Home namma chikmagalur ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?
namma chikmagalurchikamagalurHomeLatest NewsPolitical News

ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?

Share
ಬಿ.ಎಲ್. ಶಂಕರ್
ಬಿ.ಎಲ್. ಶಂಕರ್
Share

ಚಿಕ್ಕಮಗಳೂರು: ಬಿ.ಎಲ್.ಶಂಕರ್ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿದ್ದವರು ಹಿನ್ನಡೆ ಅನುಭವಿಸುತ್ತಿರುವುದು ಏಕೆ ?

ಕಿರಿಯ ವಯಸ್ಸಿನಲ್ಲಿ ಹಿರಿಯ ಜವಾಬ್ದಾರಿ ನಿರ್ವಹಿಸಿರುವ ಶಂಕರ್ ಕಳೆದ ಇಪ್ಪತ್ತೈದು ವರ್ಷಗಳಿಂದ ಯಾವ ಅಧಿಕಾರವಿಲ್ಲದೆ ಒದ್ದಾಡುತ್ತಿದ್ದಾರೆ. ಇಪ್ಪತ್ತೈದರ ಹರೆಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಯುವಜನ ಸೇವಾ ಮತ್ತು ಕ್ರೀಡಾ ಮಂತ್ರಿಯಾಗಿದ್ದವರು.ಬೆಳಗ್ಗೆ ವಿಧಾನ ಪರಿಷತ್ ಸದಸ್ಯರಾಗಿ ಸಂಜೆ ದೊಡ್ಡ ಕೈಗಾರಿಕಾ ಮಂತ್ರಿ ಯಾದ ದಾಖಲೆ ಇದೆ.

ಸಭಾಪತಿ ಯಾಗಿ ಸೈ ಅನ್ನಿಸಿಕೊಂಡವರು ಲೋಕಸಭಾ ಸದಸ್ಯರಾಗಿ ಜನತಾದಳದ ರಾಜ್ಯ ಅಧ್ಯಕ್ಷರಾಗಿ ಪಕ್ಷ ಕಟ್ಟಿದವರು. ಒಂದು ಹಂತದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದವರು ಕಳೆದ ಇಪ್ಪತ್ತೈದು ವರ್ಷಗಳಿಂದ ಏನು ಆಗದು ಎಂಬಂತೆ ಈ ಸಾರಿ ವಿಧಾನ ಪರಿಷತ್ ಗೆ ಗ್ಯಾರಂಟಿ ಎನ್ನುತ್ತ ಇರುವಾಗಲೇ ಪಟ್ಟಿಯಲ್ಲಿ ಇದ್ದ ಹೆಸರು ಕಾಣೆಯಾಗುತ್ತಿರುವುದರ ಗುಟ್ಟೇನಲ್ಲ.

ಜನತಾದಳ ತೊರೆದು ಕಾಂಗ್ರೆಸ್ ಸೇರಿದ ಮೇಲೆ ಮೂಲೆಗುಂಪಾಗಿರುವುದು ಸ್ಪರ್ಧೆ ಮಾಡಿದ ಚುನಾವಣೆಯಲ್ಲಿ ಸೋತ ದಾಖಲೆ ಸೇರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣಕ್ಕೆ ಸೀಮಿತವಾದ ಶಂಕರ್ ತನಗೆ ಬೇಕಾದ ಗುಂಪು ಕಟ್ಟಿಕೊಂಡು ನೆಲಕಚ್ಚಿದ್ದಾರೆ ಎಂದು ಕಾಂಗ್ರೆಸ್ ನ ಮುಖಂಡರು ಹೇಳುವುದಲ್ಲದೆ ಶಂಕರ್ ನಮಗೆ ಗೂಟ ಒಡೆದರೆ ಶಂಕರ್ ಗೂ ಗೂಟ ಒಡೆಯುವವರು ಇರುತ್ತಾರೆ ಆದ್ದರಿಂದ ಶಂಕರ್ ರಾಜಕೀಯ ನಿವೃತ್ತಿ ಪಡೆಯಲಿ ಎನ್ನುತ್ತಾರೆ.ಈ ಬಾರಿ ಖಚಿತವಾಗಿ ವಿಧಾನ ಪರಿಷತ್ ಗೆ ಹೋಗುತ್ತಾರೆ ಎನ್ನುವಾಗ ಅವರ ಬದಲಾಗಿ ಆರತಿಕೃಷ್ಣರ ಹೆಸರು ಮೂಂಚುಣಿಗೆ ಬಂದಿದ್ದು ಮಾತ್ರ ಶಂಕರ್ ತೀವ್ರ ಹಿನ್ನಡೆ ಎನ್ನಲಾಗಿದೆ.

ಶಂಕರ್ ಬೆಂಗಳೂರು ರಾಜಕಾರಣದ ಕೇಂದ್ರವಾಗಿಸಿಕೊಂಡು ತಳಮಟ್ಟದ ಹಿಡಿತ ಕಳೆದುಕೊಂಡಿರುವುದರ ಜೊತೆಗೆ ಹಿಂಬಾಲಕರು ಕಿವಿ ಕಚ್ಚಿ ರಾಜಕೀಯ ಹಿನ್ನಡೆಗೆ ಕಾರಣ ಎನ್ನುವವರು ಇದ್ದಾರೆ.

ಸಾಂಸ್ಕೃತಿಕವಾಗಿ ಉತ್ತಮ ನಡವಳಿಕೆ ಮಾತು,ಓದುವ ಹವ್ಯಾಸ ಸಭೆ,ಸಮಾರಂಭ ಸಂಘಟಿಸುವುದು,ಪ್ರಣಾಳಿಕೆ ಬೇಕಾದ ವಿಷಯ ತಿಳಿದಿರುವ ಶಂಕರ್ ಒಳ್ಳೆಯ ಭಾಷಣಕಾರ ಹೀಗಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಚಿತ್ರ ಕಲಾ ಪರಿಷತ್ ನ ಅಧ್ಯಕ್ಷರಾಗಿದ್ದು ಇತ್ತೀಚಿಗೆ ಮತ್ತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರು ಹೌದು ಒಟ್ಟಾರೆ ಹೇಳುವುದಾದರೆ ಶಂಕರ್ ಗೆ ರಾಜಕೀಯ ಬೇಕೋ ಬೇಡವೋ ಅವರೇ ಉತ್ತರಿಸ ಬೇಕು.

Why is B.L. Shankar politically backward?

Share

Leave a comment

Leave a Reply

Your email address will not be published. Required fields are marked *

Don't Miss

ಗಿರಿ ಪ್ರದೇಶದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ನೂತನ ಸಂಚಾರ ವ್ಯವಸ್ಥೆ

ಚಿಕ್ಕಮಗಳೂರು: : ಮುಳ್ಳಯ್ಯನಗಿರಿ ಭಾಗದಲ್ಲಿ ಇತ್ತೀಚೆಗೆ ವಾರಾಂತ್ಯದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, ಎರಡು ಸ್ಲಾಟ್‌ಗಳಲ್ಲಿ ಪ್ರತೀದಿನ ವಾಹನಗಳನ್ನು ಗಿರಿಭಾಗಕ್ಕೆ ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು....

ಕಾವೇರುತ್ತಿದೆ ಅಜ್ಜಂಪುರ ಪಟ್ಟಣ ಪಂಚಾಯತಿ ಚುನಾವಣೆ

ಅಜ್ಜಂಪುರ: ಕಳೆದ ಏಳು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಬಣಗುಡುತ್ತಿದ್ದ ಪಟ್ಟಣ ಪಂಚಾಯತಿಗೆ ಆಗಷ್ಟ್ 17 ರಂದು ಚುನಾವಣೆ ದಿನಾಂಕ ನಿಗದಿಯಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜನತಾದಳದ ಮಧ್ಯೆ ಬಿರುಸಿನ...

Related Articles

ಮಕ್ಕಳ ಬಾಲ್ಯ ಸುರಕ್ಷತೆಗಾಗಿ ಭದ್ರ ಬಾಲ್ಯ ಯೋಜನೆ ಅನುಷ್ಠಾನ

ಚಿಕ್ಕಮಗಳೂರು: ಮಕ್ಕಳ ಬಾಲ್ಯವನ್ನು ಸುರಕ್ಷಿತಗೊಳಿಸುವ ಗುರಿ ಇರಿಸಿಕೊಂಡು ಜಿಲ್ಲೆಯಲ್ಲಿ ಭದ್ರ ಬಾಲ್ಯ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಎಲ್ಲಾ...

ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ವಿರುದ್ಧ ಸಮಾಜದಿಂದ ಪ್ರತಿಭಟನೆ

ಚಿಕ್ಕಮಗಳೂರು:  ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ನಿಗಧಿತ ದರಕ್ಕಿಂತ ಕಡಿಮೆ...

ಮಾದಕ ವಸ್ತು ವಿರೋಧಿ ಜಾಗೃತಿ ಸಮಿತಿ ರಚನೆ ಕಡ್ಡಾಯ 

ಚಿಕ್ಕಮಗಳೂರು:  ಶಾಲಾ ಕಾಲೇಜುಗಳಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಸಮಿತಿಗಳನ್ನು ಕಡ್ಡಾಯವಾಗಿ ರಚಿಸುವ ಮೂಲಕ ಮಾದಕ ವಸ್ತು...

ವೇದಾನದಿ ನೀರಿನ ಹಂಚಿಕೆಯಲ್ಲಿ ರೈತರು ಸಂಯಮ ಕಾಪಾಡಬೇಕು

ಚಿಕ್ಕಮಗಳೂರು: ವೇದಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರೈತರು ಸಂಯಮ ಕಾಪಾಡಬೇಕು. ಜೊತೆಗೆ ಕೆರೆ ತುಂಬಿಸುವ...