ಚಿಕ್ಕಮಗಳೂರು: ಸಂತೋಷ್ ಕೋಟ್ಯಾನ್ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ. ಹಿಂದೆ ವಿದ್ಯಾರ್ಥಿ ಪರಿ?ತ್ತಿನಲ್ಲಿ ವಿವಿಧ ಜವಾಬ್ದಾರಿ ಹೊತ್ತು ಕೆಲಸ ಮಾಡಿದವರು. ಶ್ಯಾಮ್ ವಿ ಗೌಡ ಬಜರಂಗದಳದ ಹಾಸನ ವಿಭಾಗದ ಜವಾಬ್ದಾರಿ ಹೊಂದಿರುವವರು. ಇವರಿಬ್ಬರೂ ವೈಚಾರಿಕ ಬದ್ಧತೆ ಹೊಂದಿರುವ, ಅನ್ಯಾಯದ ವಿರುದ್ಧ ಸಿಡಿದೇಳುವ ಕಾರ್ಯಕರ್ತರು. ನ್ಯಾಯದ ಪರವಾಗಿ ಹೋರಾಟ ಮಾಡುವುದು, ಪ್ರಶ್ನಿಸುವುದು ಅಪರಾಧವಲ್ಲ. ಪ್ರಶ್ನಿಸುವುದೇ ಅಪರಾಧ ಎನ್ನುವ ಮಾನಸಿಕತೆ ಸರ್ವಾಧಿಕಾರಿ ಮಾನಸಿಕತೆ ಎಂದು ವಿಧಾನ ಪರಿ?ತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು. ಅವರು ಇಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ಯುವ ಮುಖಂಡರಿಗೆ ಗಡೀಪಾರು ನೋಟಿಸ್ ನೀಡಿರುವ ಕುರಿತು ಮಾಧ್ಯಮಗಳೊಡನೆ ಮಾತನಾಡುತ್ತಿದ್ದರು.
ಈ ಗಡೀಪಾರು ನೋಟಿಸ್ ನೀಡುವ ಮೂಲಕ ನಮ್ಮ ಪಕ್ಷಕ್ಕೆ ಸವಾಲು ಹಾಕಿದ್ದಾರೆ. ನಾವು ಈ ಸವಾಲು ಸ್ವೀಕರಿಸಿ, ನ್ಯಾಯಾಲಯ ಮತ್ತು ಜನತಾ ನ್ಯಾಯಾಲಯಗಳಲ್ಲಿ ಇದನ್ನು ಪ್ರಶ್ನಿಸುತ್ತೇವೆ. ಈ ರೀತಿ ಬಿಜೆಪಿಯನ್ನು ಹೆದರಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಬಳಸಿರುವ ಭಾ? ಕ್ಷಮಿಸಲಸಾಧ್ಯ. ರಾಜಕೀಯ ಕಾರ್ಯಕರ್ತರನ್ನು, ಸೈದ್ಧಾಂತಿಕ ಬದ್ಧತೆಯ ಕಾರ್ಯಕರ್ತರನ್ನು ಗೂಂಡಾಗಳು, ಹಫ್ತಾ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲು ನಾಚಿಕೆ ಆಗಬೇಕು. ಅವರನ್ನು ಕ್ರಿಮಿನಲ್ಗಳ ರೀತಿ ಕಾಣುವ ಮಾನಸಿಕತೆಗೆ ನಮ್ಮ ಧಿಕ್ಕಾರವಿದೆ. ನಮ್ಮ ಕಾರ್ಯಕರ್ತರ ಬೆನ್ನಿಗೆ ನಾವು ನಿಲ್ಲುತ್ತೇವೆ. ಅದೆ? ಜನರನ್ನು ಬಂಧಿಸುತ್ತೀರಿ, ಗಡೀಪಾರು ಮಾಡುತ್ತೀರಿ ನಾವೂ ನೋಡುತ್ತೇವೆ. ಇದು ಬ್ರಿಟಿಷ್ ಆಡಳಿತವಲ್ಲ ಎಂದು ರವಿ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ರೀತಿ ಬೆದರಿಸುವುದು ಹಳೆಯ ತಂತ್ರ. ಅದಕ್ಕೆ ನಾವು ಬೆದರುವುದಿಲ್ಲ. ಕಳೆದ ಮೂವತ್ತು ವ?ಗಳಿಂದಲೂ ನಾವು ಯಾವುದಕ್ಕೂ ಬೆದರಿದವರಲ್ಲ. ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಬೆದರಿಸಲು ಬಿಜೆಪಿ ಕಾರ್ಯಕರ್ತರು ಬೆನ್ನೆಲುಬಿಲ್ಲದವರಲ್ಲ. ಅವರ ಬೆನ್ನಿಗೆ ನಾವು ನಿಲ್ಲುತ್ತೇವೆ ಎಂದರು.
ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಸಂಘಟಿತ ಪ್ರಯತ್ನ ಮಾಡಿದರೆ, ಎರಡೂ ಚುನಾವಣೆಗಳಲ್ಲಿ ಬಿಜೆಪಿ ಗೆದ್ದು, ಸ್ಪಷ್ಟ ಸಂದೇಶ ನೀಡಬಹುದು. ಜೆಡಿಎಸ್ಗೂ ನಾಯಕರು, ಹಿತೈಷಿಗಳ ಬಳಗವಿದ್ದು, ಕಾಂಗ್ರೆಸ್ ವಿರುದ್ಧವಿರುವ ಜನಾಕ್ರೋಶವನ್ನು ನಾವು ಬಳಸಿಕೊಳ್ಳಬಹುದು. ಇದನ್ನು ಬಳಸಿಕೊಳ್ಳಬೇಕಾದರೆ ನಾವು ಸಂಘಟಿತ ಪ್ರಯತ್ನ ಮಾಡಬೇಕು ಎಂದರು.
ವೀರಣ್ಣ ಚರಂತಿಮಠ ಅವರು ಮೂರು ಬಾರಿ ಶಾಸಕರಾಗಿ ಅನುಭವ ಹೊಂದಿರುವವರು. ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಚುನಾವಣೆಗೆ ನಿಲ್ಲದಿದ್ದರೂ, ಪಕ್ಷಕ್ಕಾಗಿ ಕೆಲಸ ಮಾಡಿದವರು. ಒಬ್ಬ ಕಾರ್ಯಕರ್ತರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದರಲ್ಲಿ ಒಂದು ಸಂದೇಶವಿದೆ. ಪ್ರತಿಫಲಾಪೇಕ್ಷೆ ಇಲ್ಲದೆ ಹಗಲಿರುಳು ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ವಿಶ್ವಾಸ ಮೂಡಿಸಬೇಕು. ಇದಕ್ಕಾಗಿ ನಾನು ಎರಡೂ ಕ್ಷೇತ್ರಗಳಲ್ಲೂ ಪ್ರಚಾರಕ್ಕೆ ಭಾಗಿಯಾಗಲಿದ್ದೇನೆ, ಪಕ್ಷ ಜವಾಬ್ದಾರಿ ನೀಡಿರುವ ಪಶ್ಚಿಮ ಬಂಗಾಳ ಚುನಾವಣಾ ಕಾರ್ಯದಲ್ಲೂ ತೊಡಗಿಕೊಳ್ಳುತ್ತೇನೆ ಎಂದು ರವಿ ವಿವರಿಸಿದರು.
Wild elephants in populated areas
Leave a comment