ಬೀರೂರು: ಮನುಷ್ಯತ್ವ ಮರೆತು ಹಣಕ್ಕಾಗಿ ಹದಿನಾರರ ಬಾಲಕಿಯನ್ನು ಅಜ್ಜಿ ನಾಗಮ್ಮ ಮತ್ತು ಅಪ್ಪ ಗಿರೀಶ್ ವೇಶ್ಯೆ ವಾಟಿಕೆಯ ಕಿಂಗ್ ಪಿನ್ ಗಳಾದ ಭರತ್ ಶೆಟ್ಟಿಯ ಜೊತೆಗೆ ಡೀಲಿಂಗ್ ನಡೆಸಿದ ಅಮಾನವೀಯ ಘಟನೆ ಅಜ್ಜಂಪುರ ತಾಲ್ಲೂಕಿನ ಬೀರೂರು ಪೊಲೀಸ್ ಠಾಣೆಯ ವ್ಯಾಪ್ತಿಯ ನಾಗವಂಗಲದಲ್ಲಿ ನಡೆದಿದೆ .
ಅಜ್ಜಿ ನಾಗಮ್ಮ(65) ಭರತ್ ಶೆಟ್ಟಿ ಗೆ(52) ಮೊದಲಿನಿಂದಲೂ ಗೆಳೆತನ ಇತ್ತು ಎನ್ನಲಾಗಿದೆ. ವೇಶ್ಯೆವಾಟಿಕೆಗೆ ಸಂಬಂಧಿಸಿದ ದೂರು ಕಡೂರು ಪೊಲೀಸ್ ಠಾಣೆಯಲ್ಲಿ ನಾಗಮ್ಮನ ಮೇಲೆ ದೂರು ದಾಖಾಲಾಗಿದೆ.ಇದೇ ರೀತಿಯಲ್ಲಿ ಭರತ್ ಶೆಟ್ಟಿ ಮೇಲೆ ಮೂಡಬಿದಿರೆ ಮತ್ತು ಕಾರ್ಕಳ ದಲ್ಲಿ ದೂರುಗಳು ದಾಖಲಾಗಿವೆ.
ಡಿಸೆಂಬರ್ 20 ರಂದು ಅಜ್ಜಿ ನಾಗಮ್ಮ ಬಾಲಕಿ ಅಪ್ಪ ಗಿರೀಶ್ ಸೇರಿ ಬಾಲಕಿಯನ್ನು ಪುಸಲಾಯಿಸಿ ಮೂಡಬಿದಿರೆಗೆ ಕರೆದುಕೊಂಡು ಹೋಗಿ ಶೇಖರ್ ಶೆಟ್ಟಿ ಎಂಬುವನ ಮನೆಯಲ್ಲಿ ಇರಿಸಿ ವೇಶ್ಯೆ ವಾಟಿಕೆ ನಡೆಸಿದ್ದಾರೆ.ಇಲ್ಲಗೆ ಹಲವಾರು ಗಿರಾಕಿಗಳು ಬಂದು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಹಲವು ದಿನಗಳು ಕಾಣೆಯಾಗಿದ್ದ ಬಾಲಕಿ ಹಿಂತಿರುಗಿ ಊರಿಗೆ ಬಂದಾಗ ಅತ್ತೆ ಪವಿತ್ರ ವಿಚಾರಿಸಿದಾಗ ಅನುಮಾನ ಬರವಂತೆ ವರ್ತಿಸಿದ್ದಾಳೆ ಮತ್ತಷ್ಟು ಪ್ರಶ್ನೆ ಮಾಡಿದಾಗ ವಿಚಾರ ತಿಳಿದು ಬಂದಿದೆ ತಕ್ಷಣ ಬೀರೂರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿದ್ದಾರೆ.ಪೋಕ್ಸೊ ಮತ್ತು ಅಟ್ರಾಸಿಟಿ ದೂರು ದಾಖಲಿಸಿ ಕಿಂಗ್ ಪಿನ್ ಭರತ್ ಶೆಟ್ಟಿ ,ನಾಗಮ್ಮ, ಗಿರೀಶ್, ಶೇಖರ್ ಶೆಟ್ಟಿ ಮತ್ತಿತರರನ್ನು ಬಂಧಿಸಿ ಜೈಲು ದಾರಿ ತೋರಿಸಿದ್ದಾರೆ.
ಎಸ್.ಪಿ.ದಯಾಮಾ ಮಾರ್ಗದರ್ಶನದಲ್ಲಿ ಅಡಿಶನಲ್ ಎಸ್.ಪಿ ಮತ್ತು ಡಿ.ವೈ.ಎಸ್.ಪಿ.ಪರುಶರಾಮಪ್ಪ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ತಿಪ್ಪೇಶ್ ಮತ್ತು ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಜ್ಜಿ ನಾಗಮ್ಮನ ಚಟ,ತಂದೆ ಗಿರೀಶ್ ನಿಗೆ ಹಣದಾಸೆ ಭರತ್ ಶೆಟ್ಟಿ ಮತ್ತು ಶೇಖರ್ ಶೆಟ್ಟಿಗೆ ಹಣಗಳಿಸುವ ಆಸೆ ಅಪ್ರಾಪ್ತ ಬಾಲಕಿ ನರಳಿರುವ ಅಮಾನವೀಯ ಘಟನೆಗಳನ್ನು ನೋಡಿದಾಗ ಈ ಸಮಾಜ ಸರಿ ಹೋಗಲು ಸಾಧ್ಯವೇ ಎಂಬ ಪ್ರಶ್ನೆ ಸದಾಕಾಲವೂ ಕಾಡುತ್ತದೆ.
A minor who suffered from his father’s prostitution racket
Leave a comment