ಚಿಕ್ಕಮಗಳೂರು: ಕೇರಳದ ಪಾಲಕ್ಕಾಡ್ ನಿಂದ ಪ್ರವಾಸಕ್ಕೆ ಬಂದಿದ್ದಾ ನಲವತ್ತು ಜನರ ಮಧ್ಯೆ ಎಸ್, ಎಸ್, ಎಲ್,ಸಿ.ಓದುತ್ತಿದ್ದ ಶ್ರೀನಂದಾ ನಾಪತ್ತೆಯಾಗಿ ಮೂರು ದಿನಗಳಾದರು ಯಾವ ಕುರುಹುಗಳು ದೊರೆತಿಲ್ಲ.
ಕಳೆದ ಮೂರು ದಿನಗಳಿಂದ ಪೊಲೀಸರು ಮತ್ತು ಫಾರೆಸ್ಟ್ ಇಲಾಖೆ ಮತ್ತು ಸ್ಥಳೀಯ ನೂರಾರು ಜನ ಕಾರ್ಯಾಚರಣೆ ನಡೆಸಿದರು ಪ್ರಯೋಜನವಾಗಿಲ್ಲ ಇದರ ಜೊತೆಗೆ ಪೊಲೀಸ್ ಉನ್ನತ ಅಧಿಕಾರಿಗಳು ಮಾರ್ಗದರ್ಶನ ಮಾಡುತ್ತಿದ್ದಾರೆ.
ಕಲ್ಲು ಬಂಡೆಗಳ ಮೇಲೆ ಬಿದ್ದರೆ ಮೃತ ದೇಹದ ವಾಸನೆ ಬರುತ್ತಿತ್ತು ಇದರ ಜೊತೆಗೆ ಪ್ರಾಣಿಗಳು ಎಳೆದುಕೊಂಡು ಹೋಗುವಾಗ ಕೀರುಚಾಟ,ಕೂಗಾಟ ಸಹಜವಾಗಿ ಗೊತ್ತಾಗುತ್ತದೆ ಇದರ ಜೊತೆಗೆ ಪ್ರಾಣಿಗಳ ಹೆಜ್ಜೆ ಗುರುತು ಖಂಡಿತ ಗೊತ್ತಾಗುತಿತ್ತು ಆದರೆ ಕಳೆದ ಮೂರು ದಿನಗಳಿಂದ ಶೋಧನೆ ಮಾಡುತ್ತಿರುವ ತಂಡದವರಿಗೆ ಸಣ್ಣ ಸೂಚನೆ ದೊರೆತಿಲ್ಲ.
ಹೀಗಾಗಿ ತನಿಖೆ ಜಾಡು ಬದಲಾಯಿಸ ಬೇಕಾಗಿದೆ.ನಾಪತ್ತೆಯಾದ ಬಾಲಕಿಯ ತಾಯಿ ಹೇಳಿರುವ ಹೇಳಿಕೆ ತನಿಖೆಗೆ ಸಹಕಾರವಾಗಬಹುದು.ಮಗಳನ್ನು ಅಮಲು ಪದಾರ್ಥ ನೀಡಿ ಅಪಹರಣ ಮಾಡಿದ್ದಾರೆ ಎನ್ನುತ್ತಿದ್ದಾರೆ. ಅಪಹರಣ ಮಾಡುವ ಸಂದರ್ಭದಲ್ಲಿ ಕೂಗಾಟ ಸಹಜವಾಗಿಯೇ ಇರುತ್ತದೆ.
ಶ್ರೀನಂದಾಗೆ ಪರಿಚಯದವರು ಬಂದು ಕರೆದುಕೊಂಡು ಹೋಗುವ ಸಾಧ್ಯತೆ ಕೂಡ ತಳ್ಳಿಹಾಕಲು ಸಾಧ್ಯವಿಲ್ಲ. ಈ ಬಗ್ಗೆ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಪೋಷಕರು ಮತ್ತು ಶ್ರೀನಂದಾ ಸ್ನೇಹಿತರಿಂದ ಪಡೆದರೆ ಪತ್ತೆ ಕಾರ್ಯಕ್ಕೆ ಅನುಕೂಲವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.ಕಾಡು,ಬೆಟ್ಟ ಅಲೆಯುವ ಬದಲಿಗೆ ತನಿಖೆ ಜಾಡು ಬದಲಾಯಿಸಿದರೆ ಶೀಘ್ರ ಪತ್ತೆಯಾಗಬಹುದು.
Kerala’s Srinanda Missing – Many Doubts Amidst Discord?
Leave a comment