ಶೃಂಗೇರಿ: ಪಟ್ಟಣದ ಭಾರತೀ ಬೀದಿಯಲ್ಲಿರುವ ಭಗವಾನ್ ಮೇಡಿಕಲ್ ಅಂಗಡಿಯಲ್ಲಿ ಜು.೭ರಂದು ಬೀಗ ಒಡೆದು ಬಾಗಿಲು ತೆರೆದು ನಗದು ಹಣವನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.
ಆರೋಪಿ ಮೂಲತ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಯಡ್ತಾರೆ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ವಿಜಯಪುರದಲ್ಲಿ ವಾಸಗಿರುವ ಅರ್ಶಿತ್ ಅವಿನಾಶ್ ದೋಂಡ್ರೆ ಆಲಿಯಾಸ್ ಮೊಹಮ್ಮದ್ ಅರ್ಶದ್ ಎಂಬ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.
ಆತನಿಂದ ೧,೧೨,೦೦೦ ರೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಂತರ್ ಜಿಲ್ಲೆಗಳಲ್ಲಿ ೨೦ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲೈಪ್ ಕೇರ್ ಮೇಡಿಕಲ್ ಅಂಗಡಿಯ ಬೀಗ ಮುರಿದು ಮೇಡಿಕಲ್ ಅಂಗಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶೃಂಗೇರಿ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಭರತ್ ಕುಮಾರ್ ಡಿ.ಆರ್, ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ಕೆ, ಪಿಎಸ್ಐ ನಾಗರಾಜ್ ಬಿ.ಆರ್, ಸಿಬ್ಬಂದಿಗಳಾದ ರಜಿತ್ ಸಿ.ಹೆಚ್, ಪರಮೇಶ್, ಮದನ್, ಚಾಲಕ ಗೋಪಾಲ್ ರೆಡ್ಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಭಾರತೀ ಬೀದಿಯಲ್ಲಿರುವ ಭಗವಾನ್ ಮೇಡಿಕಲ್ ಅಂಗಡಿಯಲ್ಲಿ ಜು.೭ರಂದು ಬೀಗ ಒಡೆದು ಬಾಗಿಲು ತೆರೆದು ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೃಂಗೇರಿ ಪ್ರಭಾರಿ ಇನ್ಸ್ಪೆಕ್ಟರ್ ಭರತ್ ಕುಮಾರ್ ಡಿ.ಆರ್, ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ಕೆ ಇದ್ದಾರೆ
Accused of stealing cash from medical store arrested
Leave a comment