Home namma chikmagalur Tarikere Tiger walking:ಕೆಮ್ಮಣ್ಣುಗುಂಡಿ ಸುತ್ತ ಮುತ್ತ ಹುಲಿ ವಾಕಿಂಗ್ 
Tarikere

Tiger walking:ಕೆಮ್ಮಣ್ಣುಗುಂಡಿ ಸುತ್ತ ಮುತ್ತ ಹುಲಿ ವಾಕಿಂಗ್ 

Share
Share

ಚಿಕ್ಕಮಗಳೂರು: ರಾಜ್ಯದ ಪ್ರಸಿದ್ಧ ಗಿರಿಧಾಮ ಕೆಮ್ಮಣ್ಣುಗುಂಡಿ ಸುತ್ತ ಮುತ್ತ ಹುಲಿ ಮತ್ತು ಕರಡಿ ಓಡಾಟದಿಂದ ಜನರಿಗೆ ಭಯ ಶುರುವಾಗಿದೆ.

ಕಳೆದ ಒಂದು ತಿಂಗಳಿಂದ ಹುಲಿ ರಾಜಾ ರೋಷವಾಗಿ ಸಂಜೆ ಆರರಿಂದ ಎಂಟು ಗಂಟೆವರೆಗೆ ಮತ್ತುಬೆಳಗ್ಗೆ ಏಳೆಂಟು ಗಂಟೆಯವರೆಗೆ ರಸ್ತೆ ಅಕ್ಕ ಪಕ್ಕ ಓಡಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಕೆಮ್ಮಣ್ಣುಗುಂಡಿ, ಕಲ್ಲತ್ತಿಪುರ,ಕೇಶವಮೂರ್ತಿ ಎಸ್ಟೇಟ್ ಮತ್ತು ಸಣ್ಣಖಾನ್ ಎಸ್ಟೇಟ್ ಸುತ್ತಮುತ್ತಲಿನಲ್ಲಿ ಹುಲಿ ಓಡಾಡುತ್ತಿದೆ ಕಳೆದ ಮೂರು ದಿನಗಳ ಹಿಂದೆ ಕೆಮ್ಮಣ್ಣುಗುಂಡಿ ಐ,ಬಿ ಸಮೀಪ ಒಂದು ಗಂಟೆಗಳ ಕಾಲ ಓಡಾಟ ನಡೆಸಿದೆ.

ಈ ಬಗ್ಗೆ ಕೆಮ್ಮಣ್ಣುಗುಂಡಿ ರಾಜಭವನದ ನೌಕರರನ್ನು ಕೇಳಿದರೆ ಭದ್ರ ಅಭಯಾರಣ್ಯ ವಾಗಿರುವುದರಿಂದ ಪ್ರಾಣಿಗಳ ಓಡಾಟ ಸಹಜ ಎನ್ನುತ್ತಾರೆ.

ಹುಲಿ ಐದಾರು ದನಗಳ ಶಿಕಾರಿ ಮಾಡಿದೆ ಮನುಷ್ಯರ ತಂಟೆ ಬಂದಿಲ್ಲ ನಿಜ ಒಮ್ಮೆ ಮನುಷ್ಯನ ರಕ್ತ ನೋಡಿದರೆ ಕಷ್ಟ ಹೆಚ್ಚು ಕಡಿಮೆಯಾದರೆ ಯಾರು ಜವಬ್ದಾರರು ಅರಣ್ಯ ಇಲಾಖೆ ಗಮನಕ್ಕೆ ತಂದರು ನಮಗೂ ಇದಕ್ಕೂ ಸಂಭಂಧವಿಲ್ಲ ಎನ್ನುವಂತೆ ಇರುವುದನ್ನು ನೋಡಿದರೆ ಅರಣ್ಯ ಇಲಾಖೆ ಹುಲಿ ತಂದು ಬಿಟ್ಟಿರಬಹುದು ಎಂಬ ಅನುಮಾನವಿದೆ ಎನ್ನುತ್ತಾರೆ.

ಹುಲಿ ಜೊತೆಗೆ ಕರಡಿ ಕಾಟ ಶುರುವಾಗಿದ್ದು ಕಲ್ಲತ್ತಿಪುರ ಗುಡ್ಡದಲ್ಲಿ ಕರಡಿ ಅಗಾಗ್ಗೆ ಕಾಣಿಸಿಕೊಂಡು ಭಯ ತರುತ್ತಿದೆ ಎಂದು ಜನ ದೂರುತ್ತಿದ್ದಾರೆ.

ಪ್ರತಿನಿತ್ಯ ವಾಕಿಂಗ್ ಬರುವ ಹುಲಿಯನ್ನು ಟೈಗರ್ ಪ್ರಾಜೆಕ್ಟ್ ಒಳಗಡೆ ಬಿಡಲು ಒತ್ತಯಿಸಿದ್ದಾರೆ.

Tiger walking around Kemmanugundi

Share

Leave a comment

Leave a Reply

Your email address will not be published. Required fields are marked *

Don't Miss

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿಯಾಗಿವೆ ಎಂದು ಭಾರತ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ...

ರಸ್ತೆ ಅಪಘಾತದಲ್ಲಿ ಬೈಕ್ ಸಾವಾರನ ಸಾವು

ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೃತರನ್ನು 21 ವರ್ಷದ ಗೋಕುಲ್ ಎಂದು...

Related Articles

ಶ್ರೀಗಂಧದ ಪರಿಮಳಕ್ಕೆ ಬೆಂಕಿ-ನೊಂದ ರೈತರಿಗೆ ದಿಕ್ಕು ಯಾರು ?

ತರೀಕೆರೆಯಲ್ಲಿ ಪಾಳು ಬಿದ್ದಿರುವ ಶ್ರೀಗಂಧದ ಕೋಟೆ   ತರೀಕೆರೆ: ಶ್ರೀಗಂಧ ಬೆಳೆದ ರೈತರ ಬದುಕಿಗೆ ಬೆಂಕಿ...

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಎ.ಎಸ್.ಶಂಕರ್ ನಾರಾಯಣ್

ತರೀಕೆರೆ: ತರೀಕೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಂಗಳೂರು ಆಕಾಶ ವಾಣಿ ಕಾರ್ಯಕ್ರಮ ನಿರ್ದೇಶಕರಾದ ಡಾ.ಎ.ಎಸ್.ಶಂಕರ್...

ಬದುಕಿದ್ದಾಗಲೇ ಸ್ವತಃ ತನ್ನ ‘ತಿಥಿ’ಗೆ ಅಧಿಕಾರಿಗಳನ್ನು ಆಹ್ವಾನಿಸಿದ ಗಂಧದ ಬೆಳೆಗಾರ

ಚಿಕ್ಕಮಗಳೂರು: ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತ ಬೆಳೆಗಾರನೊಬ್ಬ, ತಾನು ಬದುಕಿರುವಾಗಲೇ ತನ್ನ...

ತರೀಕೆರೆಯ ಸಿರಿಗೆ “ಚಿನ್ನ”ದ ಪದಕ

ತರೀಕೆರೆ: ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಪ್ರತಿ ವರ್ಷ ಪ್ರಥಮ  ರ್ಯಂಕ್ ಗೆ ಕೊಡಮಾಡುವ ಚಿನ್ನದ...