Home namma chikmagalur chikamagalur ಚಿಕ್ಕಮಗಳೂರು ಜಿಲ್ಲೆಗೆ “ಬ್ಯಾಡ್” ಬಜೆಟ್ !
chikamagalurHomeLatest Newsnamma chikmagalur

ಚಿಕ್ಕಮಗಳೂರು ಜಿಲ್ಲೆಗೆ “ಬ್ಯಾಡ್” ಬಜೆಟ್ !

Share
Share

ಚಿಕ್ಕಮಗಳೂರು: ಜಿಲ್ಲೆಯ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ “ಬ್ಯಾಡ್” ಬಜೆಟ್ ನೀಡಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಳೆ ಸೀರೆಗೆ ತೇಪೆ ಹಚ್ಚಿದಂತೆ “ಮುಳ್ಳಯ್ಯನ ಗಿರಿ” ಯಿಂದ “ಸೀತಾಳಯ್ಯ ಗಿರಿ” ಮೂಲಕ ಕೈಮಾರದವರಿಗೆ ರೋಪ್ ವೇ ಅಳವಡಿಸುವುದಾಗಿ ಬಜೆಟ್ ನಲ್ಲಿ ಹೇಳಿದ್ದಾರೆ.ಈ ಹಿಂದೆ ಬಸವರಾಜ್ ಬೊಮ್ಮಯಿ ಕೂಡ ಬೊಗಳೆ ಬಿಟ್ಟಿದ್ದರು ಅದು ಕಾರ್ಯರೂಪಕ್ಕೆ ಬರವುದಿರಲಿ ಕಳೆದ ಮೂರು ವರ್ಷಗಳಿಂದ ಇದರ ಸದ್ದು_ಗದ್ದಲವಿರಲಿಲ್ಲಾ.

ಪ್ರವಾಸಿಗರಿಗೆ ಮಾತ್ರ ಇದರ ಉಪಯೋಗವಾಗುತ್ತದೆ.ಇದಕ್ಕೆ ಸರ್ಕಾರಕ್ಕೆ ಆದಾಯ ಬರುತ್ತದೆ ಇದರಿಂದ ಸ್ಥಳೀಯ ರಿಗೆ ಏನು ಪ್ರಯೋಜನ .ಆದರೆ ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗಿದೆ.ಪರಿಸರ ನಾಶ ಮಾಡುವುದಕ್ಕೆ ಇಂತಹ ಯೋಜನೆಗಳು ಬೇಕಾ ಎಂದು ಪರಿಸರವಾದಿಗಳ ಜೊತೆಗೆ ಜನರು ಪ್ರಶ್ನೆ ಮಾಡುತ್ತಾರೆ. ಅಜ್ಜಂಪುರ ತಾಲ್ಲೂಕು ಮತ್ತು ಕಡೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೂಡ ಮುಂದುವರೆದ ಕಾಮಗಾರಿಗಳು.

ಚಿಕ್ಕಮಗಳೂರುನಿಂದ ಬೇಲೂರು ರೈಲ್ವೆ ಕಾಮಗಾರಿ ಕೂಡ ಮುಂದುವರೆದ ಕಾಮಗಾರಿ. ಇವುಗಳ ಯಾವುದೇ ಹೊಸ ಯೋಜನೆಯ ಬಗ್ಗೆ ಪ್ರಸ್ತಾಪ ಕೂಡ ಮಾಡಿಲ್ಲ ಎಂದು ವಿರೋಧ ಪಕ್ಷಗಳ ಜೊತೆಗೆ ಸಾರ್ವಜನಿಕರು ಕೂಡ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಡಳಿತಾರೂಢ ಐವರು ಶಾಸಕರ ಜೊತೆಗೆ ನಾಲ್ಕಾರು “ಗೂಟ”ದ ಕಾರಿನಲ್ಲಿ ಓಡಾಡುವ ಜನರಿದ್ದಾರೆ.

ಆದರೆ ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಯೋಜನೆಗಳ ಬಗ್ಗೆ ಚಕಾರ ಎತ್ತದೆ ತಮ್ಮಗಳ ಅಧಿಕಾರ ಮುಂದುವರೆಸಲು ತಿಣಕಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ಸಹ ಅಸಮಾಧಾನಗೊಂಡಿದ್ದಾರೆ.
ಈ ಅವಧಿಯಲ್ಲಿ ಸರ್ಕಾರ ಮೂರನೆಯ ವರ್ಷದ ಬಜೆಟ್ ಮಂಡಿಸುತ್ತಿದ್ದು ಯಾವುದೇ ಹೊಸ ಯೋಜನೆಗಳು ಬಾರದಿರುವುದು ಬರೀ ” ಗ್ಯಾರಂಟಿ ” ಗಂಟೆ ಬಾರಿಸುತ್ತಿರುವುದು ಬಿಟ್ಟರೆ ಬೇರೇನೂ ಇಲ್ಲದಂತೆ ಆಗಿದೆ.

ರೈತರಿಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರಮುಖ ಬೆಳೆಗಳ ಬಗ್ಗೆ ತುಟಿ ಬಿಚ್ಚಿಲ್ಲಾ ಸಿದ್ದರಾಮಯ್ಯ ಬಜೆಟ್ ನಲ್ಲಿ ಹೇಳಿದ ವಚನ,ಕವನ ಮತ್ತು ಅಂಕಿ ಅಂಶಗಳಿಗೆ ಚಪ್ಪಾಳೆ ತಟ್ಟುವ ಶಾಸಕರುಗಳು ಇರುವಾಗ,ಕಣ್ಣು, ಕಿವಿ,ಮೂಗಿಲ್ಲದ ಜಿಲ್ಲಾ ಉಸ್ತುವಾರಿ ಸಚಿವ ಕೆ,ಜೆ,ಜಾರ್ಜ್ ಇರುವಾಗ ರೈತರ ಬಗ್ಗೆ ಯೋಚಿಸುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬೇಕಾಗಿದೆ.

ಜಿಲ್ಲೆಯಲ್ಲಿ ಅಡಿಕೆ,ತೆಂಗು, ಮೆಣಸು,ಕಾಫಿ ವಾಣಿಜ್ಯ ಬೆಳೆಗಳು ಹಲವು ರೋಗಗಳಿಗೆ ಒಳಗಾಗಿವೆ.ಬೆಲೆ ಏರುವುದು ಇಳಿಯುವುದು ರೈತರು ನಷ್ಟ ಅನುಭವಿಸಿ ಸೊರಗಿದ್ದಾರೆ.ತೆಂಗು ಬೆಳೆ ನಶಿಸಿ ಹೋಗುತ್ತಿರುವಾಗ ಸರ್ಕಾರ ನೆರವಿಗೆ ಬರಬೇಕು ಆದರೆ ಈ ಬಗ್ಗೆ ಚಕಾರ ಎತ್ತಿಲ್ಲ.ಮಾವು,ಭತ್ತ ಹುಡುಕ ಬೇಕಾಗಿದೆ. ಇನ್ನೂ ಕಾಡು ಪ್ರಾಣಿಗಳ ಕಾಟದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ರೈತರ ಮತ್ತು ಕಾಫಿ ಮತ್ತಿತರ ಬೆಳೆ ನಾಶವಾಗುತ್ತಿದೆ. ಇದಕ್ಕೆ ಪರಿಹಾರ ಇಲ್ಲವೇ ಇಲ್ಲ.

ಗ್ಯಾರಂಟಿ, ಗ್ಯಾರಂಟಿ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲೆಯ ಶಾಸಕರುಗಳು ಪೂರಕ ಬಜೆಟ್ ನಲ್ಲಾದರೂ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಲಿ ಎಂದು ಜನ ಒತ್ತಾಯ ಮಾಡುತ್ತಿದ್ದಾರೆ.

“Bad” budget for Chikmagalur district!

Share

Leave a comment

Leave a Reply

Your email address will not be published. Required fields are marked *

Don't Miss

35 ಲಕ್ಷ ರೂ.ವೆಚ್ಚದ ಗ್ರಾಮಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಚಿಕ್ಕಮಗಳೂರು: ಗ್ರಾಮಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳು ತಮಗೆ ದೊರಕಿದ ಅವಕಾಶವನ್ನು ಜನರ ಕಲ್ಯಾಣಕ್ಕಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ತಾಲೂಕಿನ ಬೆಳವಾಡಿಯಲ್ಲಿ ೩೫ ಲಕ್ಷ ರೂ.ವೆಚ್ಚದ ಗ್ರಾಮಪಂಚಾಯಿತಿ...

ಮಾನವಧರ್ಮಕ್ಕೆ ಜಯವಾಗಲಿ- ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ಬಾಳೆಹೊನ್ನೂರು: “ಧರ್ಮ,‌ ಪೂಜೆ, ಭಕ್ತಿ ಇವು ಪ್ರದರ್ಶನಕ್ಕೆ ಇರುವಂತಹ ಸಂಗತಿಗಳಲ್ಲ. ಇವು ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ಇರುವ ಸಾಧನಗಳು. ನನ್ನ ಧರ್ಮ ಸರಿ, ನಿನ್ನ ಧರ್ಮ ತಪ್ಪು ಎನ್ನುವ ಕಲ್ಪನೆ ಎಲ್ಲಿಯೂ...

Related Articles

ಕಾಂಗ್ರೆಸ್ ಮುಖಂಡ ರಾಹಿಲ್ ಶರೀಫ್‌ ಬಂಧನ

ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಕಾಂಗ್ರೆಸ್ ಮುಖಂಡೆ ಚೇತನಾ ಅವರ ಮೇಲೆ ಲಾಂಗ್‌ನಿಂದ ಹಲ್ಲೆ...

ಪ್ರವೀಣ್ ಎಚ್.ಟಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 720ನೇ ರ್‍ಯಾಂಕ್

ಚಿಕ್ಕಮಗಳೂರು: ಕಡೂರು ತಾಲೂಕಿನ ಹುಲಿಕೆರೆ ಗ್ರಾಮದ ಯುವ ಪ್ರತಿಭೆ ಪ್ರವೀಣ್ ಎಚ್.ಟಿ. ಈ ಸಾಲಿನ ಯುಪಿಎಸ್‌ಸಿ...

ತೇಗೂರು ಸರ್ಕಾರಿ ಶಾಲೆಯ ಶತಮಾನೋತ್ಸವ

ಚಿಕ್ಕಮಗಳೂರು:  ನಮ್ಮ ಜೀವನದಲ್ಲಿ ನಾವು ಗಳಿಸುವ ಸಂಪತ್ತು ಶಾಶ್ವತವಲ್ಲ, ಆದರೆ ನಾವು ಪಡೆಯುವ ಶಿಕ್ಷಣ ಮತ್ತು...

ಆಮಿಷಗಳಿಗೆ ಬಲಿಯಾಗಬೇಡಿ-ಗ್ರಾಹಕರು ಹಕ್ಕುಗಳ ಬಗ್ಗೆ ಜಾಗೃತರಾಗಲಿ

ಚಿಕ್ಕಮಗಳೂರು: ಇಂದಿನ ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಆಕರ್ಷಕ ಆಮಿಷಗಳಿಗೆ ಬಲಿಯಾಗದೆ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ...