Home ಅಪ್ಪಟ ಗ್ರಾಮೀಣ ಪ್ರತಿಭೆ ಹೆಚ್.ಎಂ.ರವಿಗೆ ಜಾನಪದ ಅಕಾಡೆಮಿ ಪ್ರಶಸ್ತಿ.
HomeKadurLatest Newsnamma chikmagalur

ಅಪ್ಪಟ ಗ್ರಾಮೀಣ ಪ್ರತಿಭೆ ಹೆಚ್.ಎಂ.ರವಿಗೆ ಜಾನಪದ ಅಕಾಡೆಮಿ ಪ್ರಶಸ್ತಿ.

Share
Share

ಕಡೂರು: ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿರುವ ಹೆಚ್.ಎಂ.ರವಿಗೆ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಡೂರು ತಾಲ್ಲೂಕಿನ ಅಂತರಘಟ್ಟೆ ಸಮೀಪವಿರುವ ಕುಗ್ರಾಮ ಹುಲಿಹಳ್ಳಿಯ ರವಿಗೆ ಓದು ತಲೆಗತ್ತಲಿಲ್ಲಾ,ಒಂಬತ್ತನೇ ತರಗತಿಗೆ ಗುಡ್ ಬೈ ಹೇಳಿ ಊರಿನಲ್ಲಿ ಕುಣಿಯುತ್ತಿದ್ದ ವೀರಗಾಸೆ ನೋಡಿ ಆಕರ್ಷಿಕನಾದವ ಅಂದಿನಿಂದ ಇಂದಿನವರೆಗೂ “ವೀರಗಾಸೆ” ಯಲ್ಲಿ ಬೆರೆತು ಹೋಗಿದ್ದಾರೆ.

ಒಂದು ಕಡೆ ಬಡತನ ಜೊತೆಗೆ ಕುಗ್ರಾಮ ಮತ್ತೊಂದು ಕಡೆ ತಲೆಗೆ ಹತ್ತದ ವಿದ್ಯೆ ಇವುಗಳನ್ನು ಮೆಟ್ಟಿ ನಿಂತು ಏನಾದರೂ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ.ಈತನ ಸಾಧನೆ ಜಾನಪದ ಅಕಾಡೆಮಿ ಮಟ್ಟಕ್ಕೆ ತಲುಪಿರುವುದೇ ರೋಚಕ.

ಸಣ್ಣಪುಟ್ಟ ಕಾರ್ಯಕ್ರಮ ಗಳಲ್ಲಿ ವೀರಗಾಸೆ ಪ್ರದರ್ಶನ ಮಾಡಿ ಅದೇ ಕಲೆಯನ್ನು ಕಸುಬು ಮಾಡಿಕೊಂಡಿರುವ ರವಿ 2004 ರಲ್ಲಿ ಯುವಜನ ಮೇಳದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರಿಂದ ಪ್ರಾರಂಭವಾದ ಪ್ರಶಸ್ತಿ ಸರಮಾಲೆಗೆ ಲೆಕ್ಕವಿಲ್ಲಾ.

ಜಾತ್ರೆ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೀರಗಾಸೆ ಪ್ರದರ್ಶನ ಮಾಡಿರುವ ಪಟ್ಟಿ ನೋಡಿದರೆ ಆಶ್ಚರ್ಯವಾಗುತ್ತದೆ.

ಹಳ್ಳಿ, ಹಳ್ಳಿ ಗ್ರಾಮ,ಗ್ರಾಮದಲ್ಲಿ ಹೋಬಳಿ ಮಟ್ಟದಿಂದ ಹಿಡಿದು ತಾಲ್ಲೂಕು ಜಿಲ್ಲೆ, ರಾಜ್ಯ, ಹೊರ ರಾಜ್ಯ, ದೇಶ,ವಿದೇಶಗಳಲ್ಲಿ ವೀರಗಾಸೆ ಪ್ರದರ್ಶನ ಮಾಡಿ ಕೀರ್ತಿ ತಂದಿದ್ದಾರೆ.ಈತನ ಬಳಿಯಿರುವ ಪ್ರದರ್ಶನಗಳ ಪಟ್ಟಿ ನೋಡಿದರೆ ಆಶ್ಚರ್ಯದ ಜೊತೆಗೆ ಕೋಟಿ ವಿದ್ಯೆಗಿಂತ ಕಲಾವಿದ್ಯೆಯೇ ಈತನನ್ನು ಬೆಳೆಸಿದೆ ಬೆಳಗಿಸಿದೆ.

ಹಲವರಿಗೆ ವೀರಗಾಸೆ ಕಲಿಸುತ್ತಿರುವ ರವಿ ವೀರಗಾಸೆಗೆ ಬೇಕಾದ ಸಲಕರಣೆಗಳನ್ನು ತಯಾರು ಮಾಡುವ ಕಲೆಗಾರಿಕೆಯನ್ನು ಕಲಿತಿರುವುದು ಮೆಚ್ಚಲೇ ಬೇಕು.

ವೀರಗಾಸೆ “ರವಿ” ಎಂದು ಕರೆಯಿಸಿ ಕೊಳ್ಳುವ ರವಿಗೆ ನನ್ನಂತೆ ಹಲವು ಯುವಕರು ಕಲೆಯನ್ನು ಕಲಿತು ಹೆಸರುಗಳಿಸಲಿ ಎಂಬ ಹಂಬಲವಿದೆ.ಅವನ ಕನಸಿ ನೆನಸಾಗಲಿ ಅವನ ಕಲೆಯ ಭವಿಷ್ಯ ಉಜ್ವಲವಾಗಲಿ ಮತ್ತಷ್ಟು ಪ್ರಶಸ್ತಿ ಮತ್ತು ಗೌರವ ಮನ್ನಣೆ ಗಳಿಸಲಿ.

H.M. Ravi Janapada Academy Award for Pure Rural Talent.

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...