Home namma chikmagalur chikamagalur ಸದೃಢ ಭಾರತ ನಿರ್ಮಿಸುವ ಗುರಿ ಯುವಜನತೆ ಮೇಲಿದೆ
chikamagalurHomeLatest Newsnamma chikmagalur

ಸದೃಢ ಭಾರತ ನಿರ್ಮಿಸುವ ಗುರಿ ಯುವಜನತೆ ಮೇಲಿದೆ

Share
Share

ಚಿಕ್ಕಮಗಳೂರು:  ಸದೃಢ ಭಾರತ ನಿರ್ಮಿಸುವ ಜವಾಬ್ದಾರಿ ಯುವಜನತೆಯ ಮೇಲಿ ದೆ. ಯುವಸಂಸತ್ ಒಂದು ಸ್ಪರ್ಧೆಯಲ್ಲ. ಸಂಸತ್ತಿನ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯ ಮತ್ತು ಆಡಳಿತ ಕ್ರ ಮಗಳನ್ನು ತಿಳಿಸುವ ವೇದಿಕೆ ಎಂದು ಐಡಿಎಸ್‌ಜಿ ಸರ್ಕಾರಿ ಕಾಲೇಜು ಪ್ರಾಂಶುಪಾಲೆ ತಸ್ನೀಮ್ ಕೌಸರ್ ಮನಿಯಾರ್ ಹೇಳಿದರು.

ನಗರದ ಐಡಿಎಸ್ ಕಾಲೇಜಿನಲ್ಲಿ ಸೋಮವಾರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಪ್ರಾಂತೀಯ ನಿರ್ದೇಶನಾಲಯ, ರಾಷ್ಟ್ರೀಯ ಸೇವಾ ಯೋಜನೆ, ಕಾಲೇಜು ಶಿಕ್ಷಣ ಇಲಾಖೆ, ಕುವೆಂಪು ವಿಶ್ವ ವಿದ್ಯಾಲಯ ಶಿವಮೊಗ್ಗ, ಐಡಿಎಸ್‌ಜಿ ಸರ್ಕಾರಿ ಕಾಲೇಜು, ಮೇರಾ ಯುವಭಾರತ್ ಸಹಯೋಗದಲ್ಲಿ ಆ ಯೋಜಿಸಿದ್ಧ ವಿಕಸಿತ್ ಭಾರತ್ ಯುವ ಸಂಸತ್-೨೦೨೬ ಜಿಲ್ಲಾ ಮಟ್ಟದ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

ಕಾಲೇಜು ದಿನಗಳಿಂದಲೇ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷವು ಕೇಂ ದ್ರ ಸರ್ಕಾರ ಆದೇಶದಂತೆ ಯುವಸಂಸತ್ ಸ್ಪರ್ಧೆ ನಡೆಸಲಾಗುತ್ತಿದೆ. ಈ ವಯಸ್ಸಿನಿಂದ ಭವ್ಯ ಭಾರತದ ನಿರ್ಮಾಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೆಜ್ಜೆಯಿರಿಸಲು ಚಿಂತನೆ ಮತ್ತು ಯೋಚಿಸುವ ನಿಟ್ಟಿನಲ್ಲಿ ಕಾ ರ್ಯನಿರ್ವಹಿಸಬೇಕು ಎಂದರು.

ಮುಂದಿನ ರಾಷ್ಟ್ರದ ಶಕ್ತಿ ಇಂದಿನ ಯುವಜನತೆ ಮೇಲಿದೆ. ದೇಶದಲ್ಲಿ ಯುವಜನಸಂಖ್ಯೆ ಹೆಚ್ಚಳಗೊಳ್ಳು ತ್ತಿದ್ದು ಸಕ್ರಿಯವಾಗಿ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಜಾಪ್ರಭುತ್ವ, ಸಂವಿಧಾನ ಆಶಯಗಳನ್ನು ಅರ್ಥೈಸಿಕೊ ಳ್ಳಬೇಕು. ರಾಜಕೀಯ ವ್ಯವಸ್ಥೆ ಬಳಸಿಕೊಂಡು ಆಡಳಿತಾತ್ಮಕ ಚಿಂತನೆಗೆ ಪದವಿಯಿಂದಲೇ ಮುಂದಾಗಬೇಕು ಎಂದು ತಿಳಿಸಿದರು.

ಜನಸಾಮಾನ್ಯರಿಗೆ ಸರ್ಕಾರಗಳ ನಿಯಮಗಳು ಹೇಗೆ ಬದಲಾವಣೆ ತರಬಹುದು ಅಥವಾ ಹೀಗಿರುವ ವ್ಯವಸ್ಥೆಯಲ್ಲಿ ಸುಧಾರಿಸುವ ಚಾಣಕ್ಯತೆ ಹೊಂದಲು ಯುವಸಂಸತ್ ಸ್ಪರ್ಧೆ ರಾಷ್ಟ್ರದ ಸುಂದರ ಭವಿಷ್ಯಕ್ಕೆ ಸ್ಪೂರ್ತಿಯಾಗಲಿದ್ದು ಆ ನಿಟ್ಟಿನಲ್ಲಿ ಕಾಲೇಜು ಹಂತದಲ್ಲೇ ಯುವಜನತೆಗೆ ಅರಿವು ಮೂಡಿಸಲು ಸ್ಪರ್ಧೆ ಆ ಯೋಜಿಸಿದ್ದು ಇದು ರಾಜ್ಯಾದ್ಯಂತ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದೆ ಎಂದರು.

ಭಾರತ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ದೇಶದ ಯುವಜನಸಂಖ್ಯೆ ದೊಡ್ಡ ಶಕ್ತಿಯಾಗಿದೆ. ಈ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಲು ವಿದ್ಯಾರ್ಥಿಗಳು ಸಾಮಾಜಿಕ ಹಾಗೂ ರಾಜಕೀಯ ಅರಿವು ಹೊಂದಿರಬೇಕು. ಸಂಸದೀಯ ವ್ಯವಸ್ಥೆಯಲ್ಲಿ ಚರ್ಚೆ, ಭಿನ್ನಾಭಿಪ್ರಾಯ ಮತ್ತು ನಿರ್ಣ ಯ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯ ಎನ್‌ಎಸ್‌ಎಸ್ ಸಂಯೋಜಕಿ ಡಾ. ಶುಭ ಮರವಂತೆ ಮಾತನಾಡಿ ಯು ವ ಸಂಸತ್ ಜಿಲ್ಲಾ ಸ್ಪದೆಯಲ್ಲಿ ವಿವಿಧ ಕಾಲೇಜುಗಳಿಂದ ಅನೇಕ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಈ ಪೈಕಿ ೧೦ ವಿದ್ಯಾರ್ಥಿಗಳು ಮಾತ್ರ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಅಲ್ಲಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಯಾಗುವ ಕೆಲವು ವಿದ್ಯಾರ್ಥಿಗಳು ಮಾತ್ರ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಸಂಸತ್‌ನಲ್ಲಿ ಭಾಗವಹಿಸು ವ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದರು.

ಕಾಲೇಜು ಸಹಾಯಕ ಪ್ರಾಧ್ಯಾಪಕ ಗಿರೀಶ್‌ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಾದ ಎನ್‌ಎಸ್‌ಎಸ್, ಕ್ರೀಡೆ, ಕೌಶಲ್ಯ ತರಬೇತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿ ಸಬೇಕು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸತ್ ಕಲಾಪಗಳು ಮತ್ತು ತುರ್ತು ಪರಿಸ್ಥಿತಿ ಸಂದರ್ಭಗಳ ಕುರಿ ತು ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ವಿದ್ಯಾರ್ಥಿಗಳು ಮಾತನಾಡಿ ದಬ್ಬಾಳಿಕೆಯಿಂದ ಸರ್ಕಾರಗಳು ಜನ ಸಾಮಾನ್ಯರಿಗೆ ವಿಪರೀತ ಹೊರೆ ನೀಡುವುದು ಆಡಳಿತವಲ್ಲ. ಅದು ನನ್ನ ದೃಷ್ಟಿಕೋನದಲ್ಲಿ ಜಂಗಲ್‌ರಾಜ್. ತಮ್ಮ ಪ್ರಕಾರ ಅಲಹಾಬಾದ್ ಹೈಕೋರ್ಟ್ ತೀರ್ಪು ಕೇವಲ ರಾಜಕೀಯ ಹತಾಶೆಯ ಕೃತ್ಯವಲ್ಲ. ಆದರೆ ನ್ಯಾಯಾಲಯದ ಅವಹೇಳನಕಾರಿಯಾಗಿದ್ದು ಸಮಾಜಕ್ಕೆ ಅಪಾಯಕಾರಿ ಸಂದೇಶ ನೀಡಿದೆ ಎಂದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾಲಘಟ್ಟದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಗೊಳಿಸಿ ನಾಗರೀಕರ ಹಕ್ಕು ಗಳನ್ನು ಕಸಿದುಕೊಳ್ಳುವ ಕೆಲಸ ಮಾಡಿತು. ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಯಿತು. ಸಂವಿಧಾನಕ್ಕೆ ತಿದ್ದು ಪಡಿಗೊಳಿಸಿತು. ಈ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ಧ ಅದೆಷ್ಟೋ ಹೋರಾಟಗಾರರನ್ನು ಸೆರೆವಾಸ ಅನುಭವಿಸುವಂತೆ ಮಾಡಿರುವ ತುರ್ತು ಪರಿಸ್ಥಿತಿ ಜನರಿಗೆ ತುಂಬಲಾರದ ಹೊರೆ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಧ್ಯಾಪಕ ಡಾ|| ಕೆ.ಎನ್.ಲಕ್ಷ್ಮೀಕಾಂತ್, ಅಭಿವೃದ್ದಿ ಸಮಿತಿ ಸದಸ್ಯ ಆದಿ ಲ್, ತೀರ್ಪುಗಾರರಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ಇಲಾಖೆ ನಿವೃತ್ತ ಪ್ರಾಂಶುಪಾಲ ಬಿ.ತಿಪ್ಪೇರುದ್ರಪ್ಪ, ಕಾಲೇಜು ಶಿಕ್ಷಣ ನಿರ್ದೇಶನಾಲಯ ಪ್ರಾಂಶುಪಾಲ ತ್ರಿಪುರಾ ಮಹೇಶ್ವರ, ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸಹ ಪ್ರಾಧ್ಯಾಪಕ ಡಾ|| ಶ್ರೀನಿವಾಸ್, ಗ್ಲೋಬಲ್ ಮತ್ತು ಸೋಷಿಯಲ್ ವೆಲ್ಫೇರ್ ಪೌಂಡೇಷನ್ ರಾಜ್ಯಾಧ್ಯಕ್ಷ ಇಮ್ರಾಮ್ ಅಹ್ಮದ್ ಬೇಗ್ ಉಪಸ್ಥಿತರಿದ್ದರು.

The goal of building a strong India lies with the youth.

Share

Leave a comment

Leave a Reply

Your email address will not be published. Required fields are marked *

Don't Miss

ಮುಖ್ಯಮಂತ್ರಿಗಳಿಂದ ಸರ್ವವ್ಯಾಪಿ ಸರ್ವಸ್ಪರ್ಶಿ ಬಜೆಟ್

ಚಿಕ್ಕಮಗಳೂರು:  ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಇಂದು ದಾಖಲೆಯ ೧೭ ನೇ ಬಜೆಟ್ ಮಂಡಿಸಿದ್ದು ಸರ್ವವ್ಯಾಪಿ ಸರ್ವಸ್ಪರ್ಶಿಯಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಪ್ರವಾಸೋದಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮೂಲಭೂತ ಸೌಕರ್ಯಕ್ಕೆ ಹಣ ಒದಗಿಸಲಾಗಿದೆ....

ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆಯದೆ ಅಂಗಡಿ ಬೀಗ

ಚಿಕ್ಕಮಗಳೂರು: ನಗರದ ವರ್ತಕರು ಅಧಿಕೃತ ಶುಲ್ಕ ಪಾವತಿಸಿ ನಗರಸಭೆಯಿಂದ ನಿಗದಿತ ಉದ್ದಿಮೆ ಪರವಾನಗಿ ಪಡೆಯುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಪೌರಾಯುಕ್ತ ಬಿ.ಸಿ ಬಸವರಾಜ್ ಮನವಿ ಮಾಡಿದರು. ಅವರು ಇಂದು ನಗರದ ಮುಖ್ಯ...

Related Articles

ಕುಶಲಕರ್ಮಿಗಳ ಬದುಕಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಹೊಸ ಚೈತನ್ಯ

ಚಿಕ್ಕಮಗಳೂರು: ಸಮಾಜದ ಕಟ್ಟಕಡೆಯ ಕುಶಲಕರ್ಮಿಗಳ ಬದುಕಿನಲ್ಲಿ ಆರ್ಥಿಕ ಕ್ರಾಂತಿ ಉಂಟುಮಾಡುವ ಉದ್ದೇಶದಿಂದ ಜಾರಿಗೆ ತರಲಾದ ಪ್ರಧಾನ...

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ...

ಬಾರ್ ಲೈನ್ ರಸ್ತೆಯಲ್ಲಿ ಕಾರಿನಲ್ಲಿ 2 ಲಕ್ಷ ರೂ ಕಳ್ಳತನ

ಚಿಕ್ಕಮಗಳೂರು: ಬ್ಯಾಂಕ್ ಕೆಲಸದ ನಿಮಿತ್ತ ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಬ್ಯಾಂಕ್‌ಗೆ ತೆರಳಿದ್ದಾಗ ಕಾರಿಗೆ ಹಾನಿ...