Home namma chikmagalur chikamagalur ಶೃಂಗೇರಿ ಕ್ಷೇತ್ರದಲ್ಲಿ “ಆನೆಗಳ” ಪೊಲಿ”ಟ್ರಿಕ್ಸ್”
chikamagalurHomeLatest Newsnamma chikmagalur

ಶೃಂಗೇರಿ ಕ್ಷೇತ್ರದಲ್ಲಿ “ಆನೆಗಳ” ಪೊಲಿ”ಟ್ರಿಕ್ಸ್”

Share
Share

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ಕಾದಾಟ,ಕಿತ್ತಾಟ ನಡೆಯುತ್ತಿದೆ ಎಂದು ಭಾವಿಸುವುದು ತಪ್ಪು. ಆನೆಗಳ ನೆಪದಲ್ಲಿ ಮೃತದೇಹ ಇಟ್ಟುಕೊಂಡು ಬಿಜೆಪಿಯ ಜೀವರಾಜ್ V/S ಕಾಂಗ್ರೆಸ್ ನ ರಾಜೇಗೌಡರ ಮಧ್ಯೆ ಆಗಾಗ ಬೀದಿ ಕಿತ್ತಾಟ ನಡೆದು ಸುದ್ದಿಯಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ನ್ಯೂಸ್ ಕಿಂಗ್ ಈ ಹಿಂದೆ ಶೃಂಗೇರಿ ಕ್ಷೇತ್ರ ಬಯಲು ಸೀಮೆಯ ರಾಜಕಾರಣ ಮೀರಿ ಕಿತ್ತಾಟ ನಡೆಯುತ್ತಿರುವುದನ್ನು ವಿವರಿಸಿತ್ತು. ‌ನಾಲ್ಕು ದಿನಗಳಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಉತ್ತರ ಕರ್ನಾಟಕದ ಇಬ್ಬರು ಒಂದೇ ಸ್ಥಳದಲ್ಲಿ ಆನೆ ತುಳಿತಕ್ಕೆ ಸಿಕ್ಕಿ ಸಾವನ್ನು ಅಪ್ಪಿರುವುದು ಮಾಜಿ ಶಾಸಕ ಜೀವರಾಜ್ ರಾಜಕೀಯವಾಗಿ ಬಳಸಿಕೊಂಡರು ಎನ್ನುತ್ತಲೇ ಹಾಲಿ ಶಾಸಕ ರಾಜೇಗೌಡರ ತಾತ್ಸರ ಮನೋಭಾವ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜೇಗೌಡರಿಗಿಂತ ಜೀವರಾಜ್ ಹೆಚ್ಚು ಕ್ರಿಮಿನಲ್ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದಕ್ಕೆ ಮೃತದೇಹವನ್ನು ಎತ್ತಲು ಬಿಡದಿರುವುದು ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಂತೆ ಆಯಿತು ಎನ್ನುವವರು ಇದ್ದಾರೆ.ಸೋಲಿನಿಂದ ಎರಡು ಬಾರಿ ಮನೆ ಸೇರಿದರು ಆನೆಗಳು ರಾಜಕೀಯ ಕಿಚ್ಚು ಹೆಚ್ಚುತ್ತಿರುವುದರಿಂದ ಶೃಂಗೇರಿ ಕ್ಷೇತ್ರದ ಬಗ್ಗೆ ಇದ್ದ ಉತ್ತಮ ಅಭಿಪ್ರಾಯ ಹಲವು ಸಂಶಯಗಳಿಂದ ನೋಡುವಂತಾಗಿದೆ.ಇದಕ್ಕೆ ಶೃಂಗೇರಿ ಬಂದ್ ಠುಸ್ ಆಗಿದ್ದು ಮತ್ತು ಕ್ಷೇತ್ರದ ಜನರಿಗಿಂತ ಹೊರಗಿನ ಮುಖಗಳು ಹೆಚ್ಚು ಠಳಾಯಿಸಿದ್ದು ಮಾತ್ರ ಸತ್ಯ ಎಂದು ಹೇಳುವವರು ಇದ್ದಾರೆ.

ಶಾಸಕ ರಾಜೇಗೌಡರು ಕ್ರಿಮಿನಲ್ ರಾಜಕೀಯ ಬಳಸಿದ್ದರೆ .ಹಲವರು ಜೈಲಿನಲ್ಲಿ ಇರಬೇಕಿತ್ತು ಸ್ಥಳದಲ್ಲಿ ಮರೆತು ಹೋಗುವ ಸ್ವಭಾವದಿಂದಾಗಿ ಜೀವರಾಜ್ ಸಣ್ಣ,ಸಣ್ಣ,ವಿಷಯಕ್ಕೆ ಕತ್ತಿ ಮಸೆಯುವುದನ್ನು ರಾಜಕೀಯ ಎಂದು ತಿಳಿದಂತೆ ಕಾಣುತ್ತಿರುವುದು ನೋಡಿದರೆ ಶಾಶ್ವತ ರಾಜಕೀಯ ನಿರಾಸೆ ಖಚಿತ. ರಾಜೇಗೌಡರು ಮರೆವು ಮತ್ತು ‌ಹೆಂಗರಳಿನ ರಾಜಕೀಯ ಬಿಟ್ಟರೆ ಶೃಂಗೇರಿ ಕ್ರಿಮಿನಲ್ ಪೊಲಿಟಿಕ್ಸ್ ಮರೆಯಾಗುತ್ತದೆ ಅದಕ್ಕೆ ಇನ್ನೊಂದು ಸುತ್ತಿನ ವಿಧಾನ ಸಭೆ ಚುನಾವಣೆ ನಡೆಯಬೇಕು ಮತದಾರರ ನಿರ್ಧಾರ ಕೆಲವರನ್ನು ಶಾಶ್ವತವಾಗಿ ಮನೆ ಸೇರುವಂತೆ ಮಾಡುವುದು ಖಚಿತ.

ನಾಶವಾಗುತ್ತಿರುವ ಕಾಡು ಸಂರಕ್ಷಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನವರು ಮುಂದಾಗಬೇಕು ಆದರೆ ಅವರವರ ಹಿಂಬಾಲಕರಿಗೆ ಕಾಡು ಕಡಿಸಿ ವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಮತ್ತು ಯಾರು ಸತ್ತರೇನಂತೆ ನಮ್ಮ ತೋಟದ ಕೆಲಸ ಮುಖ್ಯ ಎನ್ನುವ ಪ್ಲಾಂಟೇಷನ್ ವರ ಉದಾಸೀನ ಮನೋಭಾವನೆ ಅಮಾಯಕ ಕೂಲಿ ಕಾರ್ಮಿಕರ ಸಾವಿಗೆ ಕಾರಣ ಈ ಬಗ್ಗೆ ಲೂಟಿ ಮಾಡುವುದನ್ನು ಕರಗತ ಮಾಡಿಕೊಂಡಿರುವ ಅರಣ್ಯ ಇಲಾಖೆಯ ಖದೀಮರ ಬಗ್ಗೆ ಎಚ್ಚರಿಕೆ ವಹಿಸಬೇಕು.

ಕಾಡು ನಾಶ ಒಂದು ಕಡೆಯಾದರೆ ಪ್ರಾಣಿಗಳು ಸಹಜವಾಗಿ ನಾಡಿಗೆ ನುಗ್ಗುತ್ತವೆ ಆದರೆ ಬಡವರು ಮಾತ್ರ ಬಲಿಯಾಗುತ್ತಿರುವುದು ಯಕ್ಷ ಪ್ರಶ್ನೆಯಾಗಿದೆ ಎನ್ನುವುದಕ್ಕಿಂತ ರಾಜಕಾರಣಿಗಳು ಅಧಿಕಾರಿಗಳು ಹೇಗೆ ಶ್ರೀಮಂತ ರಿಗೆ ಮಣಿಯಾಕಿ ಬಡವರನ್ನು ಶೋಷಣೆ ಮಾಡುವುದನ್ನು ಕಾಡಾನೆಗಳು ಕಲಿತಿರುವುದು ನೋಡಿದರೆ ಯಾವ ಮಠದವರು ತರಭೇತಿ ನೀಡಿರಬಹುದು ಎಂಬ ತನಿಖೆ ನಡೆಸುವುದು ಒಳ್ಳೆಯದು.

Polly “tricks” of “elephants” in the Sringeri field

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...