Home namma chikmagalur chikamagalur ಸುಳ್ಳು ವಂಶವೃಕ್ಷ ಸೃಷ್ಟಿಸಿ ಆಸ್ತಿ ಲಪಟಾಯಿಸಲು ಯತ್ನ: ಐವರ ವಿರುದ್ಧ ಪ್ರಕರಣ
chikamagalurHomeLatest Newsnamma chikmagalur

ಸುಳ್ಳು ವಂಶವೃಕ್ಷ ಸೃಷ್ಟಿಸಿ ಆಸ್ತಿ ಲಪಟಾಯಿಸಲು ಯತ್ನ: ಐವರ ವಿರುದ್ಧ ಪ್ರಕರಣ

Share
Share

ಕಡೂರು: ಸುಳ್ಳು ವಂಶವೃಕ್ಷ ಸೃಷ್ಟಿಸಿ, ಅದರ ಆಧಾರದ ಮೇಲೆ ಪಿತ್ರಾರ್ಜಿತ ಆಸ್ತಿಯ ಖಾತೆ ಬದಲಾವಣೆ ಮಾಡಿಕೊಂಡು ಆಸ್ತಿಯನ್ನು ಲಪಟಾಯಿಸಲು ಒಳಸಂಚು ರೂಪಿಸಿ ವಂಚನೆ ನಡೆಸಿರುವ ಆರೋಪದಡಿ ಸಕ್ಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸಂಬಂಧ ನ್ಯಾಯಾಲಯದ ಪಿಸಿಆರ್ ನಂ.190/2026ರ ಆದೇಶದ ಮೇರೆಗೆ ಸೆ.10ರಂದು ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಮಲ್ಲೇನಿಂಗಣ್ಣ ಮತ್ತು ನಿಂಗಮ್ಮ ದಂಪತಿಗೆ ಅಜ್ಜಣ್ಣ ಹಾಗೂ ಬಮ್ಮಯ್ಯ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಅಜ್ಜಣ್ಣ ಅವರ ಪುತ್ರ ಕಾಳಪ್ಪನಿಗೆ ವಿರೂಪಾಕ್ಷ, ಕಮಲಮ್ಮ, ಆನಂದ್ ಮತ್ತು ವಿಜಯಕುಮಾರ್ ಎಂಬ ನಾಲ್ವರು ಮಕ್ಕಳಿದ್ದಾರೆ. ಮತ್ತೊಂದೆಡೆ ಬಮ್ಮಯ್ಯ ಅವರ ಪುತ್ರನಿಗೂ ಬಮ್ಮಯ್ಯ ಎಂಬ ಹೆಸರಿದ್ದು, ಅವರಿಗೆ ಜಯಮ್ಮ ಹಾಗೂ ಅಕ್ಕಮ್ಮ ಎಂಬ ಇಬ್ಬರು ಪತ್ನಿಯರು ಮತ್ತು ಯೋಗೀಶ್, ಸುಧಾ ಹಾಗೂ ದೇವರಾಜು ಎಂಬ ಮಕ್ಕಳು ಇದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಆದರೆ ಕಾಳಪ್ಪನ ಪುತ್ರ ಆನಂದ್ ಅವರು ಕುಟುಂಬದ ವಂಶಾವಳಿಯ ವಾಸ್ತವಾಂಶ ತಿಳಿದಿದ್ದರೂ, 13.12.2021ರಂದು ಸೃಷ್ಟಿತ ವಂಶವೃಕ್ಷವೊಂದನ್ನು ತಯಾರಿಸಿ ನೋಟರಿ ಮಾಡಿಸಿ, ಸಾಕ್ಷಿದಾರರ ಸಹಿಗಳನ್ನು ಪಡೆದು ಕಡೂರು ತಾಲ್ಲೂಕು ಕಚೇರಿಗೆ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದರ ಆಧಾರದ ಮೇಲೆ RD0038633215635 ಸಂಖ್ಯೆಯ ದೃಢೀಕೃತ ವಂಶವೃಕ್ಷವನ್ನು ಕಂದಾಯ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವಂಶವೃಕ್ಷದಲ್ಲಿ ಮಲ್ಲೇನಿಂಗಣ್ಣ ಅವರ ಪುತ್ರ ಅಜ್ಜಣ್ಣನನ್ನು ‘ಅಜ್ಜಣ್ಣ ಯಾನೆ ಮಲ್ಲೇನಿಂಗಣ್ಣನವರ ಅಜ್ಜಣ್ಣ’ ಎಂದು ತಪ್ಪಾಗಿ ನಮೂದಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಲ್ಲೇನಿಂಗಣ್ಣ ಮತ್ತು ಅಜ್ಜಣ್ಣ ಇಬ್ಬರೂ ಒಂದೇ ವ್ಯಕ್ತಿಗಳು ಎಂಬಂತೆ ಬಿಂಬಿಸುವ ಉದ್ದೇಶದಿಂದ ಈ ರೀತಿಯ ಸುಳ್ಳು ಮಾಹಿತಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಸೃಷ್ಟಿತ ವಂಶವೃಕ್ಷದ ಆಧಾರದ ಮೇಲೆ ಜೋಡಿಹೋಚಿಹಳ್ಳಿ ಗ್ರಾಮದ ಸರ್ವೆ ನಂ.307/2ರ 4 ಎಕರೆ 15 ಗುಂಟೆ ಹಾಗೂ ಸರ್ವೆ ನಂ.323/2ರ 1 ಎಕರೆ 11 ಗುಂಟೆ ಜಮೀನು ಸೇರಿದಂತೆ ಕುಟುಂಬದ ಪಿತ್ರಾರ್ಜಿತ ಆಸ್ತಿಗಳ ಖಾತೆಯನ್ನು ಕರಿಯಮ್ಮ, ವಿರೂಪಾಕ್ಷಪ್ಪ, ಕಮಲಾಕ್ಷಿ, ಆನಂದ್ ಹಾಗೂ ವಿಜಯಕುಮಾರ್ ಅವರ ಹೆಸರಿಗೆ ಜಂಟಿಯಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸದರಿ ಆಸ್ತಿಗಳು ಒಟ್ಟು ಕುಟುಂಬದ ಆಸ್ತಿಗಳಾಗಿದ್ದು, ತಮ್ಮ ಕುಟುಂಬಕ್ಕೂ ಸಮಾನ ಹಕ್ಕು, ಅಧಿಕಾರ ಮತ್ತು ಪಾಲು ಇದೆ ಎಂದು ದೂರುದಾರರು ತಿಳಿಸಿದ್ದಾರೆ. ಈ ವಿಚಾರ ತಿಳಿದಿದ್ದರೂ ಸುಳ್ಳು ವಂಶವೃಕ್ಷ ಸೃಷ್ಟಿಸಿ ಆಸ್ತಿಯ ಖಾತೆ ಬದಲಾವಣೆ ಮಾಡಿಸಿಕೊಂಡು ಕುಟುಂಬದ ಆಸ್ತಿಯನ್ನು ಲಪಟಾಯಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಕರಿಯಮ್ಮ, ವಿರೂಪಾಕ್ಷಪ್ಪ, ಕಮಲಾಕ್ಷಿ, ಆನಂದ್ ಹಾಗೂ ವಿಜಯಕುಮಾರ್ ವಿರುದ್ಧ ವಂಚನೆ ಮತ್ತು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದಡಿ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಪಿಸಿಆರ್ ಸಲ್ಲಿಸಲಾಗಿತ್ತು. ನ್ಯಾಯಾಲಯದ ಆದೇಶದಂತೆ ಸಕ್ಕರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Case registered against five individuals for attempting to misappropriate property by creating a fake family tree.

Share

Leave a comment

Leave a Reply

Your email address will not be published. Required fields are marked *

Don't Miss

ಗುಟ್ಕಾ ನಿಷೇಧ ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರತಿಭಟನೆ

ಚಿಕ್ಕಮಗಳೂರು: ಗುಟ್ಕಾ ನಿಷೇಧದ ಕುರಿತು ರಾಜ್ಯ ಸರ್ಕಾರ ನೀಡಿರುವ ಹೇಳಿಕೆಯಿಂದ ಅಡಕೆ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬದುಕಿಗೆ ಮರಣ ಶಾಸನವಾಗುವ ಗುಟ್ಕಾ ಹಾಗೂ ಅಡಕೆ ನಿಷೇಧ ಪ್ರಸ್ತಾಪವನ್ನು...

ನೂತನ 24 ತಾಲ್ಲೂಕು ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಕಡೂರು ಇಲ್ಲ ….?

ಕಡೂರು: ಬರ ಘೋಷಣೆಯ ಮೊದಲ ಪಟ್ಟಿಯಲ್ಲಿ ಕಡೂರು ತಾಲ್ಲೂಕು ಕೈಬಿಡಲಾಗಿತ್ತು. ಇದೀಗ ಶುಕ್ರವಾರ ಕಡೂರು ಸೇರಿದಂತೆ 24 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಕಂದಾಯ ಇಲಾಖೆ ಅನುಮೋದಿಸಿ ಪಟ್ಟಿ ಬಿಡುಗಡೆ ಮಾಡಿದ್ದರೂ, ಚಿಕ್ಕಮಗಳೂರು...

Related Articles

ಸೆ.14ರಂದು ಮುಳ್ಳಯ್ಯನಗಿರಿ ಸೇರಿದಂತೆ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಚಿಕ್ಕಮಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಚಂದ್ರದ್ರೋಣ ಪರ್ವತ ಸಾಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಸೆಪ್ಟೆಂಬರ್ 14ರಂದು...

ಜನಪರ ಕಾರ್ಯವೇ ನಿಜವಾದ ರಾಜಕಾರಣದ ಮಾನದಂಡ

ಚಿಕ್ಕಮಗಳೂರು: ಅಧಿಕಾರಕ್ಕಾಗಿ ನಾನು ರಾಜಕಾರಣಕ್ಕೆ ಬಂದವನಲ್ಲ, ಸಿದ್ಧಾಂತ ಹಾಗೂ ಜನಪರ ಕಾರ್ಯಗಳಿಗಾಗಿ ರಾಜಕಾರಣಕ್ಕೆ ಬಂದಿz್ದೆÃನೆ. ಅಧಿಕಾರಕ್ಕಿಂತ...

ಜನವಿರೋಧಿ ನೀತಿ ವಿರುದ್ಧ ಬಿಜೆಪಿ ಕಳಸಾಪುರ ಗ್ರಾಮದಲ್ಲಿ ಪ್ರತಿಭಟನೆ

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ರೈತರು, ಬಡವರು, ವೃದ್ಧರು,...

ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

ಚಿಕ್ಕಮಗಳೂರು: ಜನರ ಬದುಕಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಬೇಕು ಎಂಬ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ ಎಂದು ವಿಧಾನ...