ಕಡೂರು: ತಾಲ್ಲೂಕು ಕಚೇರಿಯಲ್ಲಿ ನಡೆದ ಸರ್ಕಾರದ ಪ್ರಮುಖ ಸಭೆಯು ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ತಾಲ್ಲೂಕಿನ ಅಭಿವೃದ್ಧಿ ಹಾಗೂ ಕಂದಾಯ ಗ್ರಾಮಗಳ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ತಹಶೀಲ್ದಾರ್ ಅವರು ಸಭೆ ಕರೆದಿದ್ದರು. ಈ ಗಂಭೀರ ಸಭೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕರು, ಉಪ ತಹಶೀಲ್ದಾರ್ ಹಾಗೂ ಪಿಡಿಓಗಳಂತಹ ಉನ್ನತ ಶ್ರೇಣಿಯ ಅಧಿಕಾರಿಗಳು ಹಾಜರಿದ್ದರು.
ಆದರೆ, ಸಭೆಯನ್ನು ಮುನ್ನಡೆಸಬೇಕಿದ್ದ ಶಾಸಕ ಕೆ.ಎಸ್. ಆನಂದ್ ಅವರ ಬದಲಿಗೆ ಅವರ ಆಪ್ತ ಸಹಾಯಕ ಮಂಜುನಾಥ್ ಅವರು ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಕೇವಲ ಹಾಜರಿ ಹಾಕುವುದಷ್ಟೇ ಅಲ್ಲದೆ, ಶಾಸಕರಿಗಾಗಿ ಮೀಸಲಿದ್ದ ಅಧಿಕೃತ ಆಸನದಲ್ಲಿ ಕುಳಿತು ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನು ನೀಡುವ ಮೂಲಕ ಮಂಜುನಾಥ್ ಅವರು ಸಭೆಯನ್ನು ನಿಯಂತ್ರಿಸಿದ್ದಾರೆ.
ಈ ದೃಶ್ಯವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆಯ್ದ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಅವರ ಸಹಾಯಕರು ನಿಭಾಯಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಆಡಳಿತಾತ್ಮಕ ಶಿಷ್ಟಾಚಾರವನ್ನು ಗಾಳಿಗೆ ತೂರಿ ನಡೆದ ಈ ಸಭೆಯು ಪರದೆ ಹಿಂದಿನ ಅಧಿಕಾರ ಕೇಂದ್ರ’ದ ದರ್ಬಾರ್ನನಂತೆ ಭಾಸವಾಗುತ್ತಿದ್ದು, ಸರ್ಕಾರದ ಗಂಭೀರ ಸಭೆಗಳಲ್ಲಿ ಇಂತಹ ಹಸ್ತಕ್ಷೇಪವು ಆಡಳಿತ ವ್ಯವಸ್ಥೆಯ ಗಾಂಭೀರ್ಯವನ್ನು ಹಾಳುಮಾಡುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
MLA K.S. Anand’s personal assistant violates etiquette
Leave a comment