ಚಿಕ್ಕಮಗಳೂರು: ಭಾರತ ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ, ಬಿಜೆಪಿ ನೇತೃತ್ವದ ಕೇಂ ದ್ರ ಸರ್ಕಾರ ವೈಫಲ್ಯತೆ ಹಾಗೂ ಹಿಂದೂ-ಮುಸ್ಲೀಂ ಹತ್ತಿಕ್ಕುವ ಸಂಘಟನೆಗಳ ವಿರುದ್ಧ ಜಾಗೃತಿ ಮೂಡಿಸು ಸುವುದೇ ಕಾರ್ಯಾಗಾರದ ಮೂಲ ಉದ್ದೇಶಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈ ಯದ್ ಹನೀಫ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಆಯೋಜಿ ಸಿದ್ಧ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಾಗಾರ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತವು ಸಮೃದ್ಧ ದೇಶ. ಗಾಂಧೀಜಿ ಜನಿಸಿದ ಮಣ್ಣಿನಲ್ಲಿ ಇತ್ತೀಚೆಗೆ ಕೋಮುವಾದ, ಗಾಂಧೀಜಿ ಕೊ ಂದ ಗೂಡ್ಸೆ ಸಿದ್ದಾಂತಗಳು ಹೆಚ್ಚುತ್ತಿವೆ. ಇದು ಜನಸಾಮಾನ್ಯರಲ್ಲಿ ತಪ್ಪು ಮಾಹಿತಿ ರವಾನೆಯಾಗುತ್ತಿರುವ ಕಾ ರಣ ನೈಜ ಗಾಂಧೀಜಿ ತತ್ವ, ಆದರ್ಶ ಹಾಗೂ ಸಿದ್ದಾಂತಗಳನ್ನು ಪರಿಚಯಿಸುವುದೇ ಕಾರ್ಯಾಗಾರದ ಮು ಖ್ಯ ಕೆಲಸ ಎಂದರು.
ಸಮಾಜದ ಏಕತೆಗಾಗಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರುಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ, ರಾಜೀವ್ಗಾಂಧಿ ಕಾಲಘಟ್ಟದಲ್ಲಿ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಪ್ರಸ್ತು ತ ದಿನದಲ್ಲಿ ತಂತ್ರಜ್ಞಾನ ಉನ್ನತಕ್ಕೇರಲು ಮೂಲ ಕತೃವೇ ಅಂದಿನ ರಾಜೀವ್ಗಾಂಧಿಯವರ ಕೆಲಸ-ಕಾ ರ್ಯಗಳೇ ಕಾರಣ ಎಂದು ತಿಳಿಸಿದರು.
ಇತ್ತೀಚೆಗೆ ದೇಶದಲ್ಲಿ ಬಿಜೆಪಿ ಮತ್ತು ಆಪ್ತ ಸಂಘಟನೆಗಳು ಅಧಿಕಾರಕ್ಕಾಗಿ ಹಿಂದೂ-ಮುಸ್ಲೀಂ, ಭಾರ ತ-ಪಾಕಿಸ್ತಾನ ಎಂಬುದರ ಬಗ್ಗೆ ಜನರಲ್ಲಿ ಕಿತ್ತಾಟ ಎಬ್ಬಿಸುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಹನ್ನೊಂದು ಪೂರೈಸಿದರೆ ನಿರುದ್ಯೋಗ ಸಮಸ್ಯೆ, ಜನರಿಗೆ ವಿಪರೀತ ತೆರಿಗೆ ಬರೆ ಹೆಚ್ಚಿಸುತ್ತಿದೆ ಎಂ ದು ದೂರಿದರು.
ಆ ನಿಟ್ಟಿನಲ್ಲಿ ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ ಕಾರ್ಯಕರ್ತರು, ಸಿಎಲ್ಓಗಳಿಗೆ ಬೃಹತ್ ಮಟ್ಟದ ಕಾರ್ಯಾ ಗಾರ ಹಮ್ಮಿಕೊಳ್ಳಲಿದ್ದೇವೆ. ಅಲ್ಲಿನ ಶಾಸಕರು ಬಹಳಷ್ಟು ಉತ್ಸಾಹಕರಾದ ಕಾರಣ ಕಡೂರಿನಲ್ಲೇ ಕಾರ್ಯಾ ಗಾರ ದಿನಾಂಕ ನಿಗಧಿಗೊಳಿಸಿ, ಸಮಸ್ತ ಪಕ್ಷದ ಕಾರ್ಯಕರ್ತರಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ಕಾರ್ಯಾಗಾ ರ ನಡೆಸಲಾಗುವುದು ಎಂದರು.
ಕೆಪಿಸಿಸಿ ಸಂಯೋಜಕ ಎಂ.ಎಸ್.ಅನಂತು ಮಾತನಾಡಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರ ಆದೇಶದನ್ವ ಯ ಪ್ರತಿ ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಿ, ಕಾಂಗ್ರೆಸ್ ಪಕ್ಷದ ಇತಿಹಾಸ ಮರುಸೃಷ್ಟಿಸುವ ಕೆಲಸ ಮಾಡಲಾಗು ತ್ತಿದೆ. ಅದರಂತೆ ಮೈಸೂರು, ಬಾಗಲಕೋಟೆ ಮತ್ತು ಹುಬ್ಬಳ್ಳಿ ಜಿಲ್ಲೆಯಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಯಶಸ್ವಿಗೊಂಡಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸಿದ್ದಾಂತ ಮತ್ತು ದೇಶಕ್ಕಾಗಿ ಮಣಿದ ನಾಯಕರುಗಳ ವಿಚಾರಮಂಥನ ನಡೆಸುವ ಉದ್ದೇಶ ದಿಂದ ಜಿಲ್ಲಾ ಹಾಗೂ ತಾಲ್ಲೂಕು ಪ್ರಚಾರ ಅಧ್ಯಕ್ಷರು, ಪದಾಧಿಕಾರಿಗಳು ಮುಂದಾಗಬೇಕು. ಜೊತೆಗೆ ಹೋ ಬಳಿ, ಗ್ರಾಮ ಹಾಗೂ ಬೂತ್ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸುವ ಮೂಲಕ ಪಂಚ ಗ್ಯಾರಂಟಿ, ಸಕಾ ರದ ಸಾಧನೆ ಕುರಿತು ಮಾಹಿತಿ ರವಾನಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಆರ್.ಚಂದ್ರಣ್ಣ, ಹೇಮಲತಾ, ಸಂಯೋ ಜಕರಾದ ಎ.ಎಸ್.ಮಹೇಶ್ವರಪ್ಪ, ಹೆಚ್.ಸಿ.ಗಂಗಾಧರ್, ಲೋಲಾಕ್ಷಿ ಬಾಯಿ, ಮಂಜೇಗೌಡ, ಬ್ಲಾಕ್ ಕಾಂಗ್ರೆ ಸ್ ಪ್ರಚಾರ ಸಮಿತಿ ಅಧ್ಯಕ್ಷ ಹುಣಸೇಮಕ್ಕಿ ಲಕ್ಷ್ಮಣ್, ಸಿಡಿಎ ಸದಸ್ಯ ಸಿ.ಸಿ.ಮಂಜುನಾಥ್, ಮುಖಂಡರುಗ ಳಾದ ಅನ್ಸರ್ಆಲಿ, ದಿವಾಕರ್, ಸಚಿನ್ಸಿಂಗ್, ನಿಂಗೇಗೌಡ, ತಂಬಿ, ಸುಧೀರ್ ಉಪಸ್ಥಿತರಿದ್ದರು.
Workshop to make people aware of the truth
Leave a comment