ಅಜ್ಜಂಪುರ: ನೊಳಂಬ ವೀರಶೈವ ಲಿಂಗಾಯತ ಸಮಾಜದವರು ಪ್ರತಿ ವರ್ಷವೂ ಜನವರಿ 14 ಮತ್ತು 15 ರಂದು ಶ್ರೀ ಸಿದ್ದರಾಮೇಶ್ವರರ ಜಯಂತಿ ಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಚರಿಸುತ್ತಾರೆ. ಇದರಲ್ಲಿ ಲಕ್ಷಂತರ ಜನರು ಸೇರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಮಾಜಿ ಶಾಸಕ ಎಸ್.ಎಂ.ನಾಗರಾಜ್ ರ ಮೂಗಿನ ನೇರಕ್ಕೆ ನಡೆಯುತ್ತದೆ ಇವರ ಕುಟುಂಬದವರು ವೇದಿಕೆ ಮೇಲೆ ಇರುತ್ತಾರೆ.ಇದರಿಂದ ಬಹಳ ಜನರಿಗ ನೋವಾಗಿದೆ.ಇದರ ಬಗ್ಗೆ ಪ್ರತಿಭಟಿಸದೆ ಅವರನ್ನು ಹಾಡಿ ಹೊಗಳಿದವರು ಮತ್ತೊಂದು ಜಯಂತಿ ಮಾಡುವ ನೆಪದಲ್ಲಿ ಶ್ರೀನಿವಾಸ್ ಗೆ ಬೌಪರಾಕ್ ಹೇಳಲು ಸೊಲ್ಲಾಫುರದಲ್ಲಿ ತಯಾರಿ ನಡೆಸಿದ್ದಾರೆ.
ಈ ವರ್ಷ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜಯಂತಿ ನಡೆಯುತ್ತಿದ್ದು ಇದಕ್ಕೆ ಪರ್ಯಾಯವಾಗಿ ಸೊಲ್ಲಾಪುರದಲ್ಲೂ ಜಯಂತಿ ನಡೆಸಲು ಹೊರಟಿರುವವರು ಗ್ಯಾಸ್ ರಾಜಪ್ಪ ಮತ್ತು ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶಿವಾನಂದಸ್ವಾಮಿ, ಇಬ್ಬರು ಎಸ್.ಎಂ.ನಾಗರಾಜರ ಕಾಲಾಳುಗಳಾಗಿ ಹೊಗಳಿ, ಹೊಗಳಿ ಇಟ್ಟಿದ್ದವರು. ಸಿದ್ದರಾಮ ಜಯಂತಿ ನೆಪದಲ್ಲಿ ಶ್ರೀನಿವಾಸ್ ಉತ್ಸವ ನಡೆಸಲು ಹಾತೊರಿಯುತ್ತಿದ್ದಾರೆ ಎಂದು ಜನರಾಡಿ ಕೊಳ್ಳತ್ತಿದ್ದಾರೆ.
ಗ್ಯಾಸ್ ಏಜೆನ್ಸಿಗೆ ಸಂಬಂಧಿಸಿದಂತೆ ರಾಜಪ್ಪನನ್ನು ಅಣಿಯಲು ನೋಡಿದಾಗ ಅವರ ಬೆಂಬಲಕ್ಕೆ ನಿಂತವರ ಮರೆತು ನಾಗರಾಜ್ ಜೊತೆಗೆ ಸೇರಿಕೊಂಡವರು ಇನ್ನೂ ಶಿವಾನಂದಸ್ವಾಮಿ ನಾಗರಾಜ್ ಎಂದರೆ ಸಮಾಜದ ಜೀವಾ ಎನ್ನುತ್ತಿದ್ದವರು ಏಕಾಏಕಿ ಈಗ ಸಮಾಜ ಕಟ್ಟುವ ಚಟ ಬಂದಿರುವುದು ಮಾತ್ರ ಶ್ರೀನಿವಾಸ್ ಮೆಚ್ಚಿಸಲು ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಸಮಾಜದವರಿಗೆ ನೋವಾದಾಗ ಕದ್ದು ಮುಚ್ಚಿ ಓಡಾಟ ಮಾಡಿದವರು ಕೇವಲ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಮುದ್ರಿಸಿಲ್ಲ ಎಂದು ನಮ್ಮ ಕರೆಯಲಿಲ್ಲ,ಸನ್ಮಾನ ಮಾಡಲಿಲ್ಲ ಎಂಬ ನೆಪ ಮಾಡಿಕೊಂಡು ಇನ್ನೊಬ್ಬರ ಮೆಚ್ಚಿಸುವುದು ಎಷ್ಟರ ಮಟ್ಟಿಗೆ ಸರಿ .ರಾಜಪ್ಪಗೆ ಇಷ್ಟೊಂದು ರೋಷ ಬಂದಿರುವುದು ನೋಡಿದರೆ ಮುಂಬರುವ ಜಿಲ್ಲಾ ಪಂಚಾಯಿತಿಗೆ ಎಸ್.ಎಂ.ನಾಗರಾಜ್ ಮಗ ಲೋಹಿತನ ವಿರುದ್ಧ ಚುನಾವಣೆಗೆ ನಿಂತು ಶೌರ್ಯ ತೋರಿಸಲಿ ಎನ್ನುವವರು ಇದ್ದಾರೆ.ತಿರುಪತಿ ಶ್ರೀನಿವಾಸ್ ಗೆ ಮುಡಿ ಕೊಡಲು ನಿಂತಿದ್ದಾರೆ.
ಎಸ್.ಎಂ.ನಾಗರಾಜ್ ಕೂಡ ಸುರೇಶ್ ಜೊತೆಗೆ ಕೆಲ ವರ್ಷ ಶ್ರೀನಿವಾಸ್ ಜೊತೆಗೆ ಕೆಲ ವರ್ಷ ಕಾಲ ಹಾಕಿ ತನಗೆ ಬೇಕಾದವರ ಹೆಸರು ಬರುವಂತೆ ನೋಡಿಕೊಂಡು ಲಾಭ ಪಡೆದುಕೊಂಡವರು.ಜೊತೆಗೆ ತಾಲ್ಲೂಕಿನಲ್ಲಿ ನೊಳಂಬ ಸಮಾಜ ಕಟ್ಟದೆ ಕೊಟ್ಟ ಮಾತು ಉಳಿಸಿಕೊಳ್ಳದೆ ಪಕ್ಷಾಂತರ ಪ್ರವೀಣ್ ಎಂಬ ಬಿರುದು ಪಡೆದುಕೊಂಡು ರಾಜ್ಯದಲ್ಲಿ ನೊಳಂಬ ಸಮಾಜ ಕಟ್ಟುವ ಬದಲಾಗಿ ಚಿಂದಿ ಮಾಡಿ ಜೇಬು ಭರ್ತಿ ಮಾಡುವ ಕಲೆಗಾರಿಕೆ ನಿಪುಣ .
ಕಷ್ಟದಲ್ಲಿ ಕೊರಗದೆ ಇರುವವರಿಂದ ಸಮಾಜದ ಏಳಿಗೆ ಸಾಧ್ಯವೇ ? ಜಯಂತಿ ಒಂದು ಜನ ಸೇರುವ ಸಂಭ್ರಮ ಇದರಲ್ಲೂ ರಾಜಕೀಯ,ಗುಂಪುಗಾರಿಕೆ, ಹಣ ಕದಿಯುವ ಚಟಗಾರರ ಮಧ್ಯೆ ಸಮಾಜದ ಜೈ ಸಿದ್ದರಾಮ ಕೇಕೆ ಹಾಕಿ ಮನೆ ಸೇರಿಕೊಳ್ಳುತ್ತಾರೆ.
Siddarama Jayanti! – Srinivasan Bauparako?
Leave a comment