Home namma chikmagalur chikamagalur ತರೀಕೆರೆ-ಕಡೂರು-ಚಿಕ್ಕಮಗಳೂರು: ಅದಲು-ಬದಲು ಕಾಂಗ್ರೆಸ್, ಬಿಜೆಪಿ ಕಿತ್ತಾಟ !
chikamagalurHomeLatest Newsnamma chikmagalur

ತರೀಕೆರೆ-ಕಡೂರು-ಚಿಕ್ಕಮಗಳೂರು: ಅದಲು-ಬದಲು ಕಾಂಗ್ರೆಸ್, ಬಿಜೆಪಿ ಕಿತ್ತಾಟ !

Share
Share

ಚಿಕ್ಕಮಗಳೂರು: ರಸ್ತೆ ಕಾಮಗಾರಿಗಳು, ಭದ್ರ ಉಪಕಣಿವೆ ಯೋಜನೆಗಳಿಗೆ ಕಾಂಗ್ರೆಸ್ ಶಾಸಕರುಗಳಲ್ಲಿ “ಸಿಟ್ಟು” ಮಡಿಗಟ್ಟಿದೆ. ಇದಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಸದಸ್ಯಮತ್ತು ಬಿಜೆಪಿ ಮುಖಂಡ ಸಿ.ಟಿ.ರವಿ ಹಾದಿ ರಂಪ,ಬೀದಿ ರಂಪ ಮಾಡಿಕೊಂಡು ದೂರುಪ್ರತಿದೂರು ದಾಖಲಿಸುವ ಮೂಲಕ ಮುಂದಿನ ಚುನಾವಣೆಗೆ ಈಗಲೇ ಸ್ಕೆಚ್ ರೆಡಿಮಾಡಿಕೊಳ್ಳುತ್ತಿದ್ದಾರೆ.

ತರೀಕೆರೆ ,ಕಡೂರು ಚಿಕ್ಕಮಗಳೂರು ವಿಧಾನ ಕ್ಷೇತ್ರಗಳ ನೂರಾರು ಕೆರೆ ತುಂಬಿಸುವ ಭದ್ರ ಬುನಾದಿ ಬರೆದವರು ಸಿ.ಟಿ.ರವಿ ಹಟ, ಡಿ.ಎಸ್.ಸುರೇಶ್ ಮತ್ತು ಬೆಳ್ಳಿಪ್ರಕಾಶ್ ನಿಜ ಆದರೆ ಬದಲಾದ ಪ್ರತಿನಿಧಿಗಳು ಅನಿವಾರ್ಯವಾಗಿ ಮುಂದುವರೆಸುವ ಜವಬ್ದಾರಿ ಇರುತ್ತದೆ ಅದರಂತೆ ಶಾಸಕ ತಮ್ಮಯ್ಯ, ಆನಂದ್, ಶ್ರೀನಿವಾಸ್ ನಿಭಾಯಿಸುತ್ತಿದ್ದಾರೆ. ಭದ್ರ ಉಪಕಣಿವೆ ನೀರಾವರಿ ಯೋಜನೆಯ ನೀರು ಹರಿಸುವುದು ತರೀಕೆರೆ ಕ್ಷೇತ್ರದಲ್ಲಿ ಆದರೆ ಕಡೂರು ಕ್ಷೇತ್ರದ ಶಾಸಕ ಯಾವ ಮುಲಾಜು ನೋಡದೆ ತಾವೇ ಹೋಗಿ ನೀರು ಹರಿಸುವ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ.

ಆಗ ಶ್ರೀನಿವಾಸ್ ಇನ್ನೊಂದು ದಿನ ಮತ್ತೊಂದು ಕಾರ್ಯಕ್ರಮ ನಡೆಸಿ ನೀರು ಹರಿಸುವ ಕೆಲಸಕ್ಕೆ ಮತ್ತೊಮ್ಮೆ ಚಾಲನೆ ನೀಡಿದ್ದಾರೆ.ಇದಕ್ಕೆ ಶ್ರೀನಿವಾಸ್ ಅಳಿಯ ಚೇತನ್ ಕೆಂಪರಾಜ್ ತರೀಕೆರೆಯಲ್ಲಿ ಒರಜಿನಲ್ ಕಾಂಗ್ರೆಸ್ ಕಡೂರಿಗೆ ಬಂದ ತಕ್ಷಣ ದಳದ ಅಭ್ಯರ್ಥಿ ಹೀಗಾಗಿ ಅಂದರೆ ಒಂದೇ ಪಕ್ಷದಲ್ಲಿ ಇರುವವರ ಮುಖಗಳು ಉತ್ತರ ,ದಕ್ಷಿಣ ಆದಾಗ ಇನ್ನೂ ಬಿಜೆಪಿ ಶಾಸಕರನ್ನು ಕರೆದು ಕುರಿ,ಕೋಳಿ ಕೊಯ್ದು ಕಾರ್ಯಕ್ರಮ ಮಾಡಲು ಸಾಧ್ಯವೇ ?

ಚಿಕ್ಕಮಗಳೂರು ಕ್ಷೇತ್ರದ ರಾಂಪುರ ಬಳಿಯ ರಸ್ತೆ ಕಾಮಗಾರಿ ನಾನು ಹೇಳಿದಂತೆ ಅಧಿಕಾರಿಗಳು ಮಾಡಿಲ್ಲ ಎಂದು ಶಾಸಕ ತಮ್ಮಯ್ಯ ಕೂಗಾಡಿ ರೇಗಾಡಿದ ನಂತರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದಾಗ ನಗರ ಸಭಾ ಸದಸ್ಯ ಪರಮೇಶ್ ಮತ್ತಿತರರು ಪ್ರತಿಭಟನೆ ನಡೆಸಿದರು. ನಂತರ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಬಂದು ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಗಲಾಟೆ ತಪ್ಪಿಸಲು ಹರಸಾಹಸ ಪಟ್ಟರು.ನಂತರ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದಾಗ ಮತ್ತಷ್ಟು ಪರಿಸ್ಥಿತಿ ಹದಗೆಟ್ಟಿತು.

ಗಲಾಟೆ ಮುಗಿದ ನಂತರ ಪತ್ರಿಕಾ ಹೇಳಿಕೆ ಪ್ರತಿಹೇಳಿಕೆ ಜನರಿಗೆ ಪುಕ್ಕಟ್ಟೆ ಮನರಂಜನೆ ಒದಗಿಸುತ್ತಿದೆ. ಸಿ.ಟಿ.ರವಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಮ್ಮಯ್ಯರ ಗುಣಗಾನ ಮಾಡಿ.ಬಾರ್,ಕಮೀಷನ್ ಗಣಿಗಾರಿಕೆ, ಬೋಜೇಗೌಡರ ಕೃಪೆಯಿಂದ ಶಾಸಕರಾದವರು ಎಂದು ಮೂದಲಿಸಿ ಹೇಳಿಕೆ ನೀಡಿರುವುದು ಕಾಂಗ್ರೆಸ್ ನವರನ್ನು ಕೆರಳಿಸಿ ರವಿ ಜಾತಕ ಪ್ರಶ್ನೆ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಬಯಲು ಸೀಮೆಯಲ್ಲಿ ರಾಜಕೀಯ ಕಿತ್ತಾಟ ನಡೆಯುತಿತ್ತು. ಈಗ ಶೃಂಗೇರಿ ಕ್ಷೇತ್ರದಲ್ಲಿ ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್ ಕಿತ್ತಾಟ ಮತ್ತು ಆಣೆ ಪ್ರಮಾಣಕ್ಕಾಗಿ ದೇವಸ್ಥಾನ ಸುತ್ತುತ್ತಿರುವುದು ರಾಜಕೀಯ ಕಾರಣಕ್ಕೆ ಎಂಬುದು ಕುತೂಹಲ ಕೆರಳಿಸಿದರೆ.ಚಿಕ್ಕಮಗಳೂರು ಕ್ಷೇತ್ರಕ್ಕೆ ಎಂಟ್ರಿ ಆಗಿದೆ.ಇದು ಮುಂದಿನ ಚುನಾವಣೆವರೆಗೆ ಗಲಾಟೆ ಮುಂದುವರೆಯಲಿದೆ. ಚಿಕ್ಕಮಗಳೂರು ಜಿಲ್ಲೆ ಶಾಂತಿಗೆ ಹೆಸರುವಾಸಿಯಾಗಿದೆ. ಅದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗೆ ಹಲವರಿಗೆ ಬೇಸರ ತರಿಸಿದೆ.

Tarikere-Kadur-Chikkamagaluru: Congress and BJP clash alternately!

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಭನ್ವರ್ ಸಿಂಗ್ ಮೀನಾ ನೇಮಕ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆಡಳಿತದ ಸಾರಥಿ ಬದಲಾಗಿದ್ದು, ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿಗಳ ವರ್ಗಾವಣೆಯ ಮಹತ್ವದ ಅದೇಶ ಹೊರಡಿಸಿದೆ. ಜಿಲ್ಲೆಯ ಹಾಲಿ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನ...

ಸಿ.ಟಿ.ರವಿಗೆ ಸೋಲಿನ ಬಳಿಕ ದಲಿತತ್ವ ನೆನಪು

ಚಿಕ್ಕಮಗಳೂರು: ಹಿಂದುತ್ವ ಜಪಿಸುತ್ತಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಸೋಲಿನ ಬಳಿಕ ದಲಿತತ್ವ ನೆನಪಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ ಟೀಕಿಸಿದರು. ಇಪ್ಪತ್ತು ವರ್ಷ ಶಾಸಕರಾಗಿ,...

Related Articles

ಸ್ಥಳೀಯ ಶಾಸಕರ ಪ್ರಚೋದನಾಕಾರಿ ಹೇಳಿಕೆಯಿಂದ ಶಾಸಕ ಸಿ.ಟಿ ರವಿ ಹಲ್ಲೆಗೆ ಯತ್ನ

ಚಿಕ್ಕಮಗಳೂರು: ರಾಂಪುರ ರಸ್ತೆ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಪ್ರಚೋದನಾಕಾರಿ ಹೇಳಿಕೆ ಹಿನ್ನಲೆಯಲ್ಲಿ ಬಿಜೆಪಿ...

ಮೇ 27ಕ್ಕೆ ಅರಣ್ಯ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಹೋರಾಟಗಾರರ ಜಂಟಿ ಸಭೆ ನಿಗದಿಗೊಳಿಸಿ...

ಬೈಕ್‌ ನಿಂದ ಕೆಳಗೆ ಬಿದ್ದಮಹಿಳೆಗೆ ಗಂಭೀರ ಗಾಯ

ಕಡೂರು: ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಬೈಕಿಗೆ ಹಾವು ಅಡ್ಡ ಬಂದ...

ಪತ್ರಿಕೆ ಸೋರಿಕೆ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ

ಚಿಕ್ಕಮಗಳೂರು: ನೀಟ್-ಯು.ಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ನೇತೃತ್ವದಲ್ಲಿ...