Home namma chikmagalur chikamagalur ಕೆ.ಎಸ್.ಆರ್.ಟಿ.ಸಿಯ ದುಸ್ಥಿತಿ ಕೆಟ್ಟು-ಕೆಟ್ಟು ನಿಲ್ಲುತ್ತಿರುವ ಬಸ್ಸುಗಳು
chikamagalurHomeLatest Newsnamma chikmagalur

ಕೆ.ಎಸ್.ಆರ್.ಟಿ.ಸಿಯ ದುಸ್ಥಿತಿ ಕೆಟ್ಟು-ಕೆಟ್ಟು ನಿಲ್ಲುತ್ತಿರುವ ಬಸ್ಸುಗಳು

Share
Share

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಅತ್ಯಂತ ದುಸ್ಥಿತಿಯಲ್ಲಿ ಇದೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ರಸ್ತೆ ಮಧ್ಯೆ, ಮಧ್ಯೆ ಕೆಟ್ಟು ನಿಂತು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ಫೆಬ್ರವರಿ 15 ಜಿಲ್ಲೆಯಲ್ಲಿ ಐದಾರು ಬಸ್ಸುಗಳು ಕೆಟ್ಟು ನಿಂತಿವೆ ಎಂಬ ಮಾಹಿತಿ ನೋಡಿದರೆ ಸಾರಿಗೆ ಯಾವ ಸ್ಥಿತಿಯಲ್ಲಿ ಇದೆ ಎಂದು ಹೇಳಬೇಕಾಗಿದೆ. ಲಕ್ಯಾ ಕ್ರಾಸ್ ಬಳಿ ಬಸ್ಸು ಕೆಟ್ಟು ನಿಂತರೆ ಇಲ್ಲಿಂದ ಹತ್ತು ಕಿಲೋಮೀಟರ್ ದೂರದ ಹಿರೇಗೌಜ ಸಮೀಪದಲ್ಲಿ ಮತ್ತೊಂದು ಬಸ್ಸು ಕೆಟ್ಟು ನಿಂತಿದೆ ಇದೇ ರೀತಿ ಮೂಡಿಗೆರೆ ಸಮೀಪ ಇನ್ನೊಂದು ಬಸ್ಸು ಕೆಟ್ಟು ನಿಂತಿದೆ ಇದರ ಜೊತೆಗೆ ಮತ್ತೆ ಎಲ್ಲಿ,ಎಲ್ಲಿ ಬಸ್ಸುಗಳು ಕೆಟ್ಟು ನಿಂತಿರುತ್ತವೋ ಬಲ್ಲವರ್ಯಾರು ?

ಸಣ್ಣಪುಟ್ಟ ಲೋಪದೋಷಗಳು ಸಹಜ ಬಿಡಿ ಕೆಟ್ಟು ನಿಂತಾಗ ಪ್ರಯಾಣಿಕರು, ಪರದಾಡ ಬೇಕಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇಲ್ಲದ ಅಧಿಕಾರಿಗಳಿಗೆ ಕ್ಯಾಕರಿಸಿ ಉಗಿಯ ಬೇಕಾದವರು ಜನಪ್ರತಿನಿಧಿಗಳು ನಿತ್ಯ ಪೋಜ್ ಕೊಡುತ್ತಾ ತಿರುಗಾಡುತ್ತಿದ್ದಾರೆ ಎಂದು ಸಾರ್ವಜನಿಕರು ಉಗಿಯುತ್ತಿದ್ದಾರೆ.

ಬಸ್ಸುಗಳಲ್ಲಿ ನಿತ್ಯ ಸಂಚಾರ ಮಾಡುವುದು ಸಾಮಾನ್ಯ ಜನರು ಅದರಲ್ಲೂ ಹಿರಿಯ ನಾಗರೀಕರು, ಮಹಿಳೆಯರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ತಲುಪದಿದ್ದರೆ ಅನುಭವಿಸುವ ಯಾತನೆಗೆ ಹೊಣೆ ಯಾರು ? ಜೊತೆಗೆ ಬಸ್ಸುಗಳಲ್ಲಿ ಸಂಚಾರ ಮಾಡುವಾಗ ಕೆಟ್ಟು ನಿಂತ ತಕ್ಷಣ ಪ್ರಯಾಣಿಕರ ಸಿಟ್ಟು ಸಹಜವಾಗಿ ಡ್ರೈವ್ ರಗಳು ಮತ್ತು ಕಂಡಕ್ಟರ್ ಮೇಲೆ ತಾನೇ ಪಾಪದ ಸಿಬ್ಬಂದಿ ಕ್ಯಾಕರಿಸಿ ಉಳಿಸಿಕೊಳ್ಳತ್ತಾರೆ.ಇದರಿಂದ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಪ್ರಸಂಗಗಳು ನಡೆದಿವೆ.

ಚಿಕ್ಕಮಗಳೂರು ಡಿಪೋದ ಎರಡು ಬಸ್ಸುಗಳು ಅಪಘಾತದಲ್ಲಿ ಪರಿಹಾರ ನೀಡದಿರುವುದರಿಂದ ನ್ಯಾಯಾಲಯದ ಆದೇಶ ಮೇರೆಗೆ ಜಪ್ತಿ ಮಾಡಲಾಗಿದೆ. ಇದು ದಿನನಿತ್ಯದ ಗೋಳು ಬಸ್ಸುಗಳು ಇಷ್ಟೊಂದು ಹೀನ ಸ್ಥಿತಿಯಲ್ಲಿರುವಾಗ ನಿರ್ವಹಣೆ ಮಾಡುವ ಅಧಿಕಾರಿಗಳು ಗೆಣಸು ತಿನ್ನುತ್ತಾ ಶಕ್ತಿ ಯೋಜನೆ ಎಂದು ಜಪಮಾಡುತ್ತಿದ್ದಾರ ಇನ್ನೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬಸ್ಸುಗಳು ಕೆಟ್ಟು ನಿಲ್ಲುವುದು ಸರ್ಕಾರದ ಮತ್ತೊಂದು “ಗ್ಯಾರಂಟಿ” ಯೋಜನೆ ಎನ್ನುತ್ತಲೇ ಜಾಹೀರಾತು ನೀಡುತ್ತಿರುವಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

KSRTC’s poor condition, buses parked in poor condition

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲಾಸ್ಪತ್ರೆಗೆ ಎಂಎಲ್ಸಿ ಸಿ.ಟಿ. ರವಿ ಭೇಟಿ

ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಔಷಧಿಗಳ ತೀವ್ರ ಕೊರತೆಯ ಕುರಿತು ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಎಂಎಲ್ಸಿ ಸಿ.ಟಿ. ರವಿ ಅವರು ಇಂದು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ...

ಸ್ನಾನಕ್ಕೆ ಇಳಿದಿದ್ದ ಯುವಕ ಕೆರೆಯಲ್ಲಿ ನಾಪತ್ತೆ

ಕಳಸ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಅಂಬಾತೀರ್ಥದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಇಲ್ಲಿನ ಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೋಲಾರ ಜಿಲ್ಲೆಯಿಂದ...

Related Articles

ಆನೆ ದಾಳಿಗೆ ಸಿಲುಕಿ ಕೂಲಿ ಕಾರ್ಮಿಕನ ಬಲಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆ ಅಟ್ಟಹಾಸ ಮುಂದುವರಿದಿದ್ದು, ಆನೆ ದಾಳಿಗೆ ಸಿಲುಕಿ ಕೂಲಿ ಕಾರ್ಮಿಕನೋರ್ವ ದಾರುಣವಾಗಿ ಸಾವನ್ನಪ್ಪಿರುವ...

ಸಂತ ಸೇವಾಲಾಲ್ ಜಯಂತಿಯಲ್ಲಿ ಸರ್ಕಾರದ ವಿರುದ್ಧದ ಆಕ್ರೋಶ

ಚಿಕ್ಕಮಗಳೂರು: ಕಾಫಿನಾಡಿನ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವು ಸಂಭ್ರಮದ ಬದಲು...

ಶ್ರೀ ಸಂತ ಸೇವಾಲಾಲ್ ತತ್ವಾದರ್ಶಗಳು ಮಾsರ್ಗದರ್ಶಿ:

ಚಿಕ್ಕಮಗಳೂರು:  ಹಿಂಸೆ, ಅಸಮಾನತೆ ಇರುವ ಪ್ರಸ್ತುತ ಸಮಾಜಕ್ಕೆ ಶ್ರೀ ಸಂತ ಸೇವಾಲಾಲ್ ಅವರ ತತ್ವಾದರ್ಶಗಳು ಮಾರ್ಗದರ್ಶನ...

ಜೂಜಾಟದಲ್ಲಿ ತೊಡಗಿಕೊಂಡಿದ್ದ ಮೂವರ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ದೋಣಗುಡಿ ಬಳಿ ಇಸ್ಪೇಟು ಜೂಜಾಟದಲ್ಲಿ ತೊಡಗಿಕೊಂಡಿದ್ದ ಮೂವರನ್ನು ಬಂಧಿಸಿ 17 ಸಾವಿರ ರು....