Home namma chikmagalur ಡಿ.ಸಿ.ಸಿ.ಬ್ಯಾಂಕ್ ಚುನಾವಣೆ ಕೂಲ್-ಕೂಲ್ !
namma chikmagalurchikamagalurHomeLatest News

ಡಿ.ಸಿ.ಸಿ.ಬ್ಯಾಂಕ್ ಚುನಾವಣೆ ಕೂಲ್-ಕೂಲ್ !

Share
Share

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಸೆಪ್ಟೆಂಬರ್ 13 ರಂದು ನಡೆಯಲಿದೆ. ಒಟ್ಟು 13 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆ ಇದುವರೆವಿಗೂ ಕೂಲ್,ಕೂಲ್ ಆಗಿದೆ.ಕಾಂಗ್ರೆಸ್ ನ ನಡೆ ಕೂಡ ನಿಗೂಢವಾಗಿದೆ.

ಐದು ವರ್ಷಗಳ ಹಿಂದೆ ದಿವಂಗತ ಎಸ್.ಎಲ್.ಧರ್ಮೇಗೌಡರ ತಂಡ ಸೋಲಿಸಿದ ಬಿಜೆಪಿಯವರು ಇಂದು ಎಸ್.ಎಲ್.ಬೋಜೇಗೌಡರ ನಾಯಕತ್ವದಲ್ಲಿ ಚುನಾವಣೆ ನಡೆಸಲು ತಯಾರಿ ನಡೆಸಿದ್ದಾರೆ. ಜನತಾದಳಕ್ಕೆ ಎಷ್ಟು ಸ್ಥಾನ ಬಿಟ್ಟುಕೊಡತ್ತಾರೆ ಎಂಬದು ಚರ್ಚೆಯಲ್ಲಿ ಇದೆ.ಜನತಾದಳಕ್ಕೆ ಮೂರು ಸ್ಥಾನ ಕೇಳುತ್ತಿದ್ದಾರೆ ಆದರೆ ಎರಡು ಸ್ಥಾನ ದೊರೆಯಬಹುದು ಎನ್ನಲಾಗಿದೆ.

ಚಿಕ್ಕಮಗಳೂರು ತಾಲ್ಲೂಕಿನ ಎರಡು ಸ್ಥಾನಗಳಿಗೆ ಸ್ವತಃ ಬೋಜೇಗೌಡ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಇದರಿಂದ ನಿರಂಜನ್ ಮತ್ತೊಮ್ಮೆ ಬ್ಯಾಂಕ್ ಗೆ ಎಂಟ್ರಿ ಕೊಡಬಹುದು. ಕಡೂರು ತಾಲ್ಲೂಕಿನಿಂದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ರಾಮಜ್ಜ ಮತ್ತೊಮ್ಮೆ ನಿರ್ದೇಶಕರಾಗಿ ಅಪೆಕ್ಸ್ ಬ್ಯಾಂಕ್ ಗೆ ಆಯ್ಕೆ ಖಚಿತ.

ತರೀಕೆರೆ ತಾಲ್ಲೂಕಿನ ಭಲೇ ಜೋಡಿ ಮಾಜಿ ಶಾಸಕರಾದ ಡಿ.ಎಸ್.ಸುರೇಶ್ ಮತ್ತು ಕೆ.ಆರ್.ಆನಂದಪ್ಪ ಮತ್ತೆ ಬ್ಯಾಂಕ್ ಗೆ ಬರುವುದು ಖಚಿತ. ಮೂಡಿಗೆರೆಯ ಒಂದು ಸ್ಥಾನಕ್ಕೆ ಹಳಸೆ ಶಿವಣ್ಣ ತೀರ್ಮಾನ ಅಂತಿಮ.

ಕೊಪ್ಪದಲ್ಲಿ ಕಾಂಗ್ರೆಸ್ ನ ರವೀಂದ್ರ ಕುಕ್ಕೂಡಿಗೆ ನಿರ್ದೇಶಕರಾಗಲು ತಯಾರಿ ನಡೆಸಿದ್ದು ಬಿಜೆಪಿ ಯಾವ ರೀತಿಯ ಟಕ್ಕರ್ ಕೊಡುತ್ತದೆ ಎಂಬುದು ನಿಗೂಢವಾಗಿದೆ. ಶೃಂಗೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಹೊಂದಿರುವುದರಿಂದ ಲಾಟರಿ ಯಾರ ಕೈ ಹಿಡಿಯುತ್ತದೆ ನೋಡಬೇಕು.

ಎನ್.ಆರ್ ಪುರದಲ್ಲಿ ಬಿಜೆಪಿ ಗೆ ಗೆಲುವು ಖಚಿತ. ಹಾಲು ಉತ್ಪಾದಕರ ಸಂಘಗಳಿಂದ ಸೋನಾಲ್ ಧರ್ಮೇಗೌಡಗೆ ಅವಕಾಶ ಹೆಚ್ಚಿದ್ದು ಕಡೂರಿನ ಸುರೇಶ್ ಮತ್ತು ಜಗದೀಶ್ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚು.

ಟಿ.ಎ.ಪಿ.ಸಿ.ಎಂ.ಎಸ್ ನಿಂದ ಶೃಂಗೇರಿ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗೆ ಅನುವು ಮಾಡಿಕೊಡುವ ಸಾಧ್ಯತೆ ಹೆಚ್ಚು. ಇತರೆ ಸಹಕಾರ ಸಂಘಗಳಿಂದ ಹಾಲಿ ನಿರ್ದೇಶಕ ಟಿ.ಎಲ್.ರಮೇಶ್ ಸ್ಪರ್ಧೆ ಮಾಡುತ್ತಾರೆ ಎನ್ನುವಾಗ ಎರಡು ಸಾರಿ ಬಯಲು ಪ್ರದೇಶ ಕ್ಕೆ ಅವಕಾಶ ಕೊಡಲಾಗಿದೆ ಈ ಬಾರಿ ಚಿಕ್ಕಮಗಳೂರಿನವರಿಗೆ ಈಶ್ವರಳ್ಳಿ ಮಹೇಶ್ ಗೆ ಅವಕಾಶ ಮಾಡಿಕೊಡಬಹುದು ಎನ್ನಲಾಗಿದೆ.ಇದರ ಮಧ್ಯೆ ಜನತಾದಳದ ಎಂ.ನರೇಂದ್ರ ಪ್ರಯತ್ನ ನಡೆಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು ಜಿಲ್ಲೆಯ ಐದು ಜನ ಕಾಂಗ್ರೆಸ್ ಶಾಸಕರು ಯಾರನ್ನು ಯಾರು ಒಪ್ಪಿಕೊಂಡು ಅಪ್ಪಿ ಕೊಳ್ಳುತ್ತಾರೆ ಎಂಬುದು ನಿಗೂಢವಾಗಿದೆ.ಬಿಜೆಪಿಯಲ್ಲೂ ಅತೃಪ್ತಿ ಇದ್ದು ಸಹಕಾರ ಭಾರತಿ ಹೆಸರಿನಲ್ಲಿ ಮೂರು ಜನ ಸ್ಪರ್ಧೆ ಮಾಡುವ ಪ್ರಯತ್ನ ನಡೆಸಿರುವುದು ಕುತೂಹಲಕಾರಿಯಾಗಿದೆ.

DCC Bank elections are cool!

Share

Leave a comment

Leave a Reply

Your email address will not be published. Required fields are marked *

Don't Miss

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು. ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಗ್ರಾಮದ ನಿವಾಸಿಯಾಗಿರುವ ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಕರ್ನಾಟಕದಲ್ಲಿ ಒಟ್ಟು 54...

ವಾಹನಗಳ ಮಿರರ್ ತಗುಲಿ-ಕತ್ತಿ-ಬಂದೂಕು ಝಳಪಿಸಿದ ಗಲಾಟೆ

ಚಿಕ್ಕಮಗಳೂರು: ವಾಹನಗಳ ಮಿರರ್ ಪರಸ್ಪರ ತಗುಲಿದ ಸಣ್ಣ ವಿಚಾರ ಕತ್ತಿ-ಬಂದೂಕು ಝಳಪಿಸುವ ಹಂತಕ್ಕೆ ತಲುಪಿರುವ ಆರೋಪವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸರವಳ್ಳಿ ಗ್ರಾಮದಲ್ಲಿ ಜುಲೈ 2...

Related Articles

ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ

ಕಡೂರು: ಕಳೆದ ಜೂನ್‌ನಲ್ಲಿ ಗಮನ ಬೇರೆಡೆಗೆ ಸೆಳೆದು ಗ್ರಾಹಕರೋರ್ವರ ಖಾತೆಯಿಂದ ₹3.90 ಲಕ್ಷಡ್ರಾ ಮಾಡಿರುವ ಪ್ರಕರಣ...

ಶಿವಮೊಗ್ಗ-ಶೃಂಗೇರಿ ಮಾರ್ಗ ಪರಿಗಣಿಸಿ

ಚಿಕ್ಕಮಗಳೂರು: ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ,...

ಕವಿಕಲ್ ಮಠದ ರಸ್ತೆಯಲ್ಲಿ ಹುಲಿ ದಿಢೀರನೆ ಪ್ರತ್ಯಕ್ಷ

ಚಿಕ್ಕಮಗಳೂರು: ಕಾಫಿನಾಡಿನ ಹಸಿರು ಕಾಡುಗಳ ನಡುವೆ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಮರೆಯಲಾಗದ ಅನುಭವವೊಂದು ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ...

ಭದ್ರಾ ಜಲಾಶಯದ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸೂಚನೆ

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು,...