Home ತಂದೆಗೆ ತಕ್ಕ ಮಗ ಸಚಿವ ಕೃಷ್ಣ ಬೈರೇಗೌಡ
HomechikamagalurLatest Newsnamma chikmagalur

ತಂದೆಗೆ ತಕ್ಕ ಮಗ ಸಚಿವ ಕೃಷ್ಣ ಬೈರೇಗೌಡ

Share
Share

ಚಿಕ್ಕಮಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ತಂದೆಗೆ ತಕ್ಕ ಮಗ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ.

80 ರ ದಶಕದಲ್ಲಿ ಜನತಾಪಕ್ಷದ ಮುಖಂಡರಾಗಿ ಕೋಲಾರ ಜಿಲ್ಲೆಯ ವೇಮಗಲ್ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಸತತವಾಗಿ ಅಯ್ಕೆಯಾಗುತ್ತಿದ್ದ ಬೈರೇಗೌಡರು ಮಂತ್ರಿಯಾಗಿ ದಕ್ಷತೆಗೆ ಹೆಸರುವಾಸಿಯಾಗಿದ್ದವರು. ಬೈರೇಗೌಡರು ಪ್ರವಾಸ ಮಾಡಿದ ಕಡೆ ಮತ್ತು ಕಛೇರಿಗೆ ಭೇಟಿ ಕೊಟ್ಟ ಕಡೆ ಅಧಿಕಾರಿಗಳು ಮತ್ತು ನೌಕರರಿಗೆ ಚಳಿ ಬಿಡಿಸುತ್ತಿದ್ದರು.ಹೀಗಾಗಿ ಬೈರೇಗೌಡರನ್ನು ಬೆಂಕಿ ಬೈರೇಗೌಡ ಎಂದು ಕರೆಯುತ್ತಿದ್ದರು.

ಬೈರೇಗೌಡರ ಮಗ ಕೃಷ್ಣ ಬೈರೇಗೌಡ ಇಂದು ಕಂದಾಯ ಸಚಿವರಾಗಿ ತಂದೆಯ ಸಾಲಿನಲ್ಲಿ ಸಾಗುತ್ತಿದ್ದಾರೆ.ಕೃಷ್ಣ ಬೈರೇಗೌಡ ಕೂಡ ಕಛೇರಿಗೆ ಭೇಟಿ ಕೊಡುವುದು ಅಲ್ಲಿನ ನ್ಯೂನತೆ ಬಗ್ಗೆ ಕೆಲಸದ ವೈಖರಿ ಯ ಬಗ್ಗೆ ಅಧಿಕಾರಿಗಳಿಗೆ ಬೆಂಡ್ ಎತ್ತುತ್ತಿದ್ದಾರೆ.ಮೀಟಿಂಗ್ ನಲ್ಲಿ ಅಧಿಕಾರಿ ನೌಕರರಿಗೆ ಚಳಿ ಜ್ವರ ಖಚಿತ.

ಕಂದಾಯ ಇಲಾಖೆ ಎಂದರೆ ಕಾಸಿನ ಕಣಜ ಎಂದು ಬಹುತೇಕ ಅಧಿಕಾರಿ ನೌಕರರು ಹಿಂದೆ ಮುಂದೆ ಒಂದೇ ಸಮನೆ ತಿನ್ನುತ್ತಿದ್ದಾರೆ ಎಂಬುದು ಸತ್ಯ.

ಗ್ರಾಮ ಸೇವಕನಿಂದ ತಹಶಿಲ್ದಾರ ಎ,ಸಿ.ಡಿ,ಸಿ ಸೆಕ್ರೆಟರಿ ವರೆಗೆ ಹೆಗ್ಗಿಲ್ಲದೆ ತಿನ್ನಬಹುದಾದ ಇಲಾಖೆ ಸ್ವಲ್ಪವಾದರು ಸ್ವಚ್ಛ ಮಾಡುವ ಕೆಲಸದಲ್ಲಿ ಸಚಿವರು ನಿರತರಾಗಿದ್ದಾರೆ.ಇಂದು ಚಿಕ್ಕಮಗಳೂರಿಗೆ ಬಂದು ಸಭೆ ನಡೆಸಿದ ಕೃಷ್ಣ ಬೈರೇಗೌಡ ಹಿಗ್ಗಮುಗ್ಗ ಬೆವರು ಇಳಿಸಿದ್ದಾರೆ.

ಕೃಷ್ಣ ಬೈರೇಗೌಡ ವಿದೇಶದಲ್ಲಿ ಕೆಲಸದಲ್ಲಿದ್ದವರು ತಂದೆಯ ಸಾವಿನ ನಂತರ ಊರಿಗೆ ಬಂದು ಕೃಷಿ ಕೆಲಸದ ಜೊತೆಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು ಆದರೆ ವೇಮಗಲ್ ಕ್ಷೇತ್ರ ರದ್ದಾಗಿದ್ದರಿಂದ ಕಣ್ಣು ಬೆಂಗಳೂರು ಕಡೆ ಬಿತ್ತು ಅದೇ ಬ್ಯಾಟರಾಯನಪುರ ಕ್ಷೇತ್ರದಿಂದ ಸತತ ಮೂರನೇ ಬಾರಿ ಗೆಲುವು ಸಾಧಿಸಿರುವ ಕೃಷ್ಣ ಬೈರೇಗೌಡ ಹಿಂದೆ ಕೂಡ ಸಚಿವರಾಗಿದ್ದರು ಪ್ರಸ್ತುತ ಕಂದಾಯ ಸಚಿವರಾಗಿ ಇಲಾಖೆಗೆ ಘನತೆ ತಂದು ಕೊಡಲು ಹೆಣಗಾಡುತ್ತಿದ್ದಾರೆ.

ಇಲಾಖೆಯಲ್ಲಿ ಹೊಸತನ ತರಲು ಪ್ರಯತ್ನ ನಡೆಸಿದ್ದಾರೆ.ಯಾರ ಒತ್ತಡಕ್ಕೂ ಮಣಿಯುವುದಿಲ್ಲ.ಸರಳರು ಯಾರಿಗೂ ಕಾಫಿ ಕುಡಿಸುವುದಿಲ್ಲ ಅವರು ಕುಡಿಯುವುದಿಲ್ಲ ಮನೆಯಿಂದ ಊಟ ತಂದು ಊಟ ಮಾಡುವಷ್ಟು ಸರಳರು ನೇರ ಮಾತು ,ಮಾತು ಕಮ್ಮಿ ಕೆಲಸ ಜಾಸ್ತಿ ಎಂದು ಕೊಂಡಿದ್ದಾರೆ.ಇದು ರಾಜಕೀಯ ದಲ್ಲಾಳಿಗಳು ರಿಯಲ್ ಎಸ್ಟೇಟ್ ನವರಿಗೆ ನುಂಗಲಾರದ ತುತ್ತಾಗಿದ್ದರೆ ಅಧಿಕಾರಿಗಳು ಬೇರೆ ಇಲಾಖೆಗೆ ಹೋಗಲು ಜಾಗ ಹುಡುಕುತ್ತಿದ್ದಾರೆ.

ಅಕ್ರಮ ಒತ್ತುವರಿ ಮಾಡಿಕೊಂಡವರು ಮತ್ತು ಕಳ್ಳದಾರಿಯಲ್ಲಿ ಸಾಗುವಳಿ ಪತ್ರ ನೀಡಲು ಪ್ಲಾನ್ ಮಾಡಿರುವ ಕೆಲವು ಶಾಸಕರುಗಳು ಪರದಾಡುತ್ತಿದ್ದಾರೆ.ಅಷ್ಟರ ಮಟ್ಟಿಗೆ ಕೃಷ್ಣ ಬೈರೇಗೌಡರ ಸಂಚಲನ ಸೃಷ್ಟಿಸಿದ್ದಾರೆ.

Minister Krishna Byre Gowda is a son worthy of his father.

Share

Leave a comment

Leave a Reply

Your email address will not be published. Required fields are marked *

Don't Miss

ತಾಯಿಗೆ ಬೆಂಕಿ ಹಾಕಿ ಕೊಂದ ಮಗ

ಚಿಕ್ಕಮಗಳೂರು: ತಾಯಿಯನ್ನು ಮಗ ಬೆಂಕಿ ಹಾಕಿ ಸುಟ್ಟು ಕೊಂದಿರುವ ಅಮಾನುಷ ಘಟನೆ ನಡೆದಿದೆ. ಆಲ್ದೂರು ಠಾಣೆ ವ್ಯಾಪ್ತಿಯ ಅರೆನೂರು ಗ್ರಾಮದಲ್ಲಿ ನಡೆದಿದ್ದು ವಿಷಯ ತಿಳಿದ ತಕ್ಷಣ ಪೊಲೀಸ್ ಸಿಬ್ಬಂದಿ ತೆರಳಿದ್ದಾರೆ. Son...

ಸಖರಾಯಪಟ್ಟಣದ ಅಗ್ರಹಾರ ಬಳಿ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: ಸಖರಾಯಪಟ್ಟಣ ಹೋಬಳಿ ಅಗ್ರಹಾರ ಗ್ರಾಮದ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗೆ ಪರ-ವಿರೋಧ ವ್ಯಕ್ತವಾಗಿದ್ದು, ಉಭಯ ಕಡೆ ಅಹಿತಕರ ಘಟನೆ ನಡೆಯುವ ಸಂಭವವಿರುವುದರಿಂದ ಸ್ಥಳದಿಂದ ಒಂದು ಕಿ.ಮೀ. ವ್ಯಾಪ್ತಿಯವರೆಗೆ ಜುಲೈ ೨೮ ರಿಂದ...

Related Articles

ಆ.10ಕ್ಕೆ ಬಸವ ಮಾಚಿದೇವ ಶ್ರೀಗಳ ಸಾಮೂಹಿಕ ಪಾದಪೂಜೆ

ಚಿಕ್ಕಮಗಳೂರು: ಶ್ರಾವಣ ಮಾಸದ ಪೂಜೆ ಕಾರ್ಯಕ್ರಮದ ಅಂಗವಾಗಿ ಬಸವನಹಳ್ಳಿಯ ಜಿಲ್ಲಾ ಮಡಿವಾಳರ ಸಂಘದ ಆವರಣದಲ್ಲಿ ಆ.೧೦...

ಸಮರ್ಪಕ ಪಡಿತರ ವಿತರಣೆಗೆ ರಾಜ್ಯ ಪಡಿತರ ಸಂಘ ಆಗ್ರಹ

ಚಿಕ್ಕಮಗಳೂರು:  ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ಪಡಿತರ ಹಂಚಿಕೆ ಮಾಡಬೇಕು. ಅನ್ನಭಾಗ್ಯ ಅಕ್ಕಿಯ...

ಆ.7-8 ಕ್ಕೆ ಸಿಪಿಐ ಸಮಾವೇಶ-ಬಹಿರಂಗ ಅಧಿವೇಶನ

ಚಿಕ್ಕಮಗಳೂರು: ಭಾರತ ಕಮ್ಯುನಿಷ್ಟ ಪಾರ್ಟಿ ಸ್ಥಾಪನೆಯಾಗಿ ೧೦೦ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆ.೭ ಮತ್ತು ೮...

ಬೀದಿಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳು-ಜಿಲ್ಲೆಯಾದ್ಯಂತ ಪರದಾಡಿದ ಪ್ರಯಾಣಿಕರು

ಚಿಕ್ಕಮಗಳೂರು: ವೇತನ ಪರಿಷ್ಕರಣೆ, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನೌಕರರು...