leave a comment