Home namma chikmagalur chikamagalur ನೋಡುಗರ ಮನ ಸೂರೆಗೊಂಡ ಕಲಾ ಉತ್ಸವ
chikamagalurHomeLatest Newsnamma chikmagalur

ನೋಡುಗರ ಮನ ಸೂರೆಗೊಂಡ ಕಲಾ ಉತ್ಸವ

Share
Share

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀರಂಗರಾಮ್ ಆರ್ಟ್ಸ್ ಫೌಂಡೇಶನ್ ನಿಂದ ಭಾನುವಾರ ಸಂಜೆ ನಡೆದ ವಾರ್ಷಿಕ ಕಲಾ ಉತ್ಸವ ನೋಡುಗರ ಮನ ಸೂರೆಗೊಂಡಿತು.

ಶ್ರೀರಂಗರಾಮ್ ಆರ್ಟ್ಸ್ ಫೌಂಡೇಶನ್ ನ ಕಲಾವಿದರು ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡು ಸಂಗೀತದ ರಸಧೌತಣ ವನ್ನು ಪ್ರೇಕ್ಷಕರಿಗೆ ಉಣಬಡಿಸಿದರು.

ಸುಗಮ ಸಂಗೀತದೊಂದಿಗೆ ಉತ್ಸವಕ್ಕೆ ನಾಂದಿ ಹಾಡಿದ ಸಂಸ್ಥೆಯ ಸಂಸ್ಥಾಪಕಿ ಡಾ,ವಿದ್ಯಾಲಕ್ಷ್ಮಿ ಮತ್ತು ಗಾಯಕ ಕಿರಣ್ ತಂಡ ಪುರಂದರ ದಾಸರ ಗಜವದನ ಬೇಡುವೆ ಗೌರಿ ತನಯ ಕೃತಿಯೊಂದಿಗೆ ಗಾನಯಾನವನ್ನು ಆರಂಭಿಸಿ ಸಿ.ಅಶ್ವತ್ ಅವರ ಕಾಣದ ಕಡಲಿಗೆ ಹಂಬಲಿಸಿದೆ ಮನ, ಸಂತ ಶಿಶುನಾಳ ಶರೀಫರ ಕೋಡಗನ ಕೋಳಿ ನುಂಗಿತ್ತ, ಭಕ್ತಿ ಭಂಡಾರಿ ಬಸವಣ್ಣನವರ ವಚನ ಉಳ್ಳ ವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯ ಕೃತಿಗಳನ್ನು ಸು ಶ್ರಾವ್ಯವಾಗಿ ಹಾಡುವ ಮೂಲಕ ಸಭಿಕರ ಮನ ಗೆದ್ದರು.

ನಂತರ ಡಾ,ವಿದ್ಯಾಲಕ್ಷ್ಮಿ ಅವರ ಶಿಷ್ಯರು ಭರತನಾಟ್ಯದ ಆರಂಭಿಕ ಹಂತದ ಪಾಠಗಳನ್ನು, ನೃತ್ಯದ ವಿವಿಧ ಮುದ್ರೆ, ವಿವಿಧ ಭಂಗಿಗಳನ್ನು ನೋಡುಗರೆದುರು ಸಮರ್ಥವಾಗಿ ಪ್ರಸ್ತುತಪಡಿಸಿದರು, ಈ ವೇಳೆ ಡಾ,ವಿದ್ಯಾಲಕ್ಷ್ಮಿ ಅವರ ಕಂಠಸಿರಿ ಯಲ್ಲಿ ಮೂಡಿ ಬಂದ ನಟುವಾಂಗ, ಅವರ ಶಿಷ್ಯರಿಂದ ನಡೆದ ತಿಲ್ಲಾನ, ನೃತ್ಯಗಳು ಗಮನ ಸೆಳೆದವು.

ಇದೇ ವೇಳೆ ಬೆಂಗಳೂರಿನ ನೂಪುರ ಆರ್ಟ್ಸ್ ಸಂಸ್ಥೆಯ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಶ್ರೀಹರಿ, ಚೇತನ, ಶ್ರೀಶ, ದೀಪಿಕಾ ಲುಂಬ ಅವರ ತಂಡದಿಂದ ನಡೆದ ಕಥಕ್ ನೃತ್ಯ ನೋಡುಗರನ್ನು ಬಾವಪರವಶ ಗೊಳಿಸಿತು.

ಗಣೇಶ ಸ್ತುತಿಯೊಂದಿಗೆ ನೃತ್ಯ ಆರಂಭಿಸಿದ ಕಲಾವಿದರು ಕ್ರಮವಾಗಿ ನಾಗೇಂದ್ರ ಹಾರಾಯ ಮಹೇಶ್ವರಾಯ ಶಿವಾಂಜಲಿ, ರಾಧಾಕೃಷ್ಣರ ರಾಸಲೀಲೆಯ ನೃತ್ಯಗಳನ್ನು ತನ್ಮಯರಾಗಿ ಅಭಿನಯಿಸುವ ಮೂಲಕ ಕಲಾಮಂದಿರದಲ್ಲಿ ಭಕ್ತಿಯ ತರಂಗಗಳನ್ನೆಬ್ಬಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಡಿ.ಎಚ್.ನಟರಾಜ್ ಆಧುನಿಕ ಕವಿಗಳು ರಚಿಸಿರುವ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುವ ಪದ್ಧತಿಯೇ ಸುಗಮಸಂಗೀತ, ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಕಾವ್ಯಗಳನ್ನು ಹಾಡುವ ಪರಂಪರೆ ಬೆಳೆದು ಬಂದಿದೆ. ಗಮಕ ಕಲೆ ಅದಕ್ಕೊಂದು ಸಾಕ್ಷಿ. ಸುಗಮ ಸಂಗೀತಕ್ಕೆ ಸುಮಾರು ಐವತ್ತು ವರ್ಷಗಳ ಇತಿಹಾಸವಿದೆ ಎಂದರು.

ನಮ್ಮೂರಿನವರೇ ಆದ ಡಾ.ವಿದ್ಯಾ ಲಕ್ಷ್ಮೀ ಅವರು ೧೩ ವರ್ಷಗಳ ಹಿಂದೆಯೇ ರಂಗರಾಮ್ ಆರ್ಟ್ಸ್ ಫೌಂಡೇಶನ್ ಸಂಸ್ಥೆ ಯನ್ನು ಆರಂಭಿಸಿ ಶಾಸ್ತ್ರೀಯ ಕಲೆಯಾದ ಭರತನಾಟ್ಯವನ್ನು ಕಲಿಸುತ್ತಿರುವುದು ಅಭಿನಂದನೀಯ. ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಅವರು ಆಸಕ್ತಿಯಿಂದ ಭರತನಾಟ್ಯ ಕಲೆಯನ್ನು ತಾವೂ ಕಲಿತು

ಇತರರಿಗೂ ಕಲಿಸುತ್ತಾ ಭರತನಾಟ್ಯದಲ್ಲಿ ಸಂಶೋಧನೆ ನಡೆಸಿ ಪಿಎಚ್.,ಡಿ ಪದವಿ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಸಾಹಿತಿ ಡಾ. ಬೆಳವಾಡಿ ಮಂಜುನಾಥ ಮಾತನಾಡಿ ಭಾರತೀಯ ಲಲಿತ ಕಲೆಗಳಿಗೆ ವಿಶ್ವದಲ್ಲೇ ಮಾನ್ಯತೆ ಇದೆ. ಅದರ ಪ್ರಾಚೀನತೆ ಮತ್ತು ವೈವಿಧ್ಯತೆ ವಿಶೇಷವಾದುದು. ದೇಶೀಯ ರಾಜರುಗಳು ನೀಡಿದ ಪ್ರೋತ್ಸಾಹ ದೇವಾಲಯಗಳಲ್ಲಿ ಸೇವೆ ಎಂಬ ಪರಿಕಲ್ಪನೆಯಲ್ಲಿ ಬೆಳೆದು ಬಂದ ಕಲೆ. ಕೇವಲ ಮನರಂಜನೆಯ ಮಾಧ್ಯಮವಾಗದೆ ಶಾಸ್ತ್ರೀಯ ಪ್ರಧಾನವಾದುದು. ಗುರುವಿನ ಸಾನ್ನಿಧ್ಯದಲ್ಲಿ ನಿರಂತರ ಅಭ್ಯಾಸದಿಂದ ಮಾತ್ರ ಸಿದ್ದಿಸುವಂತ ವಿದ್ಯೆ. ಭರತನಾಟ್ಯ ದಕ್ಷಿಣ ಭಾರತದ ಪ್ರಕಾರವಾದರೆ, ಕಥಕ್ ಹಿಂದೂಸ್ತಾನಿ ಸಂಗೀತವನ್ನು ಆಧರಿಸಿದ ಉತ್ತರಭಾರತದ ವಿಶಿಷ್ಟ ಎಂದರು.

ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್ ನ ಸಂಸ್ಥಾಪಕಿ ಡಾ, ವಿದ್ಯಾಲಕ್ಷ್ಮಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಮುಖ್ಯಸ್ಥ ಸುರೇಶ್, ಗುರುಪ್ರಸಾದ್, ಲಕ್ಷ್ಮೀಬಾಯಿ ಉಪಸ್ಥಿತರಿದ್ದರು.

An art festival that captivated the audience

 

Share

Leave a comment

Leave a Reply

Your email address will not be published. Required fields are marked *

Don't Miss

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿಯಾಗಿವೆ ಎಂದು ಭಾರತ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ...

ರಸ್ತೆ ಅಪಘಾತದಲ್ಲಿ ಬೈಕ್ ಸಾವಾರನ ಸಾವು

ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೃತರನ್ನು 21 ವರ್ಷದ ಗೋಕುಲ್ ಎಂದು...

Related Articles

ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?

ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು...

ಚಿಕ್ಕಮಗಳೂರು ನಗರ ಸಮೀಪಕ್ಕೆ ಬಂದ ಕಾಡಾನೆಗಳು

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಮೀ ದೂರದ...

ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ

ಚಿಕ್ಕಮಗಳೂರು:  ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ  ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಬಿಸಿಯೂಟದ...

ಸಂಸ್ಕೃತಿ, ಸಾಹಿತ್ಯ, ಕಲೆಯಿಂದ ಸುಸಂಸ್ಕೃತ ಸಮುದಾಯ ಕಟ್ಟಲು ಸಾಧ್ಯ

ಚಿಕ್ಕಮಗಳೂರು: ಸಂಸ್ಕೃತಿ, ಸಾಹಿತ್ಯ, ಕಲೆಯ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯವನ್ನು ಕಟ್ಟಬಹುದು ಎಂದು ಬಸವತತ್ವ ಪೀಠಾಧ್ಯಕ್ಷರಾದ...