Home ಗೊ.ರು.ಚ ಕಿವಿ ಡಮಾರ್ : ದರ್ಶನ್ ಬಗ್ಗೆ ಹಿರಿಯ ಚೇತನ ಹೇಳಿದ್ದೇನು?
HomeajjampuraLatest Newsnamma chikmagalur

ಗೊ.ರು.ಚ ಕಿವಿ ಡಮಾರ್ : ದರ್ಶನ್ ಬಗ್ಗೆ ಹಿರಿಯ ಚೇತನ ಹೇಳಿದ್ದೇನು?

Share
Share

ಚಿಕ್ಕಮಗಳೂರು :

ಗೊ.ರು.ಚ ಎಂದು ಕರ್ನಾಟಕದ ಲ್ಲಿ ಮನೆ ಮಾತಗಿರುವ ಜನಪದ ಸಾಹಿತಿ ಗೊ.ರು.ಚನ್ನಬಸಪ್ಪನವರು ಇತ್ತೀಚಿನ ಸಭೆಯೊಂದರಲ್ಲಿ ಮಾತನಾಡುತ್ತಾ ನನ್ನ ಕಿವಿ ಕೇಳದಂತೆ ಆಗಲು ನಟ ದರ್ಶನ್ ಅಭಿಮಾನಿಗಳು ಕಾರಣ ಎಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಗೊಂಡೇದಹಳ್ಳಿ ಗ್ರಾಮದ ಚನ್ನಬಸಪ್ಪ ಶಿಕ್ಕಕರಾಗಿ ವೃತ್ತಿ ಆರಂಭಿಸಿ ಜನಪದ ಪ್ರಾಕಾರದಲ್ಲಿ ಪಾಂಡಿತ್ಯ ಹೊಂದಿರುವ ಹಿರಿಯ ಜೀವ.
1967 ರಲ್ಲಿ ತರೀಕೆರೆಯಲ್ಲಿ “ವಿಶ್ವ ಜಾನಪದ” ಸಮ್ಮೇಳನವನ್ನು ಜನಪದ ವಿಶ್ಲೇಷಕರಾದ ದಿವಂಗತ ಕೆ.ಆರ್.ಲಿಂಗಪ್ಪನವರ ಜೊತೆಗೂಡಿ ಅಯೋಜಿಸಿದವರು.ಸಮ್ಮೇಳನದ ವಿಶೇಷತೆಗಾಗಿ “ಹೊನ್ನ ಬೀತ್ತೇವು ಹೊಲಕ್ಕೆಲ್ಲಾ” ಎಂಬ ಅಕರ ಗ್ರಂಥ ಹೊರತಂದಿದ್ದರು.
ಶಿಕ್ಷಣ ಇಲಾಖೆ,ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸಿದರ ಜೊತೆಗೆ “ಕನ್ನಡ ಸಾಹಿತ್ಯ ಪರಿಷತ್ತು” ರಾಜ್ಯಧ್ಯಕ್ಷರಾಗಿ.ಶರಣ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷರಾಗಿ ಸಂಘಟನ ಚತುರರಾದವರು.ಇಳಿ ವಯಸ್ಸಿನಲ್ಲೂ ಹರಳು ಉರಿದಂತೆ ಮಾತನಾಡುವ ಚನ್ನಬಸಪ್ಪನವರಿಗೆ ರಾಜ್ಯ ಮಟ್ಟದ ಆನೇಕ ಪ್ರಶಸ್ತಿಗಳು ದೊರಕಿವೆ.
ರಾಜರಾಜೇಶ್ವರಿ ನಗರದಲ್ಲಿ ನಟ ದರ್ಶನ್ ಮನೆಯ ಬಳಿ ಚನ್ನಬಸಪ್ಪನವರ ಮನೆ ಇದೆ ಪ್ರತಿವರ್ಷ ನಡೆಯುವ ಹುಟ್ಟು ಹಬ್ಬಕ್ಕೆ ಬರುವ ಅಭಿಮಾನಿಗಳು ಸಿಡಿಸುವ ಸಿಡಿಮದ್ದುಗಳಿಂದಾಗಿ ಕಿವಿ ಕೇಳಿಸದಂತೆ ಆಗಿದೆ ಎಂದರೆ ಇನ್ನೂ ಬೇರೆಯವರಿಗೆ ಎಷ್ಟು ಅನಾಹುತ ಆಗಿರಬಹುದು .

ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿಮಾನಿಗಳ ಬಂಡತನ ಇನ್ನೂ ಕಡಿಮೆ ಆಗಿಲ್ಲ ಎಂಬುದಕ್ಕೆ ಇದು ಮತ್ತೊಂದು ಕಾರಣ ಎನ್ನಬಹುದು. ಆಸ್ಪತ್ರೆ ಜನ ವಸತಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುವ ಹುಚ್ಚು ಅಭಿಮಾನ ಇಂತಹ ಅನಾಹುತಗಳಿಗೆ ಕಾರಣ ಆಗಿ ದರ್ಶನ್ ಬಗ್ಗೆಯೂ ಮತ್ತಷ್ಟು ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿರಿವುದಂತು ಸತ್ಯ

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....