ಚಿಕ್ಕಮಗಳೂರು: ಪ್ರೌಢಶಾಲಾ ಹಂತದಲ್ಲಿ ತೃತೀಯ ಭಾಷೆ ಪರೀಕ್ಷೆಯಲ್ಲಿ ಎಸ್.ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ಕೈಬಿಟ್ಟು ಬದಲಾಗಿ ಫಲಿತಾಂಶದಲ್ಲಿ ಅಂಕಗಳನ್ನು ಪರಿಗಣಿಸುವಂತೆ ಆಗ್ರಹಿಸಿ ಜಿಲ್ಲಾ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘವು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರಾಮಸ್ವಾಮಿ ನಾಯ್ಕ ತೃತಿಯ ಭಾಷೆಯ ಅಂಕಗಳ ನ್ನು ೨೦೨೬ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಪರಿಗಣಿಸದಿರುವಂತೆ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ಕೈಕೊಂಡಿರುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯ ಮೇಲೆ ಕೆಟ್ಟ ಪರಿ ಣಾಮ ಬೀರಿದಂತಾಗಿದೆ ಎಂದರು.
ಹಿಂದಿ ಭಾಷೆ ಬಗ್ಗೆ ಯಾವುದೇ ತಜ್ಞರು, ಶಿಕ್ಷಕರು, ಪಾಲಕರು ಅಥವಾ ವಿದ್ಯಾರ್ಥಿಗಳಿಂದ ಅಭಿಪ್ರಾ ಯವನ್ನು ಸಂಗ್ರಹಿಸದೇ ದಿಡೀರನೇ ಈ ನಿರ್ಧಾರ ಕೈಗೊಂಡಿರುವುದು ದುಃಖಕರ ಸಂಗತಿ. ತೃತೀಯ ಭಾ ಷೆಯನ್ನು ವಿದ್ಯಾರ್ಥಿಗಳಲ್ಲಿ ಭಾಷಾ ಸಾಮರ್ಥ್ಯವನ್ನು ಅಭೀವೃದ್ದಿಪಡಿಸುವುದಲ್ಲದೇ ಸಂವಹನ ಕೌಶಲ್ಯಗಳ ನ್ನು ತರಗತಿಗಳಲ್ಲಿ ಬೆಳೆಸಲು ಹಕ್ಕನ್ನು ಮೊಟಕುಗೊಳಿಸಿದಂತೆ ಎಂದರು.
ಕಳೆದ ಏಳು ದಶಕಗಳಿಂದ ನಡೆದುಕೊಂಡು ಬಂದಿರುವ ಶಿಕ್ಷಣ ನೀತಿಯನ್ನು ಬದಲಾಯಿಸುವುದು ನ್ಯಾಯ ಸಮ್ಮತವಾದ ತೀರ್ಮಾನವಲ್ಲ. ಪ್ರೌಢಶಾಲಾ ಶಿಕ್ಷಣದಲ್ಲಿ ತೃತೀಯ ಭಾಷೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಅಡ್ಡಿಪಡಿಸಿದಂತಾಗುತ್ತದೆ ಹಾಗೂ ಶಿಕ್ಷಕರ ಆತ್ಮಸ್ಥೈರ್ಯವನ್ನು ಕುಂದಿಸದಂತಾಗಲಿದೆ ಎಂದು ತಿಳಿಸಿದರು.
ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಯನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ಗ್ರೇಡಿಂಗ್ ಕೈಬಿಟ್ಟು, ಬದಲಾಗಿ ತೃತೀಯ ಭಾಷೆಯ ಅಂಕಗಳನ್ನು ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಪರಿಣಿಸಬೇಕು. ಇದು ಭಾಷಾ ಅಧ್ಯಯನ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಶಿಕ್ಷಕರಿಗೂ ತಮ್ಮ ಪರಿಶ್ರಮಕ್ಕೆ ಸಮರ್ಪಕ ಮಾನ್ಯತೆ ದೊರೆದಂತಾಗಲಿದೆ ಎಂದರು.
ಅಲ್ಲದೇ ವಿದ್ಯಾರ್ಥಿಗಳು ಸ್ವ ಇಚ್ಚೆಯಂತೆ ತಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಂಡು ತೇರ್ಗಡೆ ಹೊಂದಿ ಜೀವನವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡಲು ಸರ್ಕಾರ ನಿರ್ದೇಶನ ನೀಡ ಬೇಕು ಎಂಬುದು ಹಿಂದಿ ಶಿಕ್ಷಕರ ಮೂಲ ಒತ್ತಾಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಷರೀಫ್, ಖಜಾಂಚಿ ಎನ್.ಜಿ.ಚಂದ್ರಪ್ಪ, ಶಿಕ್ಷಕರಾದ ದೀಪಾ, ರೇಖಾ, ಪವಿತ್ರ, ರೂಪ, ವಿಶ್ವನಾಥ್, ಶ್ರೀನಿವಾಸ್, ಪ್ರಭಾಕರ್, ಪದ್ಮಾವತಿ, ಉಷಾ, ಸುನೀತಾ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.
Appeal to abandon grading and consider result scores
Leave a comment