ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಹೋರಾಟಗಾರರ ಜಂಟಿ ಸಭೆ ನಿಗದಿಗೊಳಿಸಿ ಸ್ಥಳೀಯ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಎದುರು ಮೇ ೨೭ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಾಗರಿಕ ವಿಜಯ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ಕುಮಾರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ,ಕಂದಾಯ ಮತ್ತು ಅರಣ್ಯ ಇಲಾಖೆ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನಾ ಸಭೆ ಏರ್ಪಡಿಸಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.
ಸರ್ಕಾರ ನಿಯೋಜಿಸಿರುವ ಎಸ್ಐಟಿ ಅಧಿಕಾರಿಗಳಾದ ಗ್ರಾಮಲೆಕ್ಕಿಗರು, ರಾಜಸ್ವನಿರೀಕ್ಷಕರು, ಸರ್ವೆಯರ್ ಮತ್ತು ಅರಣಾಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ಸರ್ವೆ ವೇಳೆಯಲ್ಲಿ ಕಡ್ಡಾಯವಾಗಿ ಸ್ಥಳೀಯ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡಿ ರೈತರ ಭೂಮಿ, ಶಾಲೆ, ಆಟದ ಮೈದಾನ, ಸ್ಮಶಾನ, ಆಶ್ರಯನಿವೇಶನಗಳನ್ನು ಮುಂದಿನ ೫೦ವರ್ಷಕ್ಕೆ ಆಗಬಹುದಾದ ಜನಸಂಖ್ಯೆ ಅಂದಾಜಿಸಿ ಭೂಮಿಯನ್ನು ಅಗತ್ಯತೆಗಳಿಗೆ ಮೀಸಲಿಟ್ಟು ಉಳಿದ ಭೂಮಿಯನ್ನು ಅರಣ್ಯ ಸ್ವರೂಪದ ಭೂಮಿಗಳನ್ನು ಮಾತ್ರ ಡೀಮ್ಡ್ ವ್ಯಾಪ್ತಿಗೆ ನಕ್ಷೆ ತಯಾರಿಸಬೇಕೆಂದು ಹೇಳಿದರು.
ಪೋಡಿ ಮಾಡಲು ಪಹಣಿಯಲ್ಲಿ ಅರಣ್ಯವೆಂದು ನಮೂದಾಗಿರುವ ಸರ್ವೆನಂಬರ್ಗಳನ್ನು ಮಾತ್ರ ಅರಣ್ಯ ಇಲಾಖೆ ಎನ್ಓಸಿಗೆ ಕಳುಹಿಸಬೇಕು. ಅರಣ್ಯವೆಂದು ನಮೂದಾಗದ ಸರ್ವೆನಂಬರ್ಗಳನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅಭಿಪ್ರಾಯಕ್ಕೆ ಪೋಡಿಮಾಡಲು ಕಳುಹಿಸಿ ವಿಳಂಬಮಾಡಬಾರದು. ಜಂಟಿ ಸರ್ವೆಯಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಬಾಕಿ ಇರುವ ಆಶ್ರಯ ನಿವೇಶನದ ಕಡತಗಳ ಪ್ರಕ್ರಿಯೆ ಅಂತಿಮಗಳಿಸಿ ಬಡವರಿಗೆ ನಿವೇಶನ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಎಫ್ಎಸ್ಓ ಅವರಿಂದ ಅಂತಿಮ ಆದೇಶಗೊಳಿಸಿ ಅರಣ್ಯ ಇಲಾಖೆಗೆ ಕಳುಹಿಸಲಾಗಿರುವ ಎಲ್ಲಾ ಕಡತಗಳನ್ನು ಡಿಎಫ್ಓ ಅವರ ಸಹಿಯೊಂದಿಗೆ ಮುಂದಿನ ಹಂತಕ್ಕೆ ಕಳುಹಿಸಬೇಕು. ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಯೋಜನೆಯನ್ನುಈಗಾಗಲೇ ಗ್ರಾಮಪಂಚಾಯಿತಿಗಳು ನೀಡಿರುವ ಅಭಿಪ್ರಾಯದಂತೆ ಕ್ರಮ ಕೈಗೊಳ್ಳಬೇಕು. ಮತ್ತು ಸೀತಾಳಯ್ಯನಗಿರಿ, ನಾರುಕಂತೆ ಮಠ, ದತ್ತಪೀಠಬಾಬಾಬುಡನ್ಗಿರಿ, ಬಿಸಗ್ನಿಮಠದಂತ ಶ್ರದ್ಧಾಕೇಂದ್ರಗಳಳಿಗೆ ಹಾಊ ಪ್ರವಾಸೋದ್ಯಮಕ್ಕೆ ಧಕ್ಕೆ ಬಾರದಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಇನಾಂ ಭೂಮಿಗಳ ಸಮಸ್ಯೆ ಸರಿಪಡಿಸಿ ಅತ್ತಿಗುಂಡಿ, ಮಹಲ್,ಬಿಸಗ್ನಿಮಠ ಗ್ರಾಮಸ್ಥರು ಹಾಗೂ ರೈತರ ನೆವಿಗೆ ಬರಬೇಕು. ಈಗಾಗಲೇ ಸೆಕ್ನ್ ೪(೧) ಪ್ರಕರಣಗಳಲ್ಲಿ ಮೀಸಲು ಅರಣ್ಯಕ್ಕೆ ಉದ್ಘೋಷಣೆಗಿಂತ ಹೆಚ್ಚಿನ ಭೂಮಿಯನ್ನು ಸೆಕ್ಷನಕ್ ೧೭ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಹೆಚ್ಚುವರಿ ಭೂಮಿಯನ್ನು ಮಸಗಲಿ, ಇಂದಾವರ, ಕಾಮೇನಹಳ್ಳಿ ಅರಣ್ಯ ಪ್ರದೇಶಗಳ ರೈತರ ಸಮಸ್ಯೆಗೆ ಬದಲಿ ಜಮೀನಾಗಿ ಬಳಸಿಕೊಂಡುರೈತರಿಗೆ ಸೂಕ್ತ ಪರಿಹಾರ ಒದಗಿಸಿ ಅರಣ್ಯವಾಸಿಗಳ ಬದುಕು ಕಟ್ಟಿಕೊಡಬೇಕೆಂದು ಕೋರಿದರು.
ಎಫ್ಎಸ್ಓ ಅವರ ಬಳಿಇರುವ ಸೆಕ್ಷನ್ ೪(೧)ರ ಕಡತಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು. ರೈತರಿಗೆ ಹತ್ತಾರು ವರ್ಷಗಳ ಹಿಂದೆ ನೀಡಲಾಗಿರುವ ಭೂಮಿಗೆ ನಗರಭೆ ವ್ಯಾಪ್ತಿಯಿಂದ ೫ ಕಿ.ಈ. ವೈಮಾನಿಕ ಅಂತ ರ ಪರಿಗಣಿಸುವಂತೆ ಸರ್ಕಾರ ನೀಡಿರುವ ಸಲಹೆಗಳನ್ನು ಹಿಂಪಡೆದು ಭೂಮಾರ್ಗವಾಗಿ ನೇರ ಅಳತೆಯಲ್ಲಿ ಪರಿಗಣಿಸಿ ರೈತರ ಮೀನಿಗೆ ಖಾತ್ರಿ ಒದಗಿಸಬೇಕೆಂದು ತಿಳಿಸಿದರು.
ತಹಸೀಲ್ದಾರರು ಗ್ರಾಮಗಳಿಗೆ ಗೋಮಾಳ ನಿಗದಿಗಿಳಿಸಿ ೯೪ ಸಿ ಪ್ರಕರಣಗಳನ್ನು ಮತ್ತು ನಮೂನೆ ೫೩ ಅರ್ಜಿಗಳ ಪ್ರಕರಣಗಳನ್ನು ವಿಲೇವಾರಿ ಮಾಡಿ ಉಳಿಕೆ ಭೂಮಿಯನ್ನು ಅರಣ್ಯಕ್ಕೆ ಶಿಫಾರಸ್ಸು ಮಾಡಬೇಕು.ನಗರ ಪ್ರಾಧಿಕಾರ ಇತ್ತೀಚೆಗೆ ತಯಾರಿಸಿದ ಹೊಸ ನಕ್ಷೆಯನ್ನು ರೈತರ ಹಿಡುಳಿ ಮತ್ತು ರಸ್ತೆಗಳನ್ನು ಸರಿಯಾಗಿ ಗುರುತಿಸದೆ ಅರಣ್ಯ ಎಂದು ಗುರುತಿಸಿರುವುದನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಕಾರ್ಯದರ್ಶಿ ಕೆ.ಕೆ.ರಘು ಮಾತನಾಡಿಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವಾಪಸ್ಪಡೆಯಲಾದ ಭೂಮಿಗೆ ಸಂಬಂಧಿಸಿದಂತೆ ೧೯೯೧ರ ಜನವರಿ ೩ರ ಆದೇಶವನ್ನು ಕಡ್ಡಾಯವಾಗಿ ಕಂದಾಯ ಇಲಾಖೆ ಪಾಲಿಸಬೇಕು. ಅರಣ್ಯ ಸಮಸ್ಯೆಯಿಂದ ಜನರನ್ನು ಹೊರತರಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಫಿ ಬೆಳೆಗಾರ ಸಂಘದ ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಮಾತನಾಡಿ, ಬೆಳೆಗಾರರು ನಮೂನೆ ೫೭ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ನಮೂನೆ ೫೩ಕ್ಕೆ ಪರಿವರ್ತಿಸಿ ಅರ್ಹ ಪ್ಲಾಂಟೇಷನ್ ರೈತರಿಗೂ ಸಾಗುವಳಿ ನೀಡಬೇಕು.ರೈತರು ಪಡೆಯಲಾಗಿರುವ ಲೀಜ್ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದು ತಿಳಿಸಿದರು.
ಹೋರಾಟ ಸಮಿತಿ ಮುಖಂಡರುಗಳಾದ ಇಂದಾವರ ಲೋಕೇಶ್, ಕೋಟೆ ಕುಮಾರಸ್ವಾಮಿ, ಮುನ್ನಾ, ಕುಮಾರ್, ಚಂದ್ರಪ್ಪ ಇದ್ದರು.
Protest demanding resolution of forest issues on May 27
Leave a comment