Home Political News ತಮಿಳು ಮಾತನಾಡಲು ನಾ ಮುಂದು ತಾ ಮುಂದು ಮತ್ತೊಬ್ರು ಹಾಡಿದ್ರು ತಮಿಳ್ ಹಾಡು
Political News

ತಮಿಳು ಮಾತನಾಡಲು ನಾ ಮುಂದು ತಾ ಮುಂದು ಮತ್ತೊಬ್ರು ಹಾಡಿದ್ರು ತಮಿಳ್ ಹಾಡು

Share
Share

ಚಿಕ್ಕಮಗಳೂರು : ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆದ ದ್ರಾವಿಡ ಸಂಸ್ಕೃತಿ ಸಮ್ಮಿಲನೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರ ತಮಿಳು ಪ್ರೇಮ ಹಾಸ್ಯ ಮಿಶ್ರಿತ ಏಟು ಎದುರೇಟಿಗೆ ಕಾರಣವಾಯಿತು. ಒಬ್ಬರಿಗಿಂತ ಒಬ್ಬರ ಮಾತಿನ ಧಾಟಿ ತಮಿಳು ಭಾಷಿಕರ ಮನಸೆಳೆಯುವಲ್ಲಿ ಯಾರು ಸಫಲವಾದರು ಎಂಬುದು ಮಾತ್ರ ಕೊನೆಗೂ ತಿಳಿಯಲಿಲ್ಲ,

ಮೊದಲಿಗೆ ಮಾತನಾಡಿದ ಸಿ.ಟಿ ರವಿ ಕನ್ನಡ ತಮಿಳು ಸೋದರತ್ವ ಹೇಳಲು ಹೋಗಿ ಕರುನಾಡನ್ನು ತಂಗಚ್ಚಿ ಎನ್ನುವ ಮೂಲಕ ಚಪ್ಪಾಳೆ ಗಿಟ್ಟಿಸಿದರು. ಇದಕ್ಕೆ ಸಖತ್ ಟಾಂಗ್ ಕೊಟ್ಟ ಶಾಸಕ ಎಚ್ ಡಿ ತಮ್ಮಯ್ಯ ನಾನು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಮಾತನಾಡಲ್ಲ ಲಾರಿ ಆಫೀಸ್ ನಲ್ಲಿ ತಮಿಳು ಭಾಷೆಯನ್ನು ಚನ್ನಾಗಿ ಕಲಿತಿದ್ದೆ ಎಂಬುದನ್ನು ತಮಿಳಿನಲ್ಲೇ 2 ನಿಮಿಷ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು.‌

ಗಾಯತ್ರಿ ಶಾಂತೇಗೌಡ ಅಂತ ತಮಿಳು ಮಾತನಾಡಿದರೆ ಡಬಲ್ ಮೀನಿಂಗ್ ಆಗುತ್ತೆ ಎನ್ನುವ ಮೂಲಕ ಸಭೆಯನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿದರು. ಕೊನೆಗೆ ಕನ್ನಡದಲ್ಲೇ ಮಾತನಾಡಿದರು.

ಆದರೆ ಪಂಚ್ ನೀಡಿದ್ದು ಮಾತ್ರ ಎಂಎಲ್ ಸಿ ಎಸ್ ಎಲ್ ಭೋಜೇಗೌಡ ಎಲ್ಲರೂ ತಮಿಳು ಮಾತನಾಡಿ ಗಮನ ಸೆಳೆಯಲು ಯತ್ನಿಸಿದರೆ ಸಿಂದೂರ ಪೂವೆ ಸಿಂದೂರ ಪೂವೆ‌ ಎಂಬ ಅಣ್ಣಕ್ಕಿಳಿ ಸಿನೆಮಾದ ಶಿವಕುಮಾರ್ ನಟನೆಯ ಹಾಡು ಮತ್ತು ಕಾಮಿಡಿ ಹಾಡೊಂದನ್ನು ಹಾಡುವ ಮೂಲಕ ಆಕರ್ಷಣೆಯನ್ನು ತಮ್ಮತ್ತ ಬರಮಾಡಿಕೊಂಡರು.

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ಸಿ.ಟಿ.ರವಿ ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ

ಚಿಕ್ಕಮಗಳೂರು: ಸಿ.ಟಿ.ರವಿ ಅವರು ಸೋಲಿನ ಹತಾಶೆಯಿಂದ ಎಚ್.ಡಿ.ತಮ್ಮಯ್ಯ ವಿರುದ್ಧ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌...

20 ವರ್ಷ ಹೊರಗಿನವರೆ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದಾರೆ

ಮೂಡಿಗೆರೆ:‘ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿರೋಧ ಪಕ್ಷಗಳು ಹತಾಶೆಯಿಂದ ಬಾಯಿ ಚಪಲಕ್ಕಾಗಿ ಮಾತನಾಡುತ್ತಿವೆ’ ಎಂದು...

ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ ಎರಡೂವರೆ ವರ್ಷ ಪೂರೈಸುತ್ತಿದೆ.ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ “ಮುಖ್ಯಮಂತ್ರಿ” ಬದಲಾಗುತ್ತಾರೆ...

ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್...