ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯಾರ ಜಪ್ತಿಗೂ ಸಿಕ್ಕಿಲ್ಲ ಎಂದು ತೀರಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ .ಆದರೆ ಗಾಯತ್ರಿ ಶಾಂತೇಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಎಸ್,ಎಲ್, ಬೋಜೇಗೌಡರ ಜಪ್ತಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ ಇವರ ಜೊತೆಗೆ ಕೋಬ್ರದರ್ ಕಲ್ಯಾಣನ ಜಪ್ತಿ ಬೇರೆ.
ವಿಧಾನ ಸಭಾ ಸದಸ್ಯರಾಗಿ ಇಪ್ಪತ್ತು ತಿಂಗಳು ಮುಗಿಸಿ ಚುನಾವಣೆಗೆ ಮಾಡಿದ ಸಾಲ ತೀರಿಸುತ್ತಲೇ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಶತ ಪ್ರಯತ್ನ ನಡೆಸಿ ಅವರಿವರ ಹೆಸರಿನಲ್ಲಿ ವ್ಯಾಪಾರ ಶುರುಮಾಡಿದ್ದಾರೆ ಎಂದು ಕೈ ಪಕ್ಷದ ಮುಖಂಡರು ಅಳಲು ಒಟ್ಟಾರೆ ಆರೋಪ.
ಫಾರಿನ್ ಟೂರ್ ಖ್ಯಾತಿ ಗಳಿಸುತ್ತಲೇ ಕ್ವಾರಿಗೂ ಕೈ ಹಾಕಿರುವ ರೂಮರ್ ಇದೆ.
ಕೈಮರದ ಸಮೀಪದಲ್ಲಿ ಎರಡು ಕೋಟಿಯ ಬಿಲ್ಡಿಂಗ್ ವ್ಯಾಪಾರ ಮಾಡಿಕೊಂಡು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಎಲ್ಲಾ ತಯಾರಿ ನಡೆಸಿದಾಗ ಭಾವಿ ವಿಧಾನ ಪರಿಷತ್ ಸದಸ್ಯರು ಎಂದು ಹಲವು ಸಲ ಪಟಾಕಿ ಸಿಡಿಸಿಕೊಂಡಿರುವವರ ಒತ್ತಡದಿಂದ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯದೆ ವಿಲ,ವಿಲ ಒದ್ದಾಡುತ್ತಿದ್ದಾರೆ.
ಪಕ್ಷಕ್ಕೆ ದುಡಿದವರಿಗಿಂತ ಬಿಜೆಪಿ ಕಾರ್ಯಕರ್ತರಿಗೆ ಮಣಿ ಹಾಕುತ್ತಿರುವ ತಮ್ಮಯ್ಯ ಮಾತ್ರ ಯಾರ ಜಪ್ತಿಗೂ ಸಿಕ್ಕಿಲ್ಲ ಎಂಬ ಭ್ರಮೆಯಿಂದ ಹೊರಬಾರದಿದ್ದರೆ ಬಂದೆ ಪುಟ್ಟ ಹೋದೆ ಪುಟ್ಟನಂತೆ ಆಗುತ್ತಾರೆ ಎಂದು ಅವರಿಗೆ ದುಡಿದವರ ಅಳಲು ಮುಂದೆ ನಿಮಗೆ ಬಿಟ್ಟಿದ್ದು ಎಂದು ಕಾರ್ಯಕರ್ತರು ಗೋಳಾಡುತ್ತಿದ್ದಾರೆ.
MLA Tammaiah who cannot be confiscated by anyone!
Leave a comment