Home ಅಜ್ಜಿ-ಅಪ್ಪಾನೇ ದಂಧೆ ಕೋರರು-ವೇಶ್ಯೆ ವಾಟಿಕೆಯಲ್ಲಿ ನರಳಿದ ಅಪ್ರಾಪ್ತೆ
HomeKadurLatest Newsnamma chikmagalur

ಅಜ್ಜಿ-ಅಪ್ಪಾನೇ ದಂಧೆ ಕೋರರು-ವೇಶ್ಯೆ ವಾಟಿಕೆಯಲ್ಲಿ ನರಳಿದ ಅಪ್ರಾಪ್ತೆ

Share
Share

ಬೀರೂರು: ಮನುಷ್ಯತ್ವ ಮರೆತು ಹಣಕ್ಕಾಗಿ ಹದಿನಾರರ ಬಾಲಕಿಯನ್ನು ಅಜ್ಜಿ ನಾಗಮ್ಮ ಮತ್ತು ಅಪ್ಪ ಗಿರೀಶ್ ವೇಶ್ಯೆ ವಾಟಿಕೆಯ ಕಿಂಗ್ ಪಿನ್ ಗಳಾದ ಭರತ್ ಶೆಟ್ಟಿಯ ಜೊತೆಗೆ ಡೀಲಿಂಗ್ ನಡೆಸಿದ ಅಮಾನವೀಯ ಘಟನೆ ಅಜ್ಜಂಪುರ ತಾಲ್ಲೂಕಿನ ಬೀರೂರು ಪೊಲೀಸ್ ಠಾಣೆಯ ವ್ಯಾಪ್ತಿಯ ನಾಗವಂಗಲದಲ್ಲಿ ನಡೆದಿದೆ .

ಅಜ್ಜಿ ನಾಗಮ್ಮ(65) ಭರತ್ ಶೆಟ್ಟಿ ಗೆ(52) ಮೊದಲಿನಿಂದಲೂ ಗೆಳೆತನ ಇತ್ತು ಎನ್ನಲಾಗಿದೆ. ವೇಶ್ಯೆವಾಟಿಕೆಗೆ ಸಂಬಂಧಿಸಿದ ದೂರು ಕಡೂರು ಪೊಲೀಸ್ ಠಾಣೆಯಲ್ಲಿ ನಾಗಮ್ಮನ ಮೇಲೆ ದೂರು ದಾಖಾಲಾಗಿದೆ.ಇದೇ ರೀತಿಯಲ್ಲಿ ಭರತ್ ಶೆಟ್ಟಿ ಮೇಲೆ ಮೂಡಬಿದಿರೆ ಮತ್ತು ಕಾರ್ಕಳ ದಲ್ಲಿ ದೂರುಗಳು ದಾಖಲಾಗಿವೆ.

ಡಿಸೆಂಬರ್ 20 ರಂದು ಅಜ್ಜಿ ನಾಗಮ್ಮ ಬಾಲಕಿ ಅಪ್ಪ ಗಿರೀಶ್ ಸೇರಿ ಬಾಲಕಿಯನ್ನು ಪುಸಲಾಯಿಸಿ ಮೂಡಬಿದಿರೆಗೆ ಕರೆದುಕೊಂಡು ಹೋಗಿ ಶೇಖರ್ ಶೆಟ್ಟಿ ಎಂಬುವನ ಮನೆಯಲ್ಲಿ ಇರಿಸಿ ವೇಶ್ಯೆ ವಾಟಿಕೆ ನಡೆಸಿದ್ದಾರೆ.ಇಲ್ಲಗೆ ಹಲವಾರು ಗಿರಾಕಿಗಳು ಬಂದು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಹಲವು ದಿನಗಳು ಕಾಣೆಯಾಗಿದ್ದ ಬಾಲಕಿ ಹಿಂತಿರುಗಿ ಊರಿಗೆ ಬಂದಾಗ ಅತ್ತೆ ಪವಿತ್ರ ವಿಚಾರಿಸಿದಾಗ ಅನುಮಾನ ಬರವಂತೆ ವರ್ತಿಸಿದ್ದಾಳೆ ಮತ್ತಷ್ಟು ಪ್ರಶ್ನೆ ಮಾಡಿದಾಗ ವಿಚಾರ ತಿಳಿದು ಬಂದಿದೆ ತಕ್ಷಣ ಬೀರೂರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿದ್ದಾರೆ.ಪೋಕ್ಸೊ ಮತ್ತು ಅಟ್ರಾಸಿಟಿ ದೂರು ದಾಖಲಿಸಿ ಕಿಂಗ್ ಪಿನ್ ಭರತ್ ಶೆಟ್ಟಿ ,ನಾಗಮ್ಮ, ಗಿರೀಶ್, ಶೇಖರ್ ಶೆಟ್ಟಿ ಮತ್ತಿತರರನ್ನು ಬಂಧಿಸಿ ಜೈಲು ದಾರಿ ತೋರಿಸಿದ್ದಾರೆ.

ಎಸ್.ಪಿ.ದಯಾಮಾ ಮಾರ್ಗದರ್ಶನದಲ್ಲಿ ಅಡಿಶನಲ್ ಎಸ್.ಪಿ ಮತ್ತು ಡಿ.ವೈ.ಎಸ್.ಪಿ.ಪರುಶರಾಮಪ್ಪ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ತಿಪ್ಪೇಶ್ ಮತ್ತು ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಜ್ಜಿ ನಾಗಮ್ಮನ ಚಟ,ತಂದೆ ಗಿರೀಶ್ ನಿಗೆ ಹಣದಾಸೆ ಭರತ್ ಶೆಟ್ಟಿ ಮತ್ತು ಶೇಖರ್ ಶೆಟ್ಟಿಗೆ ಹಣಗಳಿಸುವ ಆಸೆ ಅಪ್ರಾಪ್ತ ಬಾಲಕಿ ನರಳಿರುವ ಅಮಾನವೀಯ ಘಟನೆಗಳನ್ನು ನೋಡಿದಾಗ ಈ ಸಮಾಜ ಸರಿ ಹೋಗಲು ಸಾಧ್ಯವೇ ಎಂಬ ಪ್ರಶ್ನೆ ಸದಾಕಾಲವೂ ಕಾಡುತ್ತದೆ.

A minor who suffered from his father’s prostitution racket

Share

Leave a comment

Leave a Reply

Your email address will not be published. Required fields are marked *

Don't Miss

ಇಂಧನ ನಿಗಮದ ಅಧ್ಯಕ್ಷರಾಗಿ ಟಿ.ಡಿ.ರಾಜೇಗೌಡರ ಮತ್ತೆ ನೇಮಕ

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರನ್ನು ಮುಂದುವರೆಯಲು ಆದೇಶವನ್ನು ನೀಡಲಾಗಿದೆ. ರಾಜೇಗೌಡರನ್ನು 2024 ರಲ್ಲಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಎರಡು ವರ್ಷದ ಅವಧಿಯ ನೇಮಕಾತಿ...

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

Related Articles

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ...

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...