ಚಿಕ್ಕಮಗಳೂರು: ಬಿ.ಜೆ.ಪಿ ಮುಖಂಡ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಫೇರ್ ಜೊತೆಗೆ ಹೋಂ ಸ್ಟೇ ಒಳಹೊಕ್ಕು ಬಟ್ಟೆ ಬಿಚ್ಚುವ ಸಮಯದಲ್ಲಿ ಈತನನ್ನು ಹಿಂಬಾಲಿಸಿ” ಕೆನ್ನೆ”ಗೆ ಬಾರಿಸಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತು.
ಆನಂದ ಮಯಾ ಈ ಸಮಯ ಎಂದು ಬಟ್ಟೆ ಬಿಚ್ಚಲು ರೆಡಿಯಾಗುತ್ತಿದ್ದ ಆನಂದನ ಮುಖವಾಡ ಕಳಚಿ ಬೀಳುವಂತ ಪಟೀರ್,ಪಟೀರ್ ಎನ್ನುವ ಪೆಟ್ಟು ಮುಖದ ಮೇಲೆ ಬೀಳುತ್ತದೆ. ಬಾ ಪದ್ದು,ಬಾ ಪದ್ದು ಮಾತನಾಡುವ ಎಂದು ಮುಗ್ದ ಹೋರಿ ಕರವಿನ ರೀತಿ ಗೋಗರೆದವನ ಸ್ಥಿತಿ ಬೇಲಿ ಹಾರುವ ಹೋರಿಗೆ ಬೀಜ ಹೊಡೆದಂತೆ ಆಗಿತ್ತು.
ಈತನಿಗೆ ಹಗ್ಗ ಕಡಿಯುವ ಚಾಳಿ ನಿನ್ನೆ ಮೊನ್ನೆಯದಲ್ಲ ಅಫೇರ್ ಸಹಿತ ಕೂಡಿ ಹಾಕಿ ರಂಪ ರಾಮಾಯಣ ಮಾಡಬಹುದಿತ್ತು.ಆದರೆ ಮಹಿಳೆಯ ಭವಿಷ್ಯ ಮುಖ್ಯ ಎಂದು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ರೈಡ್ ತಂಡ ಇವನು ಮತ್ತೇಲ್ಲೂ ಹಗ್ಗ ಕಡಿಯದಂತೆ ಇರಲಿ ಎಂದು ಹೇಳುತ್ತಾರೆ.
ಈತ ಜೂಜುಬಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಮುಖ್ಯ ಮಂತ್ರಿ ಹುದ್ದೆ ಎಂದು ವರ್ತಿಸುತ್ತಿದ್ದ ಅವನ ಸ್ಟೈಲ್ ಮಾತು ಕತೆ ಜನರನ್ನು ಮಾತನಾಡಿಸುವ ರೀತಿ ನೋಡಿದಾಗ ಇವನ್ಯಾರೋ ದೊಡ್ಡ ಆಫೀಸರ್ ಎಂದು ತಿಳಿಯ ಬೇಕಿತ್ತು.ಆದರೆ ಮೊನ್ನೆ ಗೂಸಾ ಬಿದ್ದ ಮೇಲೆ ಈತ ಬೇಲಿ ಹಾರುವ ಗಿರಾಕಿ ದೈನೇಶಿಯಾಗಿ ಬೇಡುತ್ತಿದ್ದ.
ಪ್ರಾಧಿಕಾರದ ಅಧ್ಯಕ್ಷನಾದಗ ಕಲ್ಲುದೊಡ್ಡಿ ಬಳಿ ನಿರ್ಮಾಣವಾಗಿರುವ ವಾಜಪೇಯಿ ಲೇಔಟ್ ಕರ್ಮಕಾಂಡದಲ್ಲಿ ಮಾಡಿದ ಕಾಸು ಲೆಕ್ಕ ಮಾಡಲು ಒಬ್ಬನನ್ನು ಇಟ್ಟುಕೊಂಡಿದ್ದ ಎಂದು ಪ್ರಾಧಿಕಾರದ ಏಜೆಂಟ್ ರು ಈಗ ಬಾಯಿ ಬಿಡುತ್ತಿದ್ದಾರೆ.
ವಾಜಪೇಯಿ ಲೇಔಟ್ ಜಾಗ ಯಾವದೇ ರೀತಿಯಲ್ಲಿ ಕಾನೂನು ಬದ್ದವಾಗಿಲ್ಲ.ಲೇಔಟ್ ಅಲಿ ನೇಷನ್ ಆಗಿಲ್ಲ. ಮೂಲ ಖಾತೆದಾರರ ಹೆಸರಿನಲ್ಲಿ ಜಮೀನಿಗಳು ಇವೆ ಎಂದು ಪ್ರಾಧಿಕಾರದ ಮೂಲಗಳು ಹೇಳುತ್ತಿವೆ.ಆದರೆ ಆಕ್ರಮವಾಗಿ ಮನೆ ಕಟ್ಟಲು ನೆರವಿಗೆ ಪುಕ್ಕಟ್ಟೆ ನಿಲ್ಲಲು ಸಾಧ್ಯವಿಲ್ಲ ಇದರಲ್ಲಿ ಬೇಕಾದಷ್ಟು ಹಣ ಮಾಡಿಕೊಂಡು ಈಗ ಸೆರಗಿನ ಸಂದಿಗೆ ಹಾತೊರೆಯುತ್ತಿದ್ದಾನೆ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.
ಬೇಲಿ ಹಾರಿ ಸಿಕ್ಕಿಕೊಂಡು ಹೊಡೆತ ತಿಂದು ಎರಡು ದಿನವಾಗಿದೆ ಆನೇಕ ಮಾಧ್ಯಮ ಗಳಲ್ಲಿ ಸುದ್ದಿ ಬಂದಿವೆ ಹೋಂ ಸ್ಟೇಗೆ ಬಂದ ಅಧಿಕಾರಗಳಿಗೆ ಕೈ ಬೆಚ್ಚುಗೆ ಮಾಡಿ ಅಡಗಿ ಕುಳಿತ್ತಿದ್ದಾನೆ .ಜೊತೆಗೆ ಈತನನ್ನು ಕೆಲವರು ಹುಡುಕುತ್ತಿರುವುದು ಏಕೆ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.
Affair Anandana Andar Bahar
Leave a comment