ಚಿಕ್ಕಮಗಳೂರು: ಸಮಸ್ತ ಕಾರ್ಮಿಕ ವರ್ಗಕ್ಕೆ ವಿರೋಧಿ ಕಾಯ್ದೆ ಅನುಷ್ಟಾನಗೊಳಿಸಲು ಮುಂದಾಗುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಫೆ.೧೨ ರಂದು ಜಿಲ್ಲೆಯಲ್ಲಿ ಬೃಹತ್ ಪ್ರತಿ ಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮ ರಾಜ್ ಹೇಳಿದರು.
ನಗರದ ತಮಿಳು ಕಾಲೋನಿಯಲ್ಲಿ ಜಿಲ್ಲಾ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ಸ್ ವತಿಯಿಂದ ಗುರು ವಾರ ಆಯೋಜಿಸಿದ್ಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರದ ಕಾರ್ಮಿಕ ವಿರೋಧಿ ನಡೆಯನ್ನು ಖಂಡಿಸಿ ಪ್ಲಾಂಟೇಷನ್ ವರ್ಕರ್ಸ್, ರೈತ ಸಂಘ ಸೇರಿದಂ ತೆ ಸುಮಾರು ೧೦ಕ್ಕೂ ಹೆಚ್ಚು ಸಂಘಟನೆಗಳ ನೇತೃತ್ವದಲ್ಲಿ ಆಯಾ ತಾಲ್ಲೂಕಿನ ಕೇಂದ್ರ ಸರ್ಕಾರದ ಕಚೇರಿ ಮುಚ್ಚಿಸುವ ಮೂಲಕ ಕಾರ್ಮಿಕ ವರ್ಗವು ದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದರು.
ಕಾರ್ಮಿಕರಿಗೆ ಅನುಕೂಲವಾಗಲು ಮೊದಲು ಕಾಯ್ದೆಗಳು ಅನುಕೂಲವಿತ್ತು. ಇದೀಗ ಕಾರ್ಮಿಕ ಕಾ ಯ್ದೆಯಲ್ಲಿ ನಾಲ್ಕು ಕೋರ್ಡ್ಗಳನ್ನು ರಚಿಸುವ ಮೂಲಕ ಕಾರ್ಮಿಕರ ಸವಲತ್ತಿಗೆ ಕತ್ತರಿ ಹಾಕುವ ಕೆಲಸ ಕೇ ಂದ್ರ ಮಾಡುತ್ತಿದೆ. ಇದು ದೇಶದ ಬಹುತೇಕ ಕಾರ್ಮಿಕರಿಗೆ ಪೆಟ್ಟು ಬೀಳಲಿದೆ ಎಂದು ಹೇಳಿದರು.
ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗದ ತೋಟದ ಕಾರ್ಮಿಕರಿಗೆ ಆರೋಗ್ಯ ಸಮ ಸ್ಯೆ ಕಂಡುಬಂದಲ್ಲಿ ತೋಟದ ಮಾಲೀಕರೇ ನಿರ್ವಹಿಸುತ್ತಿದ್ದರು. ಈ ಹೊಸ ಕಾಯ್ದೆಯಿಂದ ಇಎಸ್ಐ ಮಾ ಡಿಸಬೇಕು. ಎಲ್ಲಿ ವೈದ್ಯಕೀಯ ಸೇವೆ ಲಭ್ಯವಿದೆ ಅಲ್ಲಿಯೇ ತೆರಳಿ ಚಿಕಿತ್ಸೆ ಕೊಡಿಸಬೇಕಿದೆ. ತೋಟ ಮಾಲೀಕ ರು ಒಮ್ಮೆ ಇಎಸೈ ಹಣ ಪಾವತಿಸಿ ಸುಮ್ಮನಾಗುತ್ತಾರೆ ಎಂದರು.
ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆ ತಂದೊಡ್ಡುವ ಮೂಲಕ ಕಾರ್ಪೋರೇಟ್ ಕಂಪನಿಗೆ ಲಾಭ ಮಾ ಡಿಕೊಡುತ್ತಿದೆ. ತಳಮಟ್ಟದ ಸಂಬಳವೆಂದರೆ ಕನಿಷ್ಟ ೧೭೦ ರೂ.ಗಳಿಗೆ ತಂದಿಳಿಸುವ ಕೆಲಸ ಮಾಡುತ್ತಿದೆ. ಪ್ರಸ್ತುತ ಒಂದು ಕುಟುಂಬವು ಪ್ರತಿದಿನ ಕನಿಷ್ಟ ೭೦೦-೮೦೦ ದುಡಿಯುವ ಅವಶ್ಯಕತೆಯಿದ್ದು, ಈಗಾಗಲೇ ಕಾರ್ಮಿಕರು ಕೇವಲ ೫೦೦ ರೂ. ಹಂತದಲ್ಲಿದ್ದು ಬಾಕಿ ಹಣ ಸಾಲ ಮಾಡಬೇಕಿದೆ ಎಂದು ಹೇಳಿದರು.
ಒಟ್ಟಾರೆ ಕಾರ್ಮಿಕರ ವಿರೋಧಿ ಕಾಯ್ದೆ ಸಂಬಂಧ ಯೂನಿಯನ್ ಹಾಗೂ ತೋಟದ ಮಾಲೀಕರೊ ಂದಿಗೆ ಚರ್ಚೆ ನಡೆಯುತ್ತಿದೆ. ಈ ರೀತಿಯ ಕಾರ್ಮಿಕ ವಿರೋಧಿ ಕಾಯ್ದೆಗೆ ಮನ್ನಣೆ ನೀಡದಂತೆ ಒತ್ತಾಯಿಸ ಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಜಿ.ರಮೇಶ್, ವಿಭಾಗೀಯ ಅಧ್ಯಕ್ಷ ಡೊಂಗ್ರೆ, ಹಾಸನ ಕಾರ್ಯದರ್ಶಿ ಬಸವರಾಜ್, ಸಕಲೇಶಪುರ ಕಾರ್ಯದರ್ಶಿ ಹರೀಶ್, ಸಿಪಿಐ ಮು ಖಂಡರಾದ ರಾಧಾಸುಂದ್ರೇಶ್ ಉಪಸ್ಥಿತರಿದ್ದರು.
The central government is unfair to the working class.
Leave a comment