Home namma chikmagalur ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಬಿಜೆಪಿಗೆ ಬಹುಮತ-ಕಾಂಗ್ರೆಸ್ ಗೆ ಎಚ್ಚರಿಕೆ
namma chikmagalurajjampuraHomeLatest News

ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಬಿಜೆಪಿಗೆ ಬಹುಮತ-ಕಾಂಗ್ರೆಸ್ ಗೆ ಎಚ್ಚರಿಕೆ

Share
Share

ಅಜ್ಜಂಪುರ: ಸೆಪ್ಟೆಂಬರ್ 17 ರಂದು ಪಟ್ಟಣ ಪಂಚಾಯತಿ ಚುನಾವಣೆಗೆ ನಡೆದಿದ್ದು ಇಂದು ಮತಗಳ ಎಣಿಕೆ ಮಾಡಿ ಫಲಿತಾಂಶ ಪ್ರಕಟವಾಗಿದೆ.

ಒಂದನೆಯ ವಾರ್ಡ್‌ನಲ್ಲಿ ನಿರೀಕ್ಷೆಯಂತೆ ಬಿಜೆಪಿಯ ಕವಿತಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಮಾಲ ಸೋಲು ಕಂಡಿದ್ದಾರೆ. ಕವಿತಾ 491 ಮತ ಪಡೆದರೆ ಮಾಲ135 ಮತ ಪಡೆದಿದ್ದಾರೆ.

ಎರಡನೆಯ ವಾರ್ಡ್‌ನಲ್ಲಿ ಬಿಜೆಪಿಯವರು ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಉಸಿಯಾಗಿದೆ.ಕಾಂಗ್ರೆಸ್ ನ ಜೋಗಿ ಪ್ರಕಾಶ್ ಗೆಲುವು ಸಾಧಿಸಿದರೆ ಬಿಜೆಪಿಯ ಮಲ್ಲಿಕಾರ್ಜುನ ಸೋಲು ಕಂಡಿದ್ದಾರೆ.ಕಾಂಗ್ರೆಸ್590 ಮತಪಡೆದರೆ ಬಿಜೆಪಿ511 ಮತಪಡಿದಿದೆ.

ಮೂರನೆಯ ವಾರ್ಡ್‌ನಲ್ಲಿ ಕಾಂಗ್ರೆಸ್ ನ ನಿಸಾರ್ ಅಹಮದ್ ನಿರೀಕ್ಷೆಯಂತೆ 664 ಮತ ಪಡೆದು ಜಯಗಳಿಸಿದ್ದಾರೆ.ಪಕ್ಷೇತರರ ಅಭ್ಯರ್ಥಿ ಷಡಾಕ್ಷರಿ 584 ಮತ್ತು ದಳದ ಎಸ್,ಶಿವಾನಂದ್ 62 ಮತ ಪಡೆದು ಸೋಲು ಕಂಡಿದ್ದಾರೆ.

ನಾಲ್ಕನೆಯ ವಾರ್ಡ್‌ನಲ್ಲಿ ಬಿಜೆಪಿಯ ರೇವಣ್ಣ 255 ಮತಪಡೆದು ಗೆಲುವಿನ ನಗೆ ಬೀರಿದರೆ ಕಾಂಗ್ರೆಸ್ ನ ರತ್ನಮ್ಮ 237 ಮತ ಪಡೆದ ಸೋತಿದ್ದಾರೆ.

ಐದನೆಯ ವಾರ್ಡ್‌ನಲ್ಲಿ ಕಾಂಗ್ರೆಸ್ ನ ಕೃಷ್ಣಪ್ಪ 247 ಮತಪಡೆದು ಅಯ್ಕೆಯಾಗಿದ್ದು ಬಿಜೆಪಿಯ ಪ್ರಕಾಶ್ 216 ಮತ ಪಡೆದು ಸೋಲು ಕಂಡಿದ್ದಾರೆ ಐದು ಜನ ಪಕ್ಷೇತರರು ಸ್ಪರ್ಧೆ ಮಾಡಿ ಕೆಲವು ಮತ ಪಡೆದಿದ್ದಾರೆ.

ಆರನೆಯ ವಾರ್ಡ್‌ನಲ್ಲಿ ಬಿಜೆಪಿಯ ರಂಗಸ್ವಾಮಿ 364 ಮತ ಪಡೆದು ಗೆಲುವು ಸಾಧಿಸಿದರೆ ಕಾಂಗ್ರೆಸ್ ನ ಮಂಜುನಾಥ್ 292 ಮತ ಪಡೆದು ಸೋಲು ಕಂಡಿದ್ದಾರೆ.

ಏಳನೆಯ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಮಲತಾ 262 ಮತ ಪಡೆದು ಗೆಲುವು ಸಾಧಿಸಿದರೆ ಬಿಜೆಪಿಯ ಮೇಘನಾ 230 ಮತ ಪಡೆದು ಸೋತಿದ್ದಾರೆ.ಪಕ್ಷೇತರರಾದ ರೇಖಾ52 ಮತ್ತು ಮೇಘನಾ94 ಮತ ಪಡೆದಿದ್ದಾರೆ..

ಎಂಟನೆಯ ವಾರ್ಡ್‌ನಲ್ಲಿ ನಿರೀಕ್ಷೆ ಯಂತೆ ಕಾಂಗ್ರೆಸ್ ನ ತೀರ್ಥಪ್ರಸಾದ್ 290 ಮತ ಪಡೆದು ಗೆಲುವಿನ ನಗೆ ಬೀರಿದರೆ ಬಿಜೆಪಿಯ ಸಂತೋಷ್ 124 ಮತ್ತು ಪಕ್ಷೇತರರ ಅಭ್ಯರ್ಥಿ 24 ಮತ ಪಡೆದರು ಸೋಲು ಕಂಡಿದ್ದಾರೆ.

ಒಂಬತ್ತನೆಯ ವಾರ್ಡ್‌ನಲ್ಲಿ ಬಿಜೆಪಿಯ ಮಧುಸೂದನ್ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಸಂತೋಷ್ ಸೋಲು ಕಂಡಿದ್ದಾರೆ.ಬಿಜೆಪಿ313 ಮತ ಪಡೆದರೆ ಕಾಂಗ್ರೆಸ್114ಮತ ಪಡೆದಿದೆ.

ಹತ್ತನೆಯ ವಾರ್ಡ್‌ನಲ್ಲಿ ಬಿಜೆಪಿಯ ಬಿಂದು 364 ಮತ ಪಡೆಯುವುದರ ಮೂಲಕ ಗೆಲುವು ಸಾಧಿಸಿದರೆ ಕಾಂಗ್ರೆಸ್ ನ ಮೇಘನಾ 291 ಮತ ಪಡೆದು ಸೋತಿದ್ದಾರೆ. ಹನ್ನೊಂದನೆಯ ವಾರ್ಡ್‌ನಲ್ಲಿ ಬಿಜೆಪಿಯ ಶೋಭ 552 ಮತ ಪಡೆದು ಗೆಲುವು ಸಾಧಿಸಿದರೆ ಕಾಂಗ್ರೆಸ್ ನ ಕವಿತಾ 301 ಮತ ಪಡೆದು ಸೋತಿದ್ದಾರೆ.

ಹನ್ನೊಂದು ವಾರ್ಡ್‌ನಲ್ಲಿ ಆರು ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಐದು ಸ್ಥಾನ ಗೆದ್ದಿದೆ. ಶಾಸಕ ಶ್ರೀನಿವಾಸ್ ಮತ್ತು ಕುಟುಂಬ ಈ ಚುನಾವಣೆಯನ್ನು ಪ್ರತಿಷ್ಠೆಗೆ ತೆಗೆದುಕೊಂಡು ಹಗಲು ರಾತ್ರಿ ಓಡಾಡಿದ್ದು ಮತ್ತು ಅಧಿಕಾರ ಬಲ ಹಣ ಬಲ ಬಳಸಿದರು

ಪ್ರಯೋಜನವಾಗಿಲ್ಲ.ಕಾಂಗ್ರೆಸ್ ನಲ್ಲಿದ್ದ ಎ.ಟಿ.ಶ್ರೀನಿವಾಸ್ ಬಿಜೆಪಿ ಸೇರಿ ಸೆಡ್ಡು ಹೊಡೆದ ಪರಿಣಾಮ ಕಾಂಗ್ರೆಸ್ ಗೆ ಹಿನ್ನಡೆ ಕಾಣುವಂತಾಯಿತು ವಿಶ್ಲೇಷಣೆ ಮಾಡಲಾಗುತ್ತಿದೆ.ಬಿಜೆಪಿಯ ಬಹಳ ನಿರೀಕ್ಷೆ ಇಟ್ಟು ಕೊಂಡಿದ್ದ ಎರಡನೆಯ ವಾರ್ಡ್‌ನಲ್ಲಿ ಸೋತಿರುವುದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ ಮತದಾರರು.

Town Panchayat election results give majority to BJP

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...