Home Latest News ಸಹಕಾರ ಸಚಿವ ರಾಜಣ್ಣನ ಕಣ್ಣು ? ರೇವಣ್ಣನ ನಿಂಬೆ ಹಣ್ಣು !
Latest NewschikamagalurHomenamma chikmagalur

ಸಹಕಾರ ಸಚಿವ ರಾಜಣ್ಣನ ಕಣ್ಣು ? ರೇವಣ್ಣನ ನಿಂಬೆ ಹಣ್ಣು !

Share
Share

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಸಹಕಾರ ಸಚಿವ ಕೆ.ಎನ್.ರಾಜಣ್ಣರವರಿಗೆ ಭರ್ತಿ 75 ವರ್ಷ. ರಾಜಣ್ಣ ಎಂದರೆ ನೇರ, ನೇರಾ ಸಿಡಿ ಗುಂಡಿನಂತಹ ಮಾತು ಜತೆಗೆ ಗತ್ತು .

ಹಟ ಎಂದರೆ ಹಟ ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಗೌಡರ ವಿರುದ್ಧ ರಣ ಕಹಳೆ ಊದಿ ಸೋಲಿಸಿದ್ದವರು ಈಗಲೂ ತಮ್ಮದೇ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಡಿಚ್ಚಿ ಕೊಡುತ್ತಾ ಇರುತ್ತಾರೆ.

ರಾಜಣ್ಣ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ರೇವಣ್ಣನ ಆಟ ನಡೆಯದಂತೆ ಬಂದುಬಸ್ತೂ ಮಾಡಿದ್ದಾರೆ.ಯಾರಿಗೂ ಕೇರ್ ಮಾಡದೆ ವಾಕ್ ದಾಳಿ ಮುಂದುವರೆಸಿದ್ದಾರೆ.ಪ್ರಜ್ವಲ್ ರೇವಣ್ಣನ ಸಿ.ಡಿ.ಕೇಸ್ ಗತಿಯ ದಿಕ್ಕು ಬದಲಿಸಿದರೆ ರಾಜಣ್ಣನನ್ನು ಹನಿ ಟ್ರಾಪ್ ಮಾಡಲು ಹೋದವರ ಮುಖಕ್ಕೆ ಹಣಿದು ಕಳುಹಿಸಿ ದೂರು ನೀಡಿದರು ಆಗಿಯೇ ತಣ್ಣಗಾದ ವಿಚಾರ ಮಾತ್ರ ನಿಗೂಢವಾಗಿದೆ.

ರೇವಣ್ಣನ ನಿಂಬೆ ಹಣ್ಣಿನ ಬಗ್ಗೆ ಕೇರ್ ಲೆಸ್ ಆದರೂ ಎಚ್ಚರಿಕೆಯಿಂದ ಇದ್ದವರು ಆದರೆ ಈಗ ಕಣ್ಣ ಮುಂದೆ ಮತ್ತೆ,ಮತ್ತೆ ನಿಂಬೆಹಣ್ಣು ಬರುತ್ತಿರುವುದು ಏಕೆ ?

ರಾಜಣ್ಣ ನಾಸ್ತಿಕ ಕೂಡ ದೇವರು,ಮಾಟ,ಮಂತ್ರದ ನಂಬದವರು ಈಗ ನಂಬುವಂತೆ ಆಗಿರುವುದು ಏಕೆ ?

ರಾಜಣ್ಣ ಹಾಸನ ಜಿಲ್ಲೆಗೆ ಎಂಟ್ರಿ ಕೊಡುವಾಗ ಹತ್ತಾರು ಕಾರುಗಳು, ಹಾರ,ತುರಾಯಿ ಪಟಾಕಿ ಶಬ್ದ ಇರುತ್ತವೆ. ಇತ್ತೀಚೆಗೆ ಭೇಟಿ ನೀಡಿದಾಗ ಕಾರ್ಯಕರ್ತರು ಹಚ್ಚಿದ ಪಟಾಕಿ ಸದ್ದು ಬೆಚ್ಚಿ ಬೀಳುವಂತೆ ಇತ್ತಂತೆ ಇದರಿಂದ ಕಾರು ಬಿಟ್ಟು ಇಳಿಯದ ರಾಜಣ್ಣ ಪಟಾಕಿ ಸಿಡಿತ ನಿಂತ ನಂತರ ಕಾರಿನಿಂದ ಇಳಿಯುವಾಗ ಗನ್ ಮ್ಯಾನ್ ಗಳ ರಕ್ಷಣೆ ನೂರಾರು ಕಾರ್ಯಕರ್ತರ ಪಡೆಯ ಮಧ್ಯೆ ನಿಂತಿರುವಾಗ ತಡವಾಗಿ ಸಿಡಿದ ಪಟಾಕಿಯ ಸಿಡಿ ಕಣ್ಣಿಗೆ ಬಡಿದಿದೆ ಹೌಹಾರಿದ ರಾಜಣ್ಣ ತಕ್ಷಣವೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಆದರೆ ಕಣ್ಣು ಸುಧಾರಣೆ ಆಗಿಲ್ಲ. ಆಗುವಂತೆ ಕೂಡ ಕಾಣುತ್ತಿಲ್ಲ ಎಂದು ಅವರ ಆಪ್ತ ವಲಯದಲ್ಲಿ ಚರ್ಚೆ ಆಗುತ್ತಿದೆ.

ಜೊತೆಗೆ ರೇವಣ್ಣನ ನಿಂಬೆಹಣ್ಣಿನ ಮೇಲೆ ಬಲವಾದ ಸಂಶಯ ಬಂದಿದೆ ನಾಸ್ತಿಕ ರಾಜಣ್ಣ ಕೂಡ ಎಡವಟ್ಟು ಆಗಿದೆ ಎಂದು ಶಪಿಸುತ್ತಾ ನನಗೆ ಹಾಸನ ಜಿಲ್ಲೆಯ ಉಸ್ತುವಾರಿ ಬೇಡ ಎನ್ನುತ್ತಿದ್ದಾರೆ ಎಂದು ಹಾಸನದ ಜನ ಮಾತನಾಡುತ್ತಿದ್ದಾರೆ.

Cooperation Minister Rajan’s eyes? Revanna’s lemon!

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...