Home Political News ತಮಿಳು ಮಾತನಾಡಲು ನಾ ಮುಂದು ತಾ ಮುಂದು ಮತ್ತೊಬ್ರು ಹಾಡಿದ್ರು ತಮಿಳ್ ಹಾಡು
Political News

ತಮಿಳು ಮಾತನಾಡಲು ನಾ ಮುಂದು ತಾ ಮುಂದು ಮತ್ತೊಬ್ರು ಹಾಡಿದ್ರು ತಮಿಳ್ ಹಾಡು

Share
Share

ಚಿಕ್ಕಮಗಳೂರು : ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆದ ದ್ರಾವಿಡ ಸಂಸ್ಕೃತಿ ಸಮ್ಮಿಲನೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರ ತಮಿಳು ಪ್ರೇಮ ಹಾಸ್ಯ ಮಿಶ್ರಿತ ಏಟು ಎದುರೇಟಿಗೆ ಕಾರಣವಾಯಿತು. ಒಬ್ಬರಿಗಿಂತ ಒಬ್ಬರ ಮಾತಿನ ಧಾಟಿ ತಮಿಳು ಭಾಷಿಕರ ಮನಸೆಳೆಯುವಲ್ಲಿ ಯಾರು ಸಫಲವಾದರು ಎಂಬುದು ಮಾತ್ರ ಕೊನೆಗೂ ತಿಳಿಯಲಿಲ್ಲ,

ಮೊದಲಿಗೆ ಮಾತನಾಡಿದ ಸಿ.ಟಿ ರವಿ ಕನ್ನಡ ತಮಿಳು ಸೋದರತ್ವ ಹೇಳಲು ಹೋಗಿ ಕರುನಾಡನ್ನು ತಂಗಚ್ಚಿ ಎನ್ನುವ ಮೂಲಕ ಚಪ್ಪಾಳೆ ಗಿಟ್ಟಿಸಿದರು. ಇದಕ್ಕೆ ಸಖತ್ ಟಾಂಗ್ ಕೊಟ್ಟ ಶಾಸಕ ಎಚ್ ಡಿ ತಮ್ಮಯ್ಯ ನಾನು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಮಾತನಾಡಲ್ಲ ಲಾರಿ ಆಫೀಸ್ ನಲ್ಲಿ ತಮಿಳು ಭಾಷೆಯನ್ನು ಚನ್ನಾಗಿ ಕಲಿತಿದ್ದೆ ಎಂಬುದನ್ನು ತಮಿಳಿನಲ್ಲೇ 2 ನಿಮಿಷ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು.‌

ಗಾಯತ್ರಿ ಶಾಂತೇಗೌಡ ಅಂತ ತಮಿಳು ಮಾತನಾಡಿದರೆ ಡಬಲ್ ಮೀನಿಂಗ್ ಆಗುತ್ತೆ ಎನ್ನುವ ಮೂಲಕ ಸಭೆಯನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿದರು. ಕೊನೆಗೆ ಕನ್ನಡದಲ್ಲೇ ಮಾತನಾಡಿದರು.

ಆದರೆ ಪಂಚ್ ನೀಡಿದ್ದು ಮಾತ್ರ ಎಂಎಲ್ ಸಿ ಎಸ್ ಎಲ್ ಭೋಜೇಗೌಡ ಎಲ್ಲರೂ ತಮಿಳು ಮಾತನಾಡಿ ಗಮನ ಸೆಳೆಯಲು ಯತ್ನಿಸಿದರೆ ಸಿಂದೂರ ಪೂವೆ ಸಿಂದೂರ ಪೂವೆ‌ ಎಂಬ ಅಣ್ಣಕ್ಕಿಳಿ ಸಿನೆಮಾದ ಶಿವಕುಮಾರ್ ನಟನೆಯ ಹಾಡು ಮತ್ತು ಕಾಮಿಡಿ ಹಾಡೊಂದನ್ನು ಹಾಡುವ ಮೂಲಕ ಆಕರ್ಷಣೆಯನ್ನು ತಮ್ಮತ್ತ ಬರಮಾಡಿಕೊಂಡರು.

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಕೇಂದ್ರ ಸರ್ಕಾರದ ಅನುದಾನ ಹಾಗೂ ತೆರಿಗೆ ಪಾಲು ಕುರಿತು ನಮ್ಮ ಸರ್ಕಾರ ‘ಶ್ವೇತಪತ್ರ’ ಪತ್ರ

ವಿಧಾನಸಭೆ:  ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು...

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎಂಬ ನಾಟಕ…!

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ತುದಿಗಾಲಿನಲ್ಲಿ ನಿಂತಿದ್ದವರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಲು...

ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?

ಚಿಕ್ಕಮಗಳೂರು: ಬಿ.ಎಲ್.ಶಂಕರ್ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿದ್ದವರು ಹಿನ್ನಡೆ ಅನುಭವಿಸುತ್ತಿರುವುದು ಏಕೆ ?...

ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?

ಚಿಕ್ಕಮಗಳೂರು: ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡುವಾಗ ಬಿ.ಎಲ್.ಶಂಕರ್ ಹೆಸರು ಎವರೆಸ್ಟ್...