Home namma chikmagalur Banagalore ಕಿಸಿಂಗ್, ಕಿಸಿಂಗ್ ರಾಮಚಂದ್ರ -ಸ್ಮಗ್ಲಿಂಗ್, ಸ್ಮಗ್ಲಿಂಗ್ ರನ್ಯಾ ರಾವ್‌
BanagaloreState News

ಕಿಸಿಂಗ್, ಕಿಸಿಂಗ್ ರಾಮಚಂದ್ರ -ಸ್ಮಗ್ಲಿಂಗ್, ಸ್ಮಗ್ಲಿಂಗ್ ರನ್ಯಾ ರಾವ್‌

Share
Share

ಅಪ್ಪ ರಾಮಚಂದ್ರ ರಾವ್ ಗೆ ಚಿನ್ನವೀಡು ಕಾಟ,ಮಲ ಮಗಳು ರನ್ಯಾ ರಾವ್ ಗೆ ಚಿನ್ನ ಕಳವಿನ ವ್ಯಾಮೋಹ .ಅಪ್ಪ ಕಡ್ಡಾಯ ರಜೆಯ ಮೇಲೆ ಮನೆ ಸೇರಿ ಗೃಹ ಮಂತ್ರಿ ಪರಮೇಶ್ವರ್ ಕೃಪೆಗಾಗಿ ದಾರಿ ಕಾಯುತ್ತಿದ್ದಾರೆ. ರನ್ಯಾರಾವ್ ಅಲಿಯಾಸ್ ಹರ್ಷವರ್ಧಿನಿ ಚಿನ್ನ ಕದ್ದು ಕಳೆದ ಐದಾರು ತಿಂಗಳಿಂದ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಧಿಕಾರಿಯಾಗಿದ್ದ ರಾಮಚಂದ್ರ ರಾವ್ ಗೆ ಹಗ್ಗ ಕಡಿಯುವ ಚಾಳಿ ಇತ್ತು ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಬಂದಿತ್ತು.ಇದೇ ಚಾಳಿ ಬೆಳೆಸಿ ಕೊಂಡು ರೋಹಿಣಿ ಎಂಬ ಮಹಿಳೆಯ ಜೊತೆಗೆ ಹಲವಾರು ಹೆಸರುಗಳು ಇವೆ.ಮದುವೆಯಾಗಿದ್ದ ರೋಹಿಣಿಗೆ ವಿಚ್ಛೇದನ ಕೊಡಿಸಿ ಮಡಗಿ ಕೊಂಡು ಕೋಟ್ಯಂತರ ಆಸ್ತಿ ಮಾಡಿಕೊಟ್ಟಿರುವುದು ಗುಟ್ಟೇನಲ್ಲಾ .

ಇಷ್ಟಾದರೂ ನಿವೃತ್ತಿ ಇನ್ನೂ ಕೆಲ ದಿನಗಳಿರುವಾಗ ಕಛೇರಿಯಲ್ಲಿ ಕಿಸಿಂಗ್,ಕಿಸಿಂಗ್ ಎಂದು ದೊಡ್ಡ ಸುದ್ದಿಯಾದ ನಂತರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ.

ಮಲ ತಂದೆ ಮತ್ತು ತಾಯಿ ಯ ವ್ಯಾಮೋಹ ರನ್ಯಾ ರಾವ್‌ ಮೂರ್ನಾಲ್ಕು ಚಲನಚಿತ್ರದಲ್ಲಿ ನಟಿಸಿ ಚಿನ್ನ ಕಳವು ದಂಧೆಯಲ್ಲಿ ಪಳಗುತ್ತಿರುವಾಗ ಡಿ.ಆರ್.ಐ. ನವರು ವಿಮಾನ ನಿಲ್ದಾಣದಲ್ಲಿ ಬಂಧಿಸಿ ಜೈಲಿನ ಹಾದಿ ತೋರಿಸಿದ್ದಾರೆ. ಈಗ ಡಿ.ಆರ್.ಐ ಮತ್ತು ಸಿ.ಬಿ.ಐ ನವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ರನ್ಯಾ ರಾವ್ ಒಂದು ವರ್ಷದಲ್ಲಿ 127 ಕೆಜಿಯಷ್ಟು ಚಿನ್ನ ಸಾಗಣೆ ಮಾಡಿರುವುದನ್ನು ಖಚಿತ ಪಡಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಇದರ ಬೆಲೆ 102 ಕೋಟಿಯಷ್ಟು ಎಂದು ಹೇಳಲಾಗಿದೆ.
ವಿದೇಶದಿಂದ ಅದರಲ್ಲೂ ದುಬೈನಿಂದ 14 ಕೆಜಿಯಷ್ಟು ಚಿನ್ನ ತರುವಾಗ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಆಗ ರನ್ಯಾ ರಾವ್ ಮನೆಯ ಮೇಲೆ ದಾಳಿ ನಡೆಸಿದಾಗ 2.06 ಕೋಟಿಯ ಚಿನ್ನ ಮತ್ತು 2.67 ಕೋಟಿ ನಗದು ಪತ್ತೆಯಾಗಿತ್ತು.ಇದರ ಜೊತೆಗೆ 34 ಕೋಟಿಯಷ್ಟು ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

Kissing- kissing Ramachandra -smuggling- smuggling Ranya Rao

Share

Leave a comment

Leave a Reply

Your email address will not be published. Required fields are marked *

Don't Miss

ನರಹಂತಕ ಆನೆ ಸೆರೆಗೆ ಸಾಕಾನೆಗಳ ತಂಡ ಆಗಮನ

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಕಾರ್ಮಿಕ ಬಲಿ; ಸೆರೆಗೆ ಸಾಕಾನೆಗಳ ತಂಡ ಆಗಮನ ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕೂಲಿ ಕಾರ್ಮಿಕ...

ನೈತಿಕ ಪೊಲೀಸ್ ಗಿರಿ ಪ್ರಕರಣ – ಗಂಭೀರವಾಗಿ ಪರಿಗಣನೆ

ಚಿಕ್ಕಮಗಳೂರು: ಕಾಫಿನಾಡಿನ ಸಂತೇ ಮೈದಾನದ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್...

Related Articles

ರಾಮಚಂದ್ರ ರಾವ್ ಅಲಿಯಾಸ್ ಕಾಮುಕ ರಾವ್ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯ

ರಾಮಚಂದ್ರ ರಾವ್ ಅಲಿಯಾಸ್ ಕಾಮಚಂದ್ರ ರಾವ್ ನಿವೃತ್ತಿ ಅಂಚಿನಲ್ಲಿ ಕಾಮ ಪುರಾಣದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಮಾಡಿದ್ದು...

ರಸಿಕರ ರಾಜ-ಪೊಲೀಸ್ ಡ್ರೆಸ್ ನಲ್ಲಿ ತಬ್ಬಿ ಮುದ್ದಾಡಿದ ಡಿಜಿಪಿ ಡಾ.ರಾಮಚಂದ್ರ ರಾವ್?

ಚಿಕ್ಕಮಗಳೂರು: ಡಿಜಿಪಿ ಡಾ.ರಾಮಚಂದ್ರ ರಾವ್ ಖಾಕಿ ಡ್ರೆಸ್ ನಲ್ಲಿ ಕಛೇರಿಯ ಕುರ್ಚಿಯಲ್ಲಿ ಕುಳಿತು ಮಹಿಳೆಯೊಂದಿಗೆ ಮುದ್ದಾಡಿ...

ಚಿಕಿತ್ಸೆ ಫಲಕಾರಿಯಾಗದೆ ಸಾಲುಮರದ ತಿಮ್ಮಕ್ಕ ನಿಧನ

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ....

ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ ಎರಡೂವರೆ ವರ್ಷ ಪೂರೈಸುತ್ತಿದೆ.ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ “ಮುಖ್ಯಮಂತ್ರಿ” ಬದಲಾಗುತ್ತಾರೆ...