Home namma chikmagalur ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ
namma chikmagalur

ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ

Share
Share

ಚಿಕ್ಕಮಗಳೂರು :ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ*

ಸಾಹಿತಿ ಶಿಕ್ಷಕ ಮೇಕನಗದ್ದೆ ಲಕ್ಷ್ಮಣಗೌಡರಿಗೆ ಸಮ್ಮೇಳನದ

*ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ*
ಸಾಹಿತಿ ಶಿಕ್ಷಕ ಮೇಕನಗದ್ದೆ ಲಕ್ಷ್ಮಣಗೌಡರಿಗೆ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ.

ರಾಜದಾದ್ಯಂತ 71 ಕವಿಗಳು ಕವಿಗೋಷ್ಠಿಯಲ್ಲಿ ಭಾಗಿ.

ಕವಿ ಮತ್ತು ಕವಿತ್ವಕ್ಕೆ ಇರುವ ಶಕ್ತಿ ಅತೀ ದೊಡ್ಡದು. ಇಂತಹ ಕವಿತ್ವಕ್ಕೆ ಒಂದು ದೊಡ್ಡ ಬನಾದಿ ಹಾಕಿ ಪೂರ್ಣಾರ್ಥದೊಂದಿಗೆ ಬಹುತ್ವದ ರೂಪ ನೀಡಿ ಬುನಾದಿಯಾದ ಅನೇಕ ಮೇರು ಕವಿಗಳಲ್ಲಿ ಕನ್ನಡಿಗರದ್ದು ಕೊಡ ಸಿಂಹ ಪಾಲು ಇದೆ ಎಂಬುದು ಹೆಗ್ಗಳಿಕೆ ವಿಚಾರ.ಇದರಲ್ಲಿ ಆದಿಕವಿ ಪಂಪ ಬಹಳ ಪ್ರಮುಖವಾದ ಸ್ಥಾನ ಪಡೆದಿದ್ದಾನೆ ಎನ್ನಬಹುದು.

ಕಲೆ ಸಾಹಿತ್ಯ ಸಂಸ್ಕೃತಿ ಒಂದು ಜನ ಸಮುದಾಯವನ್ನು ಕಟ್ಟುವ ಪ್ರಮುಖ ಸಾಧನಗಳು.
ಅನೇಕ ಸಂದರ್ಭಗಳಲ್ಲಿ ಇಂತಹ ಸಾಧನಗಳು ಜನಚರಿತೆಯಾಗಿ ಹೊರಹೊಮ್ಮಿವೆ, ಯಾವತ್ತು ನಶಿಸಿ ಹೋಗದಂತಹ ಸಾಕ್ಷಿ ಕಲ್ಲುಗಳಂತೆ ಕಾವ್ಯಗಳು ಈ ನೆಲದೊಳಗಿಂದ ಎದ್ದು ನಿಂತಿವೆ.

ಎಲ್ಲರೊಳಗೊಂದು ಕವಿತೆ ಇದ್ದೇ ಇರುತ್ತದೆ, ಅದನ್ನು ಕಟ್ಟುವ ಪರಿಯನ್ನು ರೂಡಿಸಿಕೊಳ್ಳಬೇಕು, ಕಟ್ಟುವವರಿಗೆ ವೇದಿಕೆ ನಿರ್ಮಾಣ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಮಾಡುವ ಅವಶ್ಯಕತೆ ಇದೆ. ವಿಶೇಷವಾಗಿ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ನಾವು ಬೆಳೆಸದೆ ಹೋದರೆ ಭಾಷಾ ಬಳಕೆ ಕಡಿಮೆಯಾಗಿ, ಅ ಭಾಷೆಯೊಳಗಿರುವ ಶ್ರೇಷ್ಠ ಸಂಸ್ಕೃತಿ, ಆ ಸಂಸ್ಕೃತಿ ಒಳಗೆ ಹಾಸುಹೊಕ್ಕಾಗಿರುವ ಜ್ಞಾನ ಕೈ ತಪ್ಪಿ ಹೋಗುವ ಸಂಭವವಿದೆ, ತಲತಲಾಂತರದಿಂದ ನಮ್ಮ ಜನಪದರು ರೂಡಿಗತವಾಗಿ ಬೆಳೆಸಿಕೊಂಡು ಬಂದ ನಮ್ಮದೇ ಭಾಷೆಯೊಂದನ್ನು, ಆಧುನಿಕ ಜಗತ್ತಿನ ಭಾಗವಾಗಿರುವ ನಾವುಗಳು ಉಳಿಸಿಕೊಳ್ಳಲು ಸಾಧ್ಯವಾಗದೆ ಹೋದರೆ ಮುಂದಿನ ಜನಾಂಗಕ್ಕೆ ನಾವೆಲ್ಲ ಶಾಪಗ್ರಸ್ತರಂತೆ ಕಾಣುತ್ತೇವೆ.

ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸುಮಾರು 71 ಕವಿಗಳು ತಮ್ಮ ತಮ್ಮ ಕವಿತೆಗಳ ಮೂಲಕ ಕರೆ ಕೊಟ್ಟಿದ್ದು ಈ ನೆಲ ಜಲ ಬದುಕು ಪ್ರಕೃತಿ ಭಾಷೆ ಸಂಸ್ಕೃತಿ ಜಾತಿ ಧರ್ಮ ಮತ ಪಂಥ ಅಸಮಾನತೆ ಸಮಾನತೆ ಮಾನವೀಯ ಮೌಲ್ಯದ ಪ್ರತಿಪಾದಯನ್ನು ತಮ್ಮ ಕವಿತೆಗಳ ಮೂಲಕ ಪ್ರತಿಪಾದಿಸಿರು.

ಮೂಡಿಗೆರೆಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ಸಭಾಭವನದಲ್ಲಿ ಜರುಗಿದ ಕವಿ ಕಾವ್ಯ ರಾಜ್ಯ ಸಮ್ಮೇಳನದ ಸಮಾರೋಪದ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಸಂಭ್ರಮ ಬಳಗದ ರಾಜ್ಯಾಧ್ಯಕ್ಷರಾದ ಎಂ ಎಸ್ ನಾಗರಾಜ್ ವಹಿಸಿದ್ದರು. ಮೇಕನಗದ್ದೆ ಲಕ್ಷ್ಮಣ ಗೌಡರು ಸರ್ವಾಧ್ಯಕ್ಷತೆಯನ್ನು ವಹಿಸಿ ಸಾಹಿತ್ಯ ಬಳಗದ ಗೌರವ ಸ್ವೀಕರಿಸಿ ಮಾತನಾಡಿದರು. ಸಾಹಿತಿ ಕಲ್ಕಟ್ಟೆ ನಾಗರಾಜ್ ರಾವ್ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿಕೊಂಡು ವಾಚನ ಮಾಡಿದ ಎಲ್ಲ ಕವಿತೆಗಳ ಬಗ್ಗೆ ವಿಮರ್ಶೆನೆ ಮಾಡಿದರು.
ವೇದಿಕೆಯಲ್ಲಿ ಕವಿ ಕಲಾವಿದರು ಸಾಹಿತಿಗಳು ಸಂಘಟಕರು ಉಪಸ್ಥಿತರಿದ್ದು, ಶಿಕ್ಷಕಿ ಚಂಪಾ ಸ್ವಾಗತಿಸಿ ನವೀನ್ ನಿರೂಪಣೆ ಮಾಡಿ ವಂದಿಸಿದರು.
••••••••••••••••••••••••••••••✒️

ವರದಿ ಡಿ.ಎಂ ಮಂಜುನಾಥ್

 

Share

Leave a comment

Leave a Reply

Your email address will not be published. Required fields are marked *

Don't Miss

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ ಮಹಿಳೆಯೊಬ್ಬರ ವಿಚಾರವಾಗಿ ಶೇಷಗಿರಿ...

Related Articles

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು...

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು...