Home Latest News ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿದ್ಯಾ ಪೊಸ್ಟಿಂಗ್ ಗೋಲ್ ಮಾಲ್
Latest News

ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿದ್ಯಾ ಪೊಸ್ಟಿಂಗ್ ಗೋಲ್ ಮಾಲ್

Share
Share

ಚಿಕ್ಕಮಗಳೂರು : ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ// ಅಶ್ವಥ್ ಬಾಬು ಕಲ್ಯಾಣ ಗುಣಗಳ ಬಗ್ಗೆ ಕಾದಂಬರಿ ಬರೆಯಬಹುದು ಎಂದು ವೈದ್ಯರುಗಳು ಮಾತನಾಡಿಕೊಳ್ಳುತ್ತಿದ್ದಾರೆ.ಇವರಿಗೆ ಹೆಗಲಿಗೆ ಹೆಗಲು ಕೊಟ್ಟು ಪಾಲುದಾರರಾಗಿರುವ ಜಿಲ್ಲಾ ಆಸ್ಪತ್ರೆಯ ಡಾ//ಮೋಹನ್ ಕುಮಾರ್ ಡಾ//ಮಂಜುನಾಥ್ ಮತ್ತು ಶೃಂಗೇರಿಯಲ್ಲಿರುವ ಡಾ// ಶ್ರೀನಿವಾಸ್ ಇವರುಗಳ ಹೆಸರಿನಲ್ಲೇ ಎಲ್ಲಾ ಅಡಗಿವೆ ಎಂತಹ ಮೈತ್ರಿ ಎಂದರೆ ಮಹಾರಾಷ್ಟ್ರ ಸರ್ಕಾರದ ರೀತಿಯ ಹೊಂದಾಣಿಕೆ ಇದೆ.

ಇಲಾಖೆಯಿಂದ ನೇಮಕಾತಿ ಮಾಡುವಾಗ ನಡೆದಿರುವ ಅಕ್ರಮಗಳಿಗೆ ಮೈತ್ರಿ ಎಂಬ ಅಭ್ಯರ್ಥಿ ಅಯ್ಕೆ ರೋಚಕವಾಗಿದೆ. ಮೈತ್ರಿ ಎಂಬ ಅಭ್ಯರ್ಥಿ ಒಂದೇ ವರ್ಷದಲ್ಲಿ ಮೂರು ಬಾರಿ ಅಯ್ಕೆಯಾಗಿದ್ದು ಹೇಗೆ ಎಂಬುದಕ್ಕೆ ಅಶ್ವಥ್ ಬಾಬು ರಂಗೀನಾಟ ಎದ್ದು ಕಾಣುತ್ತಿದೆ. ಗುತ್ತಿಗೆ ಅಧಾರದ ಮೇಲೆ 18_1_24 ಮೈತ್ರಿ ಎಂಬುವರಿಗೆ ಆದೇಶ ನೀಡಿ ಶೃಂಗೇರಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿರುತ್ತಾರೆ.ಅದರಲ್ಲೂ ಹಿಂದಿನ ದಿನ ಅರ್ಜಿ ಪಡೆದಿರುವುದು ಮಾಹಿತಿ ಹಕ್ಕಿನಡಿ ತಿಳಿಯುತ್ತದೆ. ಮಾಹಿತಿ ಹಕ್ಕುಗಳ ಅರ್ಜಿ ಸಲ್ಲಿಸಿದವರಿಗೆ ಕಿರುಕುಳ ನೀಡಿ ಸತಾಯಿಸಿದ್ದು ಬೇರೆ. ಶೃಂಗೇರಿಗೆ ಹೋದ ಮೈತ್ರಿಗಾಗಿ ಖಾಯಂ ಇದ್ದ ನೌಕರರ ವಸತಿ ಗೃಹ ಖಾಲಿ ಮಾಡಿಸಿ ನೀಡಿದ್ದು ಇನ್ನೂ ರೋಚಕವಾಗಿದೆ.ಇದಕ್ಕೆ ಅಲ್ಲಿನ ವೈದ್ಯ ಶ್ರೀನಿವಾಸ್ ಜಗಲ್ ಬಂದಿ ಇದೆ. ವಿಷಯ ಗೊತ್ತದ ಮೇಲೆ 22_7_24 ರಲ್ಲಿ ಮತ್ತೊಮ್ಮೆ ಮೈತ್ರಿ ಅಯ್ಕೆ ಮಾಡಿ ಜಿಲ್ಲಾ ಆಸ್ಪತ್ರೆಯ ಅಯಾಕಟ್ಟಿನ ಸ್ಥಳ ನೀಡಿರುವುದು ವೈದ್ಯ ಮೋಹನ್ ಕುಮಾರ್ ನಗು ನಗುತ್ತಲೇ ಸ್ವಾಗತಿಸಿ ಸತ್ಕರಿಸಿರುವ ಉದ್ದೇಶವನ್ನು ಆಸ್ಪತ್ರೆ ವೈದ್ಯರು ಆಪರೇಶನ್ ರೂಮ್ ನಲ್ಲಿ ಮಾತಾಡುವ ಗುಟ್ಟು ಗುಟ್ಟಾಗಿ ಉಳಿದಿಲ್ಲ. ಕಳೆದ ಐದು ವರ್ಷಗಳಿಂದ ಎಕ್ಕಮಕ್ಕ ಮಾಡಿ ಸೈ ಅನ್ನಿಸಿಕೊಂಡವರ ಕಹಾನಿ ಮಾತ್ರ ವಿಶೇಷ.

ಇದೇ ಮೈತ್ರಿಗೆ 31_1_24 ರಲ್ಲಿ ಚಿಕ್ಕಮಗಳೂರು ವೈದ್ಯಕೀಯ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಡ್ಯೂಟಿ ನೀಡಿರುವುದು ಮೋಹನ್ ಕುಮಾರ್ ದುರಾಸೆ ಎನ್ನುತ್ತಾರೆ. 35 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿದ್ದು 39 ಜನ ಅರ್ಜಿ ಸಲ್ಲಸಿದ್ದಾರೆ ಆದರೆ ಕೇವಲ 22 ಜನರನ್ನು ಅಯ್ಕೆ ಮಾಡಿದ್ದು ಮೈತ್ರಿ 22ನೆಯವರು ಇದು ಆನೇಕ ಅನುಮಾನ ಹುಟ್ಟಿಸುತ್ತಿದೆ. ಇದರ ಮಧ್ಯೆ ಇವರುಗಳು ಶೃಂಗೇರಿಯಲ್ಲಿ ನಡೆಸಿದ ಶ್ರೀಮಂತಕೆಯ ಕೂಟ ಕೂಡ ಸುದ್ದಿಯಾಗಿದೆ. ಡಾ//ಅಶ್ವಥ್ ಬಾಬು ಕಳೆದ ಇಪ್ಪತೈದು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿದ್ದು ಶಾಸಕರನ್ನು ಅಫೀಸರ್ ಕ್ಲಬ್ ಗೆ ಕರೆಯಿಸಿ ಪಾರ್ಟಿ ಕೊಡಿಸುವಷ್ಟು ಪ್ರಭಾವಿಯಂತೆ
ಒಂದೇ ವರ್ಷದಲ್ಲಿ ಮೂರು ಬಾರಿ ಅಯ್ಕೆ ಮಾಡಿರುವ ಗೋಲ್ ಮಾಲ್ ಕತೆಯ ಹಿಂದೆ ಸ್ವಾರಸ್ಯಕರ ಕತೆಯಿದೆ ಇದಕ್ಕಾಗಿ ಗುಂಪಿನಾಟ ನಡೆದಿದೆ ಎಂದು ಆಸ್ಪತ್ರೆ ನೌಕರರು ಮತ್ತು ಸಿಬ್ಬಂದಿ ಅಷ್ಟೇ ಅಲ್ಲ ಬಾಗಿಲು ಕಿಟಕಿಗಳು ಸಾರಿ,ಸಾರಿ ಹೇಳುತ್ತವೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆದರೆ ಇವರುಗಳ ಇನ್ನಷ್ಟು ಮತ್ತಷ್ಟು ರೋಚಕ ಕತೆ ಹೊರ ಬರುತ್ತವೆ ಇದಕ್ಕಾಗಿ ಮಾಹಿತಿ ಹಕ್ಕುಗಳ ಕಾರ್ಯಕರ್ತರು ಹಿಂದೆ ಬಿದ್ದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ...

Related Articles

ಮಳೆಗಾಲದಲ್ಲಿ ಟಿಂಬರ್ ಸಾಗಣೆರಸ್ತೆಯಿಂದ ರಸ್ತೆ ಹಾಳು

ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ...

ನಗರಕ್ಕೆ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜು ಸ್ಥಗಿತ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 600 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ...

ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ…?

ಚಿಕ್ಕಮಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (LC-48) ಬದಲಿಗೆ...

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ...