Home namma chikmagalur ಅನುಚಿತ ವ್ಯಾಪಾರ ನೀತಿ ವಿರುದ್ಧ ಪರಿಹಾರಕ್ಕೆ ಆದೇಶ
namma chikmagalurchikamagalurHomeLatest News

ಅನುಚಿತ ವ್ಯಾಪಾರ ನೀತಿ ವಿರುದ್ಧ ಪರಿಹಾರಕ್ಕೆ ಆದೇಶ

Share
Share

ಚಿಕ್ಕಮಗಳೂರು: ಟಿ.ವಿ. ಖರೀದಿ ಸಂದರ್ಭ ಅನುಚಿತ ನೀತಿ ಅನುಸರಿಸಿದ ಕಾರಣಕ್ಕಾಗಿ ಖರೀದಿದಾರರಿಗೆ ಪರಿಹಾರ, ಖರ್ಚು-ವೆಚ್ಚ ಮತ್ತು ಖರೀದಿ ಸಂದರ್ಭ ಪಡೆದಿದ್ದ ಹೆಚ್ಚುವರಿ ಮೊತ್ತವನ್ನು ಬಡ್ಡಿ ಸೇರಿಸಿ ನೀಡುವಂತೆ ಕಡೂರಿನ ಪೂರ್ವಿಕಾ ಮೊಬೈಲ್ ಅಂಗಡಿ ಹಾಗೂ ಬಜಾಜ್ ಫೈನಾನ್ಸ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.

ಕಡೂರು ಮಲ್ಲೇಶ್ವರಂನ ಮಾರುತಿ ಬಡಾವಣೆಯ ಜಿ.ಅಂಬಿಕಾ ಎಂಬುವವರು ಅಲ್ಲಿನ ಪೂರ್ವಿ ಮೊಬೈಲ್ ಅಂಗಡಿಯಿಂದ ೨೦೨೩ ರಲ್ಲಿ ಟಿ.ವಿ.ಯನ್ನು ಖರೀದಿಸಿದ್ದರು. ಟಿ.ವಿ. ಖರೀದಿಗೆ ಬಜಾಜ್ ಫೈನಾನ್ಸ್‌ನಿಂದ ಖರೀದಿದಾರರಿಗೆ ಸಾಲ ಒದಗಿಸಲಾಗಿತ್ತು. ಈ ಸಂದರ್ಭ ೧೩,೩೬೦ ರೂ.ಗಳನ್ನು ಹೆಚ್ಚುವರಿಯಾಗಿ ಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂಬಿಕಾ ಅವರು ಪೂರ್ವಿಕಾ ಅಂಗಡಿಯ ವ್ಯವಸ್ಥಾಪಕರು ಹಾಗೂ ಬಜಾಜ್ ಫೈನಾನ್ಸ್‌ನ ಕಡೂರು ಹಾಗೂ ಬೆಂಗಳೂರು ಕಚೇರಿಯ ವ್ಯವಸ್ಥಾಪಕರನ್ನು ಎದುರುದಾರರನ್ನಾಗಿ ಮಾಡಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಹೆಚ್ಚುವರಿಯಾಗಿ ಪಡೆದ ೧೩,೩೬೦ ರೂ.ಗಳಿಗೆ ಶೇ.೯ರ ವಾರ್ಷಿಕ ಬಡ್ಡಿಯೊಂದಿಗೆ ೨೦೨೩ರ ಡಿಸೆಂಬರ್ ೪ ರಿಂದ ತೀರ್ಪು ಪ್ರಕಟಿಸಿದ ೨೦೨೫ರ ಜುಲೈ ೨೫ರವರೆಗೆ ಪಾವತಿಸುವಂತೆ ಮತ್ತು ಪರಿಹಾರವಾಗಿ ೫ ಸಾವಿರ ರೂ. ಹಾಗೂ ಪ್ರಕರಣದ ಖರ್ಚು-ವೆಚ್ಚವೆಂದು ೫ ಸಾವಿರ ರೂ.ಗಳನ್ನು ನೀಡುವಂತೆ ಆದೇಶ ನೀಡಿದೆ.

ಆಯೋಗದ ಅಧ್ಯಕ್ಷರಾದ ಎನ್.ಚೆನ್ನಕೇಶವ ಮತ್ತು ಸದಸ್ಯರಾದ ಈ.ಪ್ರೇಮಾ ಅವರು ಈ ತೀರ್ಪು ನೀಡಿದ್ದು. ಎದುರುದಾರರ ಅನುಚಿತ ವ್ಯಾಪಾರ ನೀತಿಯನ್ನು ಎತ್ತಿ ಹಿಡಿದು ಗ್ರಾಹಕರಿಗೆ ನ್ಯಾಯ ಒದಗಿಸಿದ್ದಾರೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲ ಸಿ.ವಿ.ಲೋಕೇಶ್ ಅವರು ವಾದ ಮಂಡಿಸಿದ್ದರು.

Order for redress against unfair trade practices

Share

Leave a comment

Leave a Reply

Your email address will not be published. Required fields are marked *

Don't Miss

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು. ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಗ್ರಾಮದ ನಿವಾಸಿಯಾಗಿರುವ ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಕರ್ನಾಟಕದಲ್ಲಿ ಒಟ್ಟು 54...

ವಾಹನಗಳ ಮಿರರ್ ತಗುಲಿ-ಕತ್ತಿ-ಬಂದೂಕು ಝಳಪಿಸಿದ ಗಲಾಟೆ

ಚಿಕ್ಕಮಗಳೂರು: ವಾಹನಗಳ ಮಿರರ್ ಪರಸ್ಪರ ತಗುಲಿದ ಸಣ್ಣ ವಿಚಾರ ಕತ್ತಿ-ಬಂದೂಕು ಝಳಪಿಸುವ ಹಂತಕ್ಕೆ ತಲುಪಿರುವ ಆರೋಪವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸರವಳ್ಳಿ ಗ್ರಾಮದಲ್ಲಿ ಜುಲೈ 2...

Related Articles

ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ

ಕಡೂರು: ಕಳೆದ ಜೂನ್‌ನಲ್ಲಿ ಗಮನ ಬೇರೆಡೆಗೆ ಸೆಳೆದು ಗ್ರಾಹಕರೋರ್ವರ ಖಾತೆಯಿಂದ ₹3.90 ಲಕ್ಷಡ್ರಾ ಮಾಡಿರುವ ಪ್ರಕರಣ...

ಶಿವಮೊಗ್ಗ-ಶೃಂಗೇರಿ ಮಾರ್ಗ ಪರಿಗಣಿಸಿ

ಚಿಕ್ಕಮಗಳೂರು: ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ,...

ಕವಿಕಲ್ ಮಠದ ರಸ್ತೆಯಲ್ಲಿ ಹುಲಿ ದಿಢೀರನೆ ಪ್ರತ್ಯಕ್ಷ

ಚಿಕ್ಕಮಗಳೂರು: ಕಾಫಿನಾಡಿನ ಹಸಿರು ಕಾಡುಗಳ ನಡುವೆ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಮರೆಯಲಾಗದ ಅನುಭವವೊಂದು ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ...

ಭದ್ರಾ ಜಲಾಶಯದ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸೂಚನೆ

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು,...