Home Political News ತಮಿಳು ಮಾತನಾಡಲು ನಾ ಮುಂದು ತಾ ಮುಂದು ಮತ್ತೊಬ್ರು ಹಾಡಿದ್ರು ತಮಿಳ್ ಹಾಡು
Political News

ತಮಿಳು ಮಾತನಾಡಲು ನಾ ಮುಂದು ತಾ ಮುಂದು ಮತ್ತೊಬ್ರು ಹಾಡಿದ್ರು ತಮಿಳ್ ಹಾಡು

Share
Share

ಚಿಕ್ಕಮಗಳೂರು : ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆದ ದ್ರಾವಿಡ ಸಂಸ್ಕೃತಿ ಸಮ್ಮಿಲನೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರ ತಮಿಳು ಪ್ರೇಮ ಹಾಸ್ಯ ಮಿಶ್ರಿತ ಏಟು ಎದುರೇಟಿಗೆ ಕಾರಣವಾಯಿತು. ಒಬ್ಬರಿಗಿಂತ ಒಬ್ಬರ ಮಾತಿನ ಧಾಟಿ ತಮಿಳು ಭಾಷಿಕರ ಮನಸೆಳೆಯುವಲ್ಲಿ ಯಾರು ಸಫಲವಾದರು ಎಂಬುದು ಮಾತ್ರ ಕೊನೆಗೂ ತಿಳಿಯಲಿಲ್ಲ,

ಮೊದಲಿಗೆ ಮಾತನಾಡಿದ ಸಿ.ಟಿ ರವಿ ಕನ್ನಡ ತಮಿಳು ಸೋದರತ್ವ ಹೇಳಲು ಹೋಗಿ ಕರುನಾಡನ್ನು ತಂಗಚ್ಚಿ ಎನ್ನುವ ಮೂಲಕ ಚಪ್ಪಾಳೆ ಗಿಟ್ಟಿಸಿದರು. ಇದಕ್ಕೆ ಸಖತ್ ಟಾಂಗ್ ಕೊಟ್ಟ ಶಾಸಕ ಎಚ್ ಡಿ ತಮ್ಮಯ್ಯ ನಾನು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಮಾತನಾಡಲ್ಲ ಲಾರಿ ಆಫೀಸ್ ನಲ್ಲಿ ತಮಿಳು ಭಾಷೆಯನ್ನು ಚನ್ನಾಗಿ ಕಲಿತಿದ್ದೆ ಎಂಬುದನ್ನು ತಮಿಳಿನಲ್ಲೇ 2 ನಿಮಿಷ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು.‌

ಗಾಯತ್ರಿ ಶಾಂತೇಗೌಡ ಅಂತ ತಮಿಳು ಮಾತನಾಡಿದರೆ ಡಬಲ್ ಮೀನಿಂಗ್ ಆಗುತ್ತೆ ಎನ್ನುವ ಮೂಲಕ ಸಭೆಯನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿದರು. ಕೊನೆಗೆ ಕನ್ನಡದಲ್ಲೇ ಮಾತನಾಡಿದರು.

ಆದರೆ ಪಂಚ್ ನೀಡಿದ್ದು ಮಾತ್ರ ಎಂಎಲ್ ಸಿ ಎಸ್ ಎಲ್ ಭೋಜೇಗೌಡ ಎಲ್ಲರೂ ತಮಿಳು ಮಾತನಾಡಿ ಗಮನ ಸೆಳೆಯಲು ಯತ್ನಿಸಿದರೆ ಸಿಂದೂರ ಪೂವೆ ಸಿಂದೂರ ಪೂವೆ‌ ಎಂಬ ಅಣ್ಣಕ್ಕಿಳಿ ಸಿನೆಮಾದ ಶಿವಕುಮಾರ್ ನಟನೆಯ ಹಾಡು ಮತ್ತು ಕಾಮಿಡಿ ಹಾಡೊಂದನ್ನು ಹಾಡುವ ಮೂಲಕ ಆಕರ್ಷಣೆಯನ್ನು ತಮ್ಮತ್ತ ಬರಮಾಡಿಕೊಂಡರು.

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...

ಮೌಲ್ಯ – ಸೇವೆ ಮರೆತು ಹಣ ದೂಚಲು ಪ್ರಜಾಪ್ರಭುತ್ವದ ಕಗ್ಗೂಲೆ…

ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ...

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...