Home Political News ಸಹಕಾರ ಸಂಘದ ಚುನಾವಣೆಯಲ್ಲಿ ಶಾಸಕರೇ ಸ್ಪರ್ಧೆ : ರಂಗೇರಿದ ಅಖಾಡ
Political News

ಸಹಕಾರ ಸಂಘದ ಚುನಾವಣೆಯಲ್ಲಿ ಶಾಸಕರೇ ಸ್ಪರ್ಧೆ : ರಂಗೇರಿದ ಅಖಾಡ

Share
Share

ಚಿಕ್ಕಮಗಳೂರು : ತರೀಕೆರೆ ಪಟ್ಟಣದ ಜನರಿಗೆ ಶ್ರೀ ರೇವಣ ಸಿದ್ದೇಶ್ವರ ಸಹಕಾರ ಸಂಘಕ್ಕೆ ನಿರ್ದೇಶಕರಾಗಬೇಕು. ಮತ್ತು ಪುರಸಭೆಗೆ ಒಮ್ಮೆಯಾದರೂ ಸದಸ್ಯನಾಗಿ ಮಾಜಿ ಎಂಬ ಬೋರ್ಡ್ ಇದ್ದರೆ ಸಾಕು ಎಂಬ ಮಹದಾಸೆ ಬಹುತೇಕರದ್ದು ಇಂತಹ ಆಸೆ ಈಗ ಶಾಸಕ ಶ್ರೀನಿವಾಸ್ ಗೆ ಶುರುವಾಗಿ ಚುನಾವಣೆಯ ಅಖಾಡಕ್ಕೆ ಇಳಿದು ರೇವಣ ಸಿದ್ದೇಶ್ವರ ಸಂಘದ ಹಣಾಹಣೊ ರಂಗೇರುವಂತೆ ಮಾಡಿದ್ದಾರೆ.

ಇದು ಎಂತ ಮೋಹ ಎಂತಹ ದಾಹ ವೋ ಅಥವಾ ಅಧಿಕಾರದ ಅಮಲು ಎಂಬುದು ಗೊತ್ತಾಗುತ್ತಿಲ್ಲ, ತರೀಕೆರೆ ರೇವಣ ಸಿದ್ದೇಶ್ವರ ಸಹಕಾರ ಸಂಘದ ಚುನಾವಣೆ ಬಂದರೆ ಒಂದು ರೀತಿಯ ಶಾಸಕರ ಚುನಾವಣೆಯಷ್ಟೇ ರಂಗು ಪಡೆಯುತ್ತದೆ, ಈ ಸಂಘ ಬಹುತೇಕ ಸಹಕಾರಿ ಧಿರೀಣರುಗಳ ಗರಡಿಮನೆ ಎಂದರೆ ತಪ್ಪಾಗಲಾರದು, ಇದೀಗ ಹಾಲಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಸೊಸೈಟಿ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಮುಂದೆ ಡಿ.ಸಿ.ಸಿ.ಬ್ಯಾಂಕ್ ಚುಕ್ಕಾಣಿ ಹಿಡಿಯಬೇಕು ಎಂಬ ಆಸೆ ಎಂಬುದರ ಮುನ್ಸೂಚನೆ ರೀತಿ ಗೋಚರಿಸುತ್ತಿದೆ, ತರೀಕೆರೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಪ್ರಸ್ತುತ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾಗಿದ್ದು ಇದನ್ನು ನೋಡಿ ಶ್ರೀನಿವಾಸ್ ಗೆ ಕಣ್ಣು ಕುಕ್ಕುತ್ತಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ , ಅಧಿಕಾರ ಎಂಬ ಮಾಯೆ ಮುಂದೆ ಎಲ್ಲಾ ಗೌಣ ಎಂಬುದು ಈ ರೇವಣ ಸಿದ್ದೇಶ್ವರ ಸೊಸೈಟಿ ಚುನಾವಣೆಯ ಲಾಡಾಯಿಯಲ್ಲಿ ತಿಳಿಯಬಹುದು, ಆದರೆ ಡಿ.ಸಿ.ಸಿ ಬ್ಯಾಂಕ್ ಕನಸು ಹೊತ್ತಿರುವ ಶಾಸಕರ ಟೀಮ್ ಗೆ ಸೆಡ್ಡು ಹೊಡೆಯಲು ಮಾಜಿ ಶಾಸಕ ರ ಬೆಂಬಲಿಗರೂ ಭರ್ಜರಿ ತಯಾರಿ ನಡೆಸುತ್ತಿದ್ದಾರೆ

Share

Leave a comment

Leave a Reply

Your email address will not be published. Required fields are marked *

Don't Miss

ಹಿರಿಯ ನಾಗರಿಕರಿಗೆ 3.12 ಲಕ್ಷ ರೂ ವಂಚನೆ

ಚಿಕ್ಕಮಗಳೂರು: ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಸಿಲುಕಿ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 3.12 ಲಕ್ಷ ಕಳೆದುಕೊಂಡಿದ್ದಾರೆ. ನಗರದಲ್ಲಿ ವಾಸವಾಗಿರುವ 62 ವರ್ಷದ ವೆಂಕಟೇಶ್ ಇತ್ತೀಚೆಗೆ ಅವರ ಮೊಬೈಲ್‌ಗೆ ಬಂದಿದ್ದ ಒಂದು ಅಪರಿಚಿತ ಎಪಿಕೆ...

ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಶಿಫಾರಸ್ ಪತ್ರ

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಜರಂಗದಳದ ಮುಖಂಡ ಶ್ಯಾಮ್ ವಿ ಗೌಡ, ಮುಸ್ಲಿಂ ಸಮುದಾಯದ 10 ಮಂದಿ ಸೇರಿ ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಜಿಲ್ಲಾ...

Related Articles

ಸಿ.ಟಿ.ರವಿ ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ

ಚಿಕ್ಕಮಗಳೂರು: ಸಿ.ಟಿ.ರವಿ ಅವರು ಸೋಲಿನ ಹತಾಶೆಯಿಂದ ಎಚ್.ಡಿ.ತಮ್ಮಯ್ಯ ವಿರುದ್ಧ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌...

20 ವರ್ಷ ಹೊರಗಿನವರೆ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದಾರೆ

ಮೂಡಿಗೆರೆ:‘ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿರೋಧ ಪಕ್ಷಗಳು ಹತಾಶೆಯಿಂದ ಬಾಯಿ ಚಪಲಕ್ಕಾಗಿ ಮಾತನಾಡುತ್ತಿವೆ’ ಎಂದು...

ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ ಎರಡೂವರೆ ವರ್ಷ ಪೂರೈಸುತ್ತಿದೆ.ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ “ಮುಖ್ಯಮಂತ್ರಿ” ಬದಲಾಗುತ್ತಾರೆ...

ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್...