ಕಡೂರು: ಬರ ಘೋಷಣೆಯ ಮೊದಲ ಪಟ್ಟಿಯಲ್ಲಿ ಕಡೂರು ತಾಲ್ಲೂಕು ಕೈಬಿಡಲಾಗಿತ್ತು. ಇದೀಗ ಶುಕ್ರವಾರ ಕಡೂರು ಸೇರಿದಂತೆ 24 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಕಂದಾಯ ಇಲಾಖೆ ಅನುಮೋದಿಸಿ ಪಟ್ಟಿ ಬಿಡುಗಡೆ ಮಾಡಿದ್ದರೂ, ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಈ ಪಟ್ಟಿ ಇನ್ನೂ ತಲುಪಿಲ್ಲ ಎನ್ನಲಾಗುತ್ತಿದೆ.ಹೀಗಾದರೆ ಜಿಲ್ಲಾಡಳಿತ ಯಾವ ಮಟ್ಟಿಗೆ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಅನುಮೋದಿಸಿ ರುವ ಬರಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿಯನ್ನು ಶನಿವಾರ ಪ್ರದರ್ಶಿಸಿ ಅವರು ಮಾತನಾಡಿ *2 ತಿಂಗಳಿನಿಂದ ಕಡೂರು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ಕುಕ್ಕಸಮುದ್ರ ಕೆರೆಗೆ ಭದ್ರಾ ನೀರು ಹರಿಸಬೇಕು ಹಾಗೂ ಸಹಕಾರ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು ಎಂದು 40 ಕಿ.ಮೀ ಪಾದಯಾತ್ರೆ ನಡೆಸಿದ್ದರ ಪ್ರತಿಫಲ ಇದಾಗಿದೆ ಎಂದು ನಾನು ಭಾವಿಸುವು ದಿಲ್ಲ. ಆದರೆ, ಕಡೂರಿನ ಜನರು ಪ್ರತಿ ಯೊಂದು ಸೌಲಭ್ಯವನ್ನೂ ಹೋರಾಟದ ಮೂಲಕವೇ ಪಡೆಯಬೇಕಾದ ಅನಿವಾರ್ಯ ಬಂದಿರುವುದು ವಿಷಾದ ನೀಯ’ ಎಂದರು.
‘ಮೊದಲ ಪಟ್ಟಿಯಲ್ಲಿ ಕಡೂರು ತಾಲ್ಲೂಕು ಬರಪೀಡಿತ ಎಂದು ಘೋಷಣೆಯಾಗದಿರುವುದಕ್ಕೆ ಉಪಗ್ರಹ ಆಧಾರಿತ ಮಾಹಿತಿ ಹಾಗೂ ಕೇಂದ್ರದ ಮಾನದಂಡದಂತೆ ಬರ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣವನ್ನು ಆಧರಿಸಿ ಎರಡನೇ ಬರಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಆಡಳಿತ ತಿಳಿಸಿತ್ತು. ಇದೀಗ ದತ್ತಾಂಶಕ್ಕಿಂತ ನೆಲದ ವಾಸ್ತವ ಸ್ಥಿತಿ (ಗ್ರೇಂಡ್ಟ್ರತ್) ಆಧರಿಸಿ ಕಡೂರು ಸೇರಿದಂತೆ ಹೊಸ ಪಟ್ಟಿಯನ್ನು ಅನುಮೋದಿಸಲಾಗಿದೆ ಎಂದು ಕಂದಾಯ ಇಲಾಖೆಯ ಆಯುಕ್ತ ಹೊನ್ನಾಂಬ ತಿಳಿಸಿದ್ದಾರೆ’ ಎಂದು ದತ್ತ ವಿವರಿಸಿದರು.
‘ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆಗೆ ಭಾನುವಾರ ನೀರು ಹರಿಸಲಾಗುವುದು. ನಾಲ್ಕು ದಿನಗಳಲ್ಲಿ ನೀರು ಚಿತ್ರದುರ್ಗ ತಲುಪಲಿದ್ದು, ನಂತರ ಕಡೂರು ತಾಲ್ಲೂಕಿನ ಮೂರು ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮೇಂದ್ರ ತಿಳಿಸಿದ್ದಾರೆ. 4 ದಿನಗಳವರೆಗೆ ಕಾಯುತ್ತೇವೆ’ ಎಂದರು.
ತಾಲ್ಲೂಕಿನಲ್ಲಿ ಬಿತ್ತನೆಯೇ ನಡೆದಿಲ್ಲ. ಬರ ಪರಿಸ್ಥಿತಿ ಇರುವುದರಿಂದ ಸರ್ಕಾರ ಎಕರೆಗೆ ಇಂತಿಷ್ಟು ಪರಿಹಾರ ನೀಡುವುದು ಸೂಕ್ತ. ಪಶುಪಾಲನಾ ಇಲಾಖೆಯು ಮೇವಿನ ಲಭ್ಯತೆ ಕುರಿತು ನೀಡಿರುವ ಮಾಹಿತಿಗೂ, ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ರೈತರು ತಿಳಿಸಿದ ಮಾಹಿತಿಗೂ ವ್ಯತ್ಯಾಸ ಕಂಡುಬರುತ್ತಿದೆ. ಅಧಿಕಾರಿಗಳು ಸರ್ಕಾರಕ್ಕೆ ನೈಜ ಮಾಹಿತಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕೆ. ಬಿದರೆ ಜಗದೀಶ್, ಬಿ.ಟಿ. ಗಂಗಾಧರನಾಯ್ಕ, ಪ್ರೇಮಕುಮಾರ್, ಚೌಳಹಿರಿಯೂರು ಅಶೋಕ್ ಇದ್ದರು.
Kadur is not in the list of the new 24 drought-affected taluks…?
Leave a comment