ಚಿಕ್ಕಮಗಳೂರು: ಉದ್ಯಮಿ ತೇಜ್ಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೈದಿರು ವ ಅಕ್ರಮ ವಲಸೆ ಕಾರ್ಮಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಮುಖಂಡರುಗಳು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಸ್ಥಳೀಯ ನಿವಾಸಿಗಳ ಮೇಲೆ ಬಿಹಾರಿ ಕಾರ್ಮಿಕರು ಮನಬಂದಂತೆ ಹಲ್ಲೆ ಮಾಡಿ ಹತ್ಯೆಗೈದಿರುವುದು ಖಂಡನೀಯ. ಈ ಹಲ್ಲೆ ಮಾಡಿ ಹತ್ಯೆಗೈದ ಆರೋಫಿಗಳು ಪೊಲೀಸ್ ಇಲಾಖೆ ಪತ್ತೆ ಮಾಡಿದ್ದು ಅವರುಗಳಿಗೆ ಕಠಿಣ ಶಿಕ್ಷೆಗೆ ಗುರಿಪ ಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆ ಶಾಂತಿಯುತವಾದ ಮಲೆನಾಡು ಪ್ರದೇಶ. ಇಲ್ಲಿನ ಜನ ಸೌಮ್ಯ ಸ್ವಭಾವದವರು. ಇತ್ತೀಚೆಗೆ ಅಕ್ರ ಮ ಬಾಂಗ್ಲಾ ನಿವಾಸಿಗಳು ರೈಲ್ವೆ ಮೂಲಕ ನಗರ ಪ್ರದೇಶ ತಲುಪಿ ಅಲ್ಲಿಂದ ತೋಟ ಹಾಗೂ ಇತರೆ ಪ್ರದೇ ಶಗಳಲ್ಲಿ ಅಕ್ರಮ ಚಟುವಟಿಕೆಗಳ ಮೂಲಕ ಹಳ್ಳಿಗಳಲ್ಲಿ ಸಾರಾಯಿ ಮಾರಾಟ, ಕಳ್ಳತನ, ಗುಂಪು ಘರ್ಷಣೆ ಯಲ್ಲಿ ತೊಡಗಿ ಜನರಲ್ಲಿ ಭಯದ ವಾತಾವರಣ ಮೂಡಿಸುತ್ತಿದ್ದಾರೆ ಎಂದರು.
ಬಿಹಾರಿ ಹಾಗೂ ಅಸ್ಸಾಂ ಕಾರ್ಮಿಕರು ಜಿಲ್ಲೆಯಲ್ಲಿ ಹೇರಳವಾಗಿ ಬಂದು ಕಾರ್ಮಿಕ ವೃತ್ತಿಯಲ್ಲಿ ಪ್ರವೇ ಶಿಸಿ ತದನಂತರ ಇಲ್ಲಿಯ ಜನರ ಮೇಲೆಯೇ ಹಲ್ಲೆ, ಗಲಾಟೆಗಳು ನಡೆಯುತ್ತಿರುವುದು ತಿಳಿದಿರುವ ವಿಷ ಯ. ಹೀಗಾಗಿ ಇಂಥ ಅಕ್ರಮ ಬಾಂಗ್ಲಾ ನಿವಾಸಿಗಳು, ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಸ್ಥಳೀಯರಿಗೆ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತಿದೆ. ವಲಸೆ ಕಾರ್ಮಿಕರು ದಿನನಿತ್ಯ ಒಂ ದಲ್ಲೊಂದು ಅಕ್ರಮ ಚಟುವಟಿಕೆ ಪ್ರಕರಣಗಳಲ್ಲಿ ತೊಡಗುತ್ತಿದ್ದಾರೆ. ಕೂಡಲೇ ಅಕ್ರಮ ವಲಸೆ ಕಾರ್ಮಿಕರ ನ್ನು ಪತ್ತೆ ಮಾಡಿ ನಿರ್ದಿಷ್ಟ ಕಾನೂನು ರೂಪಿಸಬೇಕು. ವಿಳಂಭ ಧೋರಣೆ ಅನುಸಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಎಸ್.ಡಿ.ಎಂ ಮಂಜು, ಯತೀಶ್, ಹೆಚ್.ಕೆ.ಕೇಶವಮೂರ್ತಿ, ವೈ.ಜಿ.ಸುರೇಶ್, ಬೀರಪ್ಪ, ನಂಜುಂಡಪ್ಪ, ರಾಜಕುಮಾರ್, ರೇವನಾಥ್, ಕೃಷ್ಣಮೂರ್ತಿ, ಗುರು, ಧರ್ಮ ರಾಜ್, ಯೋಗೀಶ್, ಚಂದ್ರು, ರಾಜು, ಶೇಖರ್ ಹಾಜರಿದ್ದರು.
Appeal to SP to take disciplinary action against illegal migrant workers
Leave a comment