Home State News ವಿಕ್ರಮ್ ಗೌಡ ನಕ್ಸಲ್ ಚಳುವಳಿಯ ಹೆಜ್ಜೆಗಳ ಮೆಲುಕು
State News

ವಿಕ್ರಮ್ ಗೌಡ ನಕ್ಸಲ್ ಚಳುವಳಿಯ ಹೆಜ್ಜೆಗಳ ಮೆಲುಕು

Share
Share

ಕರ್ನಾಟಕದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಮಾವೋವಾದಿ ನಾಯಕ ವಿಕ್ರಮ್ ಗೌಡ 40 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಬಡ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಮಿಡ್ಲ್ ಸ್ಕೂಲ್‌ ಕೂಡ ಪೂರ್ತಿ ಮಾಡುವ ಮುನ್ನವೇ ತಮ್ಮ ಕುಟುಂಬವನ್ನು ಪೋಷಿಸಲು ಚಿಕ್ಕವಯಸ್ಸಿನಲ್ಲಿ ಹೋಟೆಲ್ ಕೆಲಸದಲ್ಲಿ ಬಾಲ ಕಾರ್ಮಿಕರಾಗಿ ಮಾರ್ಪಟ್ಟರು.

ವಿಕ್ರಂ ಗೌಡ ತನ್ನ ಕಡು ಬಡತನದ ಕುಟುಂಬವನ್ನು ಪೋಷಿಸಲು ಹೆಬ್ರಿಯ ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ಕಾರ್ಮಿಕ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆಗಲೇ ಭುಗಿಲೇಳುತ್ತಿದ್ದ ಜನರ ಚಳುವಳಿಗಳಿಂದ ಮತ್ತು ಅವುಗಳಿಗೆ ನಾಯಕತ್ವ ವಹಿಸುತ್ತಿದ್ದ ಸಿಪಿಐ (ಎಂಎಲ್) ಪೀಪಲ್ಸ್ ವಾರ್ ಪಕ್ಷದ ರಾಜಕೀಯದಿಂದ ಪ್ರಭಾವಿತರಾಗಿದ್ದರು. ಕ್ರಮೇಣವಾಗಿ ವಿಕ್ರಮ್ ಗೌಡ್ಲು ತನ್ನ ಸುತ್ತಮುತ್ತಲಿನ ಆದಿವಾಸಿಗಳ ಬದುಕು ಎಷ್ಟು ದಾರುಣವಾಗಿದೆ ಎಂಬುದನ್ನು ಗಮನಿಸಿದರು. ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಆಳುವವರ್ಗಗಳ ಅಪರಾಧವನ್ನು ಗ್ರಹಿಸಿದರು. ಆ ಹಿನ್ನೆಲೆಯಲ್ಲಿ ಅವರು ಆದಿವಾಸಿಗಳ ಸ್ವಾಯತ್ತತೆಗಾಗಿ ಕೂಡ ಕೆಲಸ ಮಾಡಿದರು. ಅದೇ ಸಮಯದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವಿರುದ್ಧ ತಿರುಗಿಬಿದ್ದ ಆದಿವಾಸಿಗಳ ಬಂಡಾಯವನ್ನು ಮುನ್ನಡೆಸಿದರು. ಅದೇ ಕ್ರಮದಲ್ಲಿ ಅವರು ತೀವ್ರ ಪೊಲೀಸ್ ನಿರ್ಬಂಧಗಳನ್ನು ಎದುರಿಸಿದರು.

ಕಬ್ಬಿನಾಲೆ, ನಾಡ್ಪಾಲು, ಮುಟ್ಲುಪಾಡಿ ಮುಂತಾದ ಪ್ರದೇಶಗಳಲ್ಲಿ ಪ್ರಜಾ ಚಳುವಳಿಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ವಿಕ್ರಮ್ ಗೌಡನ ಬೇಟೆ ಆರಂಭಿಸಿದ್ದರು. ಆದುದರಿಂದ ಸಿಪಿಐ (ಮಾವೋವಾದಿ) ಪಕ್ಷಕ್ಕೆ ಸೇರಿ ಭೂಗತರಾಗಿ ಹಲವು ಜನಪರ ಹೋರಾಟಗಳಿಗೆ ನೇತೃತ್ವ ವಹಿಸಿದ್ದರು. ಇದೇ ವೇಳೆ ವಿಕ್ರಮಗೌಡನ ಮನೆ ಮೇಲೆ ಪೊಲೀಸರು ಆಗಾಗ ದಾಳಿ ನಡೆಸಿ ಭಯ ಭೀತಿ ವಾತಾವರಣವನ್ನು ಸೃಷ್ಟಿಸಿದ್ದರು. ತಾಯಿ ಗುಲಾಬಿ ಗೌಡ್ಲು ಹಾಗೂ ಸಹೋದರ ಸುರೇಶ್ ಗೌಡ್ಲು ಅವರಿಗೆ ಹಲವು ರೀತಿಯಲ್ಲಿ ಕಿರುಕುಳ ನೀಡಲಾಗಿತ್ತು. ಅದನ್ನು ಸಹಿಸಲಾರದೆ ವಿಕ್ರಮ್ ಗೌಡ ಅವರ ಸಹೋದರ ಮುದ್ರಾಡಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಅವರು ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸಲು ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದರು. ಕೆಲವೇ ಸಮಯದಲ್ಲಿ ವಿಕ್ರಮ ಗೌಡ್ಲು ಅವರ ತಾಯಿ ಗುಲಾಬಿ ಗೌಡ್ಲು ನಿಧನರಾಗಿದ್ದರು.

ನೇತ್ರಾವತಿ ದಳದ ಮುಖಂಡರಾಗಿ ವಿಕ್ರಮ ಗೌಡ ಜವಾಬ್ದಾರಿ ವಹಿಸಿ ಸಾವಿರಾರು ಜನರನ್ನು ಚಳವಳಿಯ ಹಾದಿಗೆ ಕರೆದೊಯ್ದರು. 20 ವರ್ಷಗಳಿಂದ ವಿಕ್ರಮ್ ಗೌಡನನ್ನು ಕೊಲ್ಲಲು ಪೊಲೀಸರು ನಡೆಸಿದ ಹಲವಾರು ಪ್ರಯತ್ನಗಳು ವಿಫಲವಾದವು. ಸರ್ಕಾರ ಕೈಗೊಂಡಿರುವ ನಕ್ಸಲೀಯರ ಶರಣಾಗತಿ ಕಾರ್ಯಕ್ರಮವನ್ನು ವಿಕ್ರಮ್ ಗೌಡ್ಲು ತೀವ್ರವಾಗಿ ವಿರೋಧಿಸಿದ್ದು ಮಾತ್ರವಲ್ಲದೆ ಕರ್ನಾಟಕದ ಹಲವೆಡೆ ಇಂತಹ ಶರಣಾಗತಿ ಕಾರ್ಯಕ್ರಮದ ವಿರುದ್ಧ ಪ್ರಚಾರ ಮಾಡಿದರು.

ಪಶ್ಚಿಮಘಟ್ಟಗಳ ಅರಣ್ಯಗಳಲ್ಲಿ ದೊಡ್ಡ ಪ್ರಮಾಣದ ಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದ್ದರೂ ವಿಕ್ರಮ್ ಗೌಡ್ಲು ಕೇರಳದಿಂದ ಕರ್ನಾಟಕದವರೆಗೆ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿದರು. ಕರ್ನಾಟಕದಲ್ಲಿ ಮತ್ತೆ ಜನಾಂದೋಲನಗಳನ್ನು ಕಟ್ಟುವ ಪ್ರಯತ್ನದಲ್ಲಿ ನವೆಂಬರ್ 18ರ ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ತಮ್ಮ 44ನೇ ವಯಸ್ಸಿನಲ್ಲಿ ಹತ್ಯೆಗೀಡಾದರು. ಇನ್ನು ಪೊಲೀಸರು ಹೇಳುತ್ತಿರುವ ವಿಕ್ರಮ್ ಗೌಡ್ಲು ಎನ್‌ಕೌಂಟರ್ ಕಥೆಯ ಸತ್ಯಾಸತ್ಯತೆ ಸತ್ಯಶೋಧನೆಯ ಮೂಲಕ ಬಹಿರಂಗವಾಗಬೇಕಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

127 K.G ಚಿನ್ನದ ಕಳ್ಳಿ ರನ್ಯಾರಾವ್ ಗೆ 102 ಕೋಟಿ ದಂಡ

ಚಿಕ್ಕಮಗಳೂರು: ಚಿಕ್ಕಮಗಳೂರು ಮೂಲದ ಚಿತ್ರನಟಿ ರನ್ಯಾ ರಾವ್ ವಿದೇಶದಿಂದ 127ಕೆ,ಜಿ,ಚಿನ್ನ ಕದ್ದು ತಂದು ಕಂದಾಯ ಗುಪ್ತಚರ...

ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ದಿಢೀರ್‌ ಕುಸಿತ

ಬೆಂಗಳೂರು: ಮಳೆ, ಮೋಡ ಕವಿದ ವಾತಾವರಣ ಮತ್ತು ರೋಗಬಾಧೆಯಿಂದ ಗುಣಮಟ್ಟ ಕಳೆದು ಕೊಳ್ಳುತ್ತಿರುವ ಟೊಮೆಟೊ ಧಾರಣೆ...

ಕೇಂದ್ರ ಸರ್ಕಾರದ ಅನುದಾನ ಹಾಗೂ ತೆರಿಗೆ ಪಾಲು ಕುರಿತು ನಮ್ಮ ಸರ್ಕಾರ ‘ಶ್ವೇತಪತ್ರ’ ಪತ್ರ

ವಿಧಾನಸಭೆ:  ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು...

ಮಟ್ಟು ಔಟ್- ಶಿವಕುಮಾರ್ ಇನ್- ಆರತಿ ಸ್ಟ್ರಾಂಗ್- ಜಕ್ಕಣ್ಣ ಒಕೆ

ಬೆಂಗಳೂರು: ವಿಧಾನ ಪರಿಷತ್ ಗೆ ನಾಲ್ವರನ್ನು ನೇಮಕ ಮಾಡಿ ಎರಡು ತಿಂಗಳ ಹಿಂದೆ ರಾಜ್ಯಪಾಲರ ಬಳಿ...