ಚಿಕ್ಕಮಗಳೂರು: ನಕ್ಸಲ್ ರವೀಂದ್ರ ವಾರದೊಳಗೆ ಮುಖ್ಯವಾಹಿನಿಗೆ ಸೇರುವುದು ಖಚಿತ ಎಂದು ನ್ಯೂಸ್ ಕಿಂಗ್ ಜನವರಿ 28 ರಂದು ಖಚಿತ ಮಾಹಿತಿ ನೀಡಿತ್ತು.
ರವೀಂದ್ರ ಇಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಮುಂದೆ ಮುಖ್ಯವಾಹಿನಿಗೆ ಸೇರುವುದರೊಂದಿಗೆ ಮಲೆನಾಡಿನ ಕೊನೆಯ ನಕ್ಸಲ್ ಕಾಡಿನಿಂದ ನಾಡಿಗೆ ಹೆಜ್ಜೆ ಇಟ್ಟಂತಾಗುವುದರೊಂದಿಗೆ ಕೆಂಪು ಸೇನೆಯ ಕೊನೆಯ ವಿಕೆಟ್ ಉರುಳಿದ್ದು ನಕ್ಸಲ್ ನಾಡು ಎಂಬ ಹಣೆಪಟ್ಟಿಯಿಂದ ಹೊರ ಬರುತ್ತದೆ ಎಂದು ಮುಖ್ಯವಾಹಿನಿಗೆ ಬರುವ ಬಗ್ಗೆ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.
ಶೃಂಗೇರಿ ಸಮೀಪದ ಕಿಗ್ಗ ಬಳಿ ಇರುವ ಕೋಟೆ ತೋಟದ ಹೊಲಗಾರು ಬಯಲಿನ ರವೀಂದ್ರ ಅತ್ಯಂತ ಸೂಕ್ಷ್ಮ ,ನಕ್ಸಲ್ ಗೆ ಬೇಕಾದ ಎಲ್ಲಾ ಪಟ್ಟುಗಳಲ್ಲೂ ಎಕ್ಸ್ ಫರ್ಟ್ ಎನ್ನಲಾಗಿದ್ದು ಮಲೆನಾಡಿನ ಇಂಚು,ಇಂಚು ಮಾಹಿತಿ ಹೊಂದಿದ್ದವ ಕಾಡಿನಿಂದ ನಾಡಿಗೆ ಬರುವದರೊಂದಿಗೆ ನಕ್ಸಲ್ ಚಟುವಟಿಕೆ ಕೊನೆಯಾಗಲಿದೆ.
ರವೀಂದ್ರನ ಮೇಲೆ 14 ದೂರುಗಳಿದ್ದು ಕಳೆದ ಒಂದು ದಶಕದಿಂದ ಯಾರಿಗೂ ಸಿಗದ ಇದ್ದ ರವೀಂದ್ರನನ್ನು ಮುಖ್ಯವಾಹಿನಿಗೆ ತರುವಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆಯ ಶ್ರಮಕ್ಕೆ ಮೆಚ್ಚಬೇಕು.
The last weapon of the Red Army Ravindra from the forest to the country.
Leave a comment