Home Latest News ಭೂ ಪರಿವರ್ತನೆಗೆ ಹೊಸ ರೂಲ್ಸ್ : ಸಾರ್ವಜನಿಕರಿಗೆ ಕಷ್ಟ ಕಷ್ಟ
Latest News

ಭೂ ಪರಿವರ್ತನೆಗೆ ಹೊಸ ರೂಲ್ಸ್ : ಸಾರ್ವಜನಿಕರಿಗೆ ಕಷ್ಟ ಕಷ್ಟ

Share
Share

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಭೂಪರಿವರ್ತನೆ (ಸೈಟ್) ಮಾಡಿಸಲು ಕಂದಾಯ ಇಲಾಖೆ,ಯೋಜನಾ ಇಲಾಖೆ ಎನ್,ಒ,ಸಿ ( no due certificate) ಪಡೆದರೆ ಸಾಕಿತ್ತು. ಇತ್ತೀಚೆಗೆ ಅರಣ್ಯ ಇಲಾಖೆಯ ಎನ್, ಒ,ಸಿ ಕೂಡಾ ಪಡೆಯಬೇಕು ಎಂದು ಅರಣ್ಯ ಸಚಿವರ ಸೂಚನೆ ಮೇರೆಗೆ ಭೂಪರಿವರ್ತನೆಗೆ ರೈತರು ಮತ್ತು ಬಡ ಜನರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಜನತೆ ದೂರ ತೊಡಗಿದ್ದಾರೆ.

ಕೇರಳದ ವೈನಾಡಿನಲ್ಲಿ ಮತ್ತು ರಾಜ್ಯದ ಕೆಲವು ಕಡೆ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಅರಣ್ಯ ಸಚಿವರ ಸೂಚನೆ ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ. ಅಧಿಕಾರ ವಿಕೇಂದ್ರೀಕರಣ ಮಾಡುವ ಬದಲು ರೈತರು ಅದರಲ್ಲೂ ಬಡವರು ಇಲಾಖೆಯ ಕಛೇರಿ ಅಲೆದು ಅವರ ಬೇಕು ಬೇಡಗಳನ್ನು ಪುರೈಸುವುದರಲ್ಲಿ ಮನೆ ಕಟ್ಟುವುದಿರಲಿ ಗುಡಿಸಲಿನ್ನು ಕಟ್ಟಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕಂದಾಯ ಇಲಾಖೆ ಮಾತೃ ಇಲಾಖೆ ಇಲ್ಲಿಯೇ ಎಲ್ಲಾ ಮಾಹಿತಿ ಸಿಗುತ್ತದೆ ಮತ್ತೆ ಅರಣ್ಯ ಇಲಾಖೆಯ ಎನ್,ಒ,ಸಿ ಪಡೆಯುವುದು ಏಕೆ ? ಸ್ಥಳೀಯ ಗಾರ್ಡ್ ಬಳಿ ನಂತರ ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಧಿಕಾರಿ ಬಳಿ ಎನ್,ಒ,ಸಿ ಪಡೆಯಲು ಐದಾರು ಜೊತೆ ಚಪ್ಪಲಿ ಸವೆದು ಹೋಗುತ್ತವೆ ಅಂಗಿ ಜೇಬು ಅರಿದು ಹೋಗುತ್ತವೆ ಮತ್ತು ಇದರ ಸಹವಾಸ ಬೇಡ ಎನ್ನುವ ಪರಿಸ್ಥಿತಿ ಬರುತ್ತದೆ ಎಂದು ರೈತ ಮುಖಂಡರಾದ ಗುರುಶಾಂತಪ್ಪ ದೂರಿದ್ದಾರೆ ಅಲ್ಲದೇ ಇಂತಹ ಸೂಚನೆ ಕೂಡಲೇ ವಾಪಸ್ ಪಡೆಯಲು ಒತ್ತಯಿಸಿದ್ದಾರೆ.

ಸಾಮಾನ್ಯ ಜನ ಒಂದು ಅಥವಾ ಎರಡು ಗುಂಟೆ ಮತ್ತು ರೈತರು ತೋಟ ಹೊಲಗಳಲ್ಲಿ ಶೆಡ್ ನಿರ್ಮಾಣ ಮಾಡಲು ಸರ್ಕಾರ ಸಹಾಯ ಧನ ನೀಡುತ್ತದೆ ಇಂತಹ ಸಂದರ್ಭಗಳಲ್ಲಿ ಭೂಪರಿವರ್ತನೆ ಅರ್ಜಿ ಹಿಡಿದು ಬರಲು ತೊಡಕಾಗಿದ್ದು ಜಿಲ್ಲಾಡಳಿತ ಮತ್ತು ಅರಣ್ಯ ಸಚಿವರು ಗಮನಹರಿಸಿ ಕ್ರಮ ಕೈಗೊಳ್ಳದಿದ್ದರೆ ರೈತರಿಗೆ ಮತ್ತು ಬಡಜನರಿಗೆ ಕಷ್ಟ ವಿಕೇಂದ್ರೀಕರಣದ ಜೊತೆಗೆ ಜೇಬು ಹರಿದು ಕೊಳ್ಳುವ ಸ್ಥಿತಿ ನಿರ್ಮಾಣ ಮಾಡಿದಂತೆ ಆಗುತ್ತದೆ .ಜಿಲ್ಲೆಯ ಶಾಸಕರುಗಳು ವಿರೋಧ ಪಕ್ಷದವರು ಮತ್ತು ಹೋರಾಟಗಾರರು ರೈತರ ಮತ್ತು ಬಡ ಜನರ ನೆರವಿಗೆ ಬರಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...