Home ಸಿದ್ದರಾಮ ಜಯಂತಿಯೋ ! – ಶ್ರೀನಿವಾಸನ ಬಹುಪಾರಕ್ ?
HomeLatest Newsnamma chikmagalurTarikere

ಸಿದ್ದರಾಮ ಜಯಂತಿಯೋ ! – ಶ್ರೀನಿವಾಸನ ಬಹುಪಾರಕ್ ?

Share
Share

ಅಜ್ಜಂಪುರ: ನೊಳಂಬ ವೀರಶೈವ ಲಿಂಗಾಯತ ಸಮಾಜದವರು ಪ್ರತಿ ವರ್ಷವೂ ಜನವರಿ 14 ಮತ್ತು 15 ರಂದು ಶ್ರೀ ಸಿದ್ದರಾಮೇಶ್ವರರ ಜಯಂತಿ ಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಚರಿಸುತ್ತಾರೆ. ಇದರಲ್ಲಿ ಲಕ್ಷಂತರ ಜನರು ಸೇರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಮಾಜಿ ಶಾಸಕ ಎಸ್.ಎಂ.ನಾಗರಾಜ್ ರ ಮೂಗಿನ ನೇರಕ್ಕೆ ನಡೆಯುತ್ತದೆ ಇವರ ಕುಟುಂಬದವರು ವೇದಿಕೆ ಮೇಲೆ ಇರುತ್ತಾರೆ.ಇದರಿಂದ ಬಹಳ ಜನರಿಗ ನೋವಾಗಿದೆ.ಇದರ ಬಗ್ಗೆ ಪ್ರತಿಭಟಿಸದೆ ಅವರನ್ನು ಹಾಡಿ ಹೊಗಳಿದವರು ಮತ್ತೊಂದು ಜಯಂತಿ ಮಾಡುವ ನೆಪದಲ್ಲಿ ಶ್ರೀನಿವಾಸ್ ಗೆ ಬೌಪರಾಕ್ ಹೇಳಲು ಸೊಲ್ಲಾಫುರದಲ್ಲಿ ತಯಾರಿ ನಡೆಸಿದ್ದಾರೆ.

ಈ ವರ್ಷ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜಯಂತಿ ನಡೆಯುತ್ತಿದ್ದು ಇದಕ್ಕೆ ಪರ್ಯಾಯವಾಗಿ ಸೊಲ್ಲಾಪುರದಲ್ಲೂ ಜಯಂತಿ ನಡೆಸಲು ಹೊರಟಿರುವವರು ಗ್ಯಾಸ್ ರಾಜಪ್ಪ ಮತ್ತು ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶಿವಾನಂದಸ್ವಾಮಿ, ಇಬ್ಬರು ಎಸ್.ಎಂ.ನಾಗರಾಜರ ಕಾಲಾಳುಗಳಾಗಿ ಹೊಗಳಿ, ಹೊಗಳಿ ಇಟ್ಟಿದ್ದವರು. ಸಿದ್ದರಾಮ ಜಯಂತಿ ನೆಪದಲ್ಲಿ ಶ್ರೀನಿವಾಸ್ ಉತ್ಸವ ನಡೆಸಲು ಹಾತೊರಿಯುತ್ತಿದ್ದಾರೆ ಎಂದು ಜನರಾಡಿ ಕೊಳ್ಳತ್ತಿದ್ದಾರೆ.

ಗ್ಯಾಸ್ ಏಜೆನ್ಸಿಗೆ ಸಂಬಂಧಿಸಿದಂತೆ ರಾಜಪ್ಪನನ್ನು ಅಣಿಯಲು ನೋಡಿದಾಗ ಅವರ ಬೆಂಬಲಕ್ಕೆ ನಿಂತವರ ಮರೆತು ನಾಗರಾಜ್ ಜೊತೆಗೆ ಸೇರಿಕೊಂಡವರು ಇನ್ನೂ ಶಿವಾನಂದಸ್ವಾಮಿ ನಾಗರಾಜ್ ಎಂದರೆ ಸಮಾಜದ ಜೀವಾ ಎನ್ನುತ್ತಿದ್ದವರು ಏಕಾಏಕಿ ಈಗ ಸಮಾಜ ಕಟ್ಟುವ ಚಟ ಬಂದಿರುವುದು ಮಾತ್ರ ಶ್ರೀನಿವಾಸ್ ಮೆಚ್ಚಿಸಲು ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಸಮಾಜದವರಿಗೆ ನೋವಾದಾಗ ಕದ್ದು ಮುಚ್ಚಿ ಓಡಾಟ ಮಾಡಿದವರು ಕೇವಲ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಮುದ್ರಿಸಿಲ್ಲ ಎಂದು ನಮ್ಮ ಕರೆಯಲಿಲ್ಲ,ಸನ್ಮಾನ ಮಾಡಲಿಲ್ಲ ಎಂಬ ನೆಪ ಮಾಡಿಕೊಂಡು ಇನ್ನೊಬ್ಬರ ಮೆಚ್ಚಿಸುವುದು ಎಷ್ಟರ ಮಟ್ಟಿಗೆ ಸರಿ .ರಾಜಪ್ಪಗೆ ಇಷ್ಟೊಂದು ರೋಷ ಬಂದಿರುವುದು ನೋಡಿದರೆ ಮುಂಬರುವ ಜಿಲ್ಲಾ ಪಂಚಾಯಿತಿಗೆ ಎಸ್.ಎಂ.ನಾಗರಾಜ್ ಮಗ ಲೋಹಿತನ ವಿರುದ್ಧ ಚುನಾವಣೆಗೆ ನಿಂತು ಶೌರ್ಯ ತೋರಿಸಲಿ ಎನ್ನುವವರು ಇದ್ದಾರೆ.ತಿರುಪತಿ ಶ್ರೀನಿವಾಸ್ ಗೆ ಮುಡಿ ಕೊಡಲು ನಿಂತಿದ್ದಾರೆ.

ಎಸ್.ಎಂ.ನಾಗರಾಜ್ ಕೂಡ ಸುರೇಶ್ ಜೊತೆಗೆ ಕೆಲ ವರ್ಷ ಶ್ರೀನಿವಾಸ್ ಜೊತೆಗೆ ಕೆಲ ವರ್ಷ ಕಾಲ ಹಾಕಿ ತನಗೆ ಬೇಕಾದವರ ಹೆಸರು ಬರುವಂತೆ ನೋಡಿಕೊಂಡು ಲಾಭ ಪಡೆದುಕೊಂಡವರು.ಜೊತೆಗೆ ತಾಲ್ಲೂಕಿನಲ್ಲಿ ನೊಳಂಬ ಸಮಾಜ ಕಟ್ಟದೆ ಕೊಟ್ಟ ಮಾತು ಉಳಿಸಿಕೊಳ್ಳದೆ ಪಕ್ಷಾಂತರ ಪ್ರವೀಣ್ ಎಂಬ ಬಿರುದು ಪಡೆದುಕೊಂಡು ರಾಜ್ಯದಲ್ಲಿ ನೊಳಂಬ ಸಮಾಜ ಕಟ್ಟುವ ಬದಲಾಗಿ ಚಿಂದಿ ಮಾಡಿ ಜೇಬು ಭರ್ತಿ ಮಾಡುವ ಕಲೆಗಾರಿಕೆ ನಿಪುಣ .

ಕಷ್ಟದಲ್ಲಿ ಕೊರಗದೆ ಇರುವವರಿಂದ ಸಮಾಜದ ಏಳಿಗೆ ಸಾಧ್ಯವೇ ? ಜಯಂತಿ ಒಂದು ಜನ ಸೇರುವ ಸಂಭ್ರಮ ಇದರಲ್ಲೂ ರಾಜಕೀಯ,ಗುಂಪುಗಾರಿಕೆ, ಹಣ ಕದಿಯುವ ಚಟಗಾರರ ಮಧ್ಯೆ ಸಮಾಜದ ಜೈ ಸಿದ್ದರಾಮ ಕೇಕೆ ಹಾಕಿ ಮನೆ ಸೇರಿಕೊಳ್ಳುತ್ತಾರೆ.

Siddarama Jayanti! – Srinivasan Bauparako?

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...