Home Political News ಸಹಕಾರ ಸಂಘದ ಚುನಾವಣೆಯಲ್ಲಿ ಶಾಸಕರೇ ಸ್ಪರ್ಧೆ : ರಂಗೇರಿದ ಅಖಾಡ
Political News

ಸಹಕಾರ ಸಂಘದ ಚುನಾವಣೆಯಲ್ಲಿ ಶಾಸಕರೇ ಸ್ಪರ್ಧೆ : ರಂಗೇರಿದ ಅಖಾಡ

Share
Share

ಚಿಕ್ಕಮಗಳೂರು : ತರೀಕೆರೆ ಪಟ್ಟಣದ ಜನರಿಗೆ ಶ್ರೀ ರೇವಣ ಸಿದ್ದೇಶ್ವರ ಸಹಕಾರ ಸಂಘಕ್ಕೆ ನಿರ್ದೇಶಕರಾಗಬೇಕು. ಮತ್ತು ಪುರಸಭೆಗೆ ಒಮ್ಮೆಯಾದರೂ ಸದಸ್ಯನಾಗಿ ಮಾಜಿ ಎಂಬ ಬೋರ್ಡ್ ಇದ್ದರೆ ಸಾಕು ಎಂಬ ಮಹದಾಸೆ ಬಹುತೇಕರದ್ದು ಇಂತಹ ಆಸೆ ಈಗ ಶಾಸಕ ಶ್ರೀನಿವಾಸ್ ಗೆ ಶುರುವಾಗಿ ಚುನಾವಣೆಯ ಅಖಾಡಕ್ಕೆ ಇಳಿದು ರೇವಣ ಸಿದ್ದೇಶ್ವರ ಸಂಘದ ಹಣಾಹಣೊ ರಂಗೇರುವಂತೆ ಮಾಡಿದ್ದಾರೆ.

ಇದು ಎಂತ ಮೋಹ ಎಂತಹ ದಾಹ ವೋ ಅಥವಾ ಅಧಿಕಾರದ ಅಮಲು ಎಂಬುದು ಗೊತ್ತಾಗುತ್ತಿಲ್ಲ, ತರೀಕೆರೆ ರೇವಣ ಸಿದ್ದೇಶ್ವರ ಸಹಕಾರ ಸಂಘದ ಚುನಾವಣೆ ಬಂದರೆ ಒಂದು ರೀತಿಯ ಶಾಸಕರ ಚುನಾವಣೆಯಷ್ಟೇ ರಂಗು ಪಡೆಯುತ್ತದೆ, ಈ ಸಂಘ ಬಹುತೇಕ ಸಹಕಾರಿ ಧಿರೀಣರುಗಳ ಗರಡಿಮನೆ ಎಂದರೆ ತಪ್ಪಾಗಲಾರದು, ಇದೀಗ ಹಾಲಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಸೊಸೈಟಿ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಮುಂದೆ ಡಿ.ಸಿ.ಸಿ.ಬ್ಯಾಂಕ್ ಚುಕ್ಕಾಣಿ ಹಿಡಿಯಬೇಕು ಎಂಬ ಆಸೆ ಎಂಬುದರ ಮುನ್ಸೂಚನೆ ರೀತಿ ಗೋಚರಿಸುತ್ತಿದೆ, ತರೀಕೆರೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಪ್ರಸ್ತುತ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾಗಿದ್ದು ಇದನ್ನು ನೋಡಿ ಶ್ರೀನಿವಾಸ್ ಗೆ ಕಣ್ಣು ಕುಕ್ಕುತ್ತಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ , ಅಧಿಕಾರ ಎಂಬ ಮಾಯೆ ಮುಂದೆ ಎಲ್ಲಾ ಗೌಣ ಎಂಬುದು ಈ ರೇವಣ ಸಿದ್ದೇಶ್ವರ ಸೊಸೈಟಿ ಚುನಾವಣೆಯ ಲಾಡಾಯಿಯಲ್ಲಿ ತಿಳಿಯಬಹುದು, ಆದರೆ ಡಿ.ಸಿ.ಸಿ ಬ್ಯಾಂಕ್ ಕನಸು ಹೊತ್ತಿರುವ ಶಾಸಕರ ಟೀಮ್ ಗೆ ಸೆಡ್ಡು ಹೊಡೆಯಲು ಮಾಜಿ ಶಾಸಕ ರ ಬೆಂಬಲಿಗರೂ ಭರ್ಜರಿ ತಯಾರಿ ನಡೆಸುತ್ತಿದ್ದಾರೆ

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಕೇಂದ್ರ ಸರ್ಕಾರದ ಅನುದಾನ ಹಾಗೂ ತೆರಿಗೆ ಪಾಲು ಕುರಿತು ನಮ್ಮ ಸರ್ಕಾರ ‘ಶ್ವೇತಪತ್ರ’ ಪತ್ರ

ವಿಧಾನಸಭೆ:  ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು...

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎಂಬ ನಾಟಕ…!

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ತುದಿಗಾಲಿನಲ್ಲಿ ನಿಂತಿದ್ದವರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಲು...

ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?

ಚಿಕ್ಕಮಗಳೂರು: ಬಿ.ಎಲ್.ಶಂಕರ್ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿದ್ದವರು ಹಿನ್ನಡೆ ಅನುಭವಿಸುತ್ತಿರುವುದು ಏಕೆ ?...

ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?

ಚಿಕ್ಕಮಗಳೂರು: ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡುವಾಗ ಬಿ.ಎಲ್.ಶಂಕರ್ ಹೆಸರು ಎವರೆಸ್ಟ್...