Home namma chikmagalur chikamagalur ಗಲಿ-ಬಿಲಿ “ಗಿಲ್ಲಿ”ಆಟ ಕಿಂಗ್ ಮೇಕರ್ “ಕಿಂಗ್”
chikamagalurHomeLatest Newsnamma chikmagalur

ಗಲಿ-ಬಿಲಿ “ಗಿಲ್ಲಿ”ಆಟ ಕಿಂಗ್ ಮೇಕರ್ “ಕಿಂಗ್”

Share
Share

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗೆ ಇದುವರೆಗೆ ಕಿಂಗ್ ಮೇಕರ್ ಆಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ”ಕಿಂಗ್ ” ನಂತೆ ಕಂಗೊಳಿಸುತ್ತಿದ್ದಾರೆ.
ಇನ್ನೂ ಉಪಾಧ್ಯಕ್ಷರಾಗಿ ದಿನೇಶ್ ಹೊಸೂರು ಆಯ್ಕೆ ಯಾಗಿದ್ದಾರೆ.

ಕಳೆದ ಒಂದು ವರ್ಷದಿಂದ ದಿನಕ್ಕೊಂದು ಸುದ್ದಿ ಕ್ಷಣಕ್ಕೊಂದು ಸುದ್ದಿಗಳ ಮಧ್ಯೆ ಸುದ್ದಿಗಳಿಗೆ ತೆರೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರ ಇರುವುದರಿಂದ ಚುನಾವಣೆ ನಡೆಸುವುದು ಕಷ್ಟ ಎನ್ನುವಂತಹ ಘಟನೆಗಳು ನಡೆದಿವೆ.ಕಡೂರು ಶಾಸಕ ಆನಂದ್ ಮತ್ತು ತರೀಕೆರೆ ಶಾಸಕ ಶ್ರೀನಿವಾಸ್ ಸರ್ಕಾರದ ಮೇಲೆ ಒತ್ತಡ ತಂದು ಬ್ಯಾಂಕ್ ಬಗ್ಗೆ ತನಿಖೆ ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ಮೇಲೆ ಚುನಾವಣೆ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಯಿತು.

ಇದರ ಬಗ್ಗೆ ನ್ಯಾಯಾಲಯ ಚುನಾವಣೆ ನಡೆಸಬೇಕು ಮತ್ತು ಆಡಳಿತ ಮಂಡಳಿ ಯಾತಾ ಸ್ಥಿತಿ ಮುಂದುವರೆಯಬೇಕು ಎಂದು ತೀರ್ಪು ನೀಡಿದ್ದು ಆಡಳಿತ ಮಂಡಳಿ ಅವಧಿ ಮುಗಿದರೂ ಆಡಳಿತ ನಡೆಸಿದ್ದು ದಾಖಲೆ .ಇದಕ್ಕೆ ಬೆಳ್ಳಿ ಪ್ರಕಾಶ್ ಕೊಡುಗೆ ಕಾರಣ ಎನ್ನಲಾಗಿದೆ. ಸ್ಥಗಿತಗೊಂಡಿದ್ದ ಚುನಾವಣೆಗೆ ಪ್ರಕ್ರಿಯೆ ಪ್ರಾರಂಭವಾಗಿ ಬಿಜೆಪಿ ಜೆಡಿಎಸ್ ಮೈತ್ರಿ ಕೂಟ ಕ್ಲೀನ್ ಸ್ವೀಪ್ ಮಾಡಿತು.

ಚಿಕ್ಕಮಗಳೂರು ಸಹಕಾರ ಸಂಘಗಳ ವತಿಯಿಂದ ವಿ,ಪ,ಸದಸ್ಯ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡರ ವಿರುದ್ಧ ಎಂ.ಎಸ್.ನಿರಂಜನ ತೊಡರುಗಾಲು ಕೊಟ್ಟರೂ ನಿರಾಯಾಸವಾಗಿ ಸಿ.ಟ.ರವಿ ಮತ್ತು ಎಸ್‌. ಎಲ್. ಬೋಜೇಗೌಡ ಆಯ್ಕೆಯಾದರೆ ಇತರೆ ಸಹಕಾರ ಸಂಘಗಳಿಂದ ಟಿ.ಎಲ್.ರಮೇಶ್ ಹ್ಯಾಟ್ರಿಕ್ ಸಾಧಿಸಿದರೆ ಇವರ ವಿರುದ್ಧ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ನ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸೋಲ ಬೇಕಾಯಿತು.

ಟಿ.ಎ.ಪಿ.ಸಿ.ಎಂ.ಎಸ್ ಕ್ಷೇತ್ರದಿಂದ ಕಡೂರು ಶಾಸಕ ಆನಂದ್ ಸ್ಪರ್ಧೆ ಮಾಡಿದ್ದರಿಂದ ತೀವ್ರ ಕುತೂಹಲ ಕೆರಳಿಸಿದ ಚುನಾವಣೆಯಲ್ಲಿ ಆನಂದ್ ಸೋತರೆ ಇವರ ಪ್ರತಿ ಸ್ಪರ್ಧೆ ದಿನೇಶ್ ಹೊಸೂರು ಒಂದು ಮತದಿಂದ ಗೆಲುವು ಸಾಧಿಸಿದರು. ಕಳೆದ ಬಾರಿ ಲಿಂಗಾಯತರು ಬ್ಯಾಂಕ್ ನ ಅಯಾ ಕಟ್ಟಿನ ಅಧ್ಯಕ್ಷ ಮತ್ತು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿದ್ದರು .ಪ್ರಸ್ತುತ ಬ್ಯಾಂಕ್ ಒಕ್ಕಲಿಗರ ಬಿಗಿ ಹಿಡಿತಕ್ಕೆ ಸಿಕ್ಕಂತಾಯಿತು ಎಂಬ ವಿಶ್ಲೇಷಣೆಗಳು ಚರ್ಚೆ ಆಗುತ್ತಿವೆ.

ಸಿ.ಟಿ.ರವಿ ಕಿಂಗ್ ಮೇಕರ್ ಜೊತೆಗೆ “ಕಿಂಗ್” ಆದರೆ ಎಸ್.ಎಲ್.ಬೋಜೇಗೌಡರು ಎಲ್ಲಾ ನಾನೇ ಎಂಬಂತೆ ಆಗಿದ್ದಾರೆ ಬ್ಯಾಂಕ್ ಇಂದು ಬಿಜೆಪಿ ತೆಕ್ಕೆಗೆ ತರುವಲ್ಲಿ ಶ್ರಮಿಸಿದ ಬೆಳ್ಳಿ ಪ್ರಕಾಶ್ “ಹೀರೋ” ನಂತೆ ಕಂಡರೆ ಅಧ್ಯಕ್ಷರಾಗಿದ್ದ ಡಿ.ಎಸ್.ಸುರೇಶ್ ದುರಂತ ನಾಯಕರಾಗಿದ್ದಾರೆ.ಇನ್ನೂ ಉಳಿದವರು ಸೈಡ್ ಅಂಕ್ಟರ್ ತರಹ ಇದ್ದಾರೆ.ಪವರ್ ಇದ್ದರೂ ನಮ್ಮದು ಏನೂ ನಡೆಯಲಿಲ್ಲ ಮುಂದೆ ” ಮಾರಿ ಹಬ್ಬ ” ಇದೆ ಎಂದು ಕಾಂಗ್ರೆಸ್ ನವರು ಗೊಣಗುತ್ತಿದ್ದಾರೆ.

ಇಷ್ಟೆಲ್ಲಾ ಅಧಿಕಾರ ಪಡೆಯಲು ಕಸರತ್ತು ನಡೆಸಿದ್ದು ಏಕೆ ಎಂದರೆ “ಬ್ಯಾಂಕ್” ನೇಮಕಾತಿಗಾಗಿ ಎಂದು ಜನ ಮಾತನಾಡುತ್ತಿದ್ದಾರೆ.

Gali-bili “Gilli” Game King Maker “King”

Share

Leave a comment

Leave a Reply

Your email address will not be published. Required fields are marked *

Don't Miss

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವುದೇ ಚೈತ್ರೋತ್ಸವದ ಉದ್ದೇಶ

ಚಿಕ್ಕಮಗಳೂರು: ಜಿಲ್ಲೆಯರೈತರು ಮತ್ತು ಬೆಳೆಗಾರರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದೇಚೈತ್ರೋತ್ಸವದಉದ್ದೇಶಎಂದುಜಿಲ್ಲಾಧಿಕಾರಿಎಂ.ಎನ್ ನಾಗರಾಜ್ ತಿಳಿಸಿದರು. ಅವರುಇಂದು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು...

Related Articles

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ...

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್...