ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿತ್ಯ ವಸೂಲಿ ಮಾಡಲು ಈಗಾಗಲೇ ಟೆಂಟ್ ಸಮೇತ ಜಗಮಗಿಸುವ ಲೈಟ್ ಹಾಕಿ ಕೊಂಡು ಕೈಯಲ್ಲಿ ಲಾಠಿ ಹಿಡಿದುಕೊಂಡು ಬರುತ್ತಿದ್ದಾರೆ, ಬರುತ್ತಿದ್ದಾರೆ ಎಚ್ಚರ,ಎಚ್ಚರ .
ಮಲೆನಾಡಿನಲ್ಲಿ ಆನೆ ಕಾಟ, ಕಾಡು ಕೋಣಗಳ ಜೊತೆಗೆ ಹುಲಿ,ಚಿರತೆಗಳ ಹಾವಳಿ ಬಯಲು ಭಾಗದಲ್ಲಿ 24×7 ಜನರಿಂದ ವಸೂಲಿ ಮಾಡಲು ನಾಡ ಪ್ರಾಣಿಗಳು ಹಿಂಡು, ಹಿಂಡಾಗಿ ವಸೂಲಿ ಕೋರರು ಬಂದಿದ್ದಾರೆ ಎಚ್ಚರ,ಎಚ್ಚರ .
ಜಿಲ್ಲೆಯಲ್ಲಿ ಈಗಾಗಲೇ ಅಜ್ಜಂಪುರ ತಾಲ್ಲೂಕಿನ ಹಿರೇಕಾನವಂಗಲದ ಬಳಿ ನಾಲ್ಕು ವರ್ಷಗಳಿಂದ ವಸೂಲಿ ದಂಧೆ ಹೆಗ್ಗಿಲ್ಲದೆ ನಡೆಸುತ್ತಿದ್ದಾರೆ.ಇಲ್ಲಿ ಸ್ಥಳೀಯರು ಓಡಾಡಲು ಸರ್ವೀಸ್ ರಸ್ತೆ ಬಿಟ್ಟಿಲ್ಲ .ಈ ಬಗ್ಗೆ ಇದುವರೆಗೂ ಯಾರೂ ಪ್ರಶ್ನೆ ಮಾಡದಿರುವುದು ವಸೂಲಿಕೋರರಿಗೆ ವರದಾನವಾಗಿದೆ.ಸ್ಥಳೀಯ ಜನ ವಾಹನಗಳಲ್ಲಿ ಓಡಾಡುವುದರಿಂದ ಜೇಬಿಗೆ ಕೈ ಹಾಕಿ ಹಣ ಖಾಲಿ ಮಾಡಿ ಕೊಳ್ಳುತ್ತಿದ್ದಾರೆ.
ಈಗಾಗಲೇ ಸಖರಾಯಪಟ್ಟಣದ ಸಮೀಪದಲ್ಲಿ ವಸೂಲಿಕೋರರು ದೊಡ್ಡ,ದೊಡ್ಡ ಬಿಲ್ಡಿಂಗ್ ಕಟ್ಟಿದ್ದಾರೆ ಜೊತೆಗೆ ಟೋಲ್ ಗೇಟ್ ನಿರ್ಮಾಣ ಮಾಡಿ ಜಗಮಗಿಸುವ ಲೈಟ್ಸ್ ಹಾಕಿ ಕೊಂಡು ವಸೂಲಿಗೆ ರೆಡಿಯಾಗಿದ್ದಾರೆ.
ಸಖರಾಯಪಟ್ಟಣದ ಟೋಲ್ ಗೇಟ್ ಬಳಿ ಕೂಡಾ ಸ್ಥಳೀಯ ಜನರಿಗೆ ಸರ್ವೀಸ್ ರಸ್ತೆ ಬಿಡದಿರುವುದು ನಿತ್ಯ ವಸೂಲಿಗೆ ಅನುಕೂಲ ಮಾಡಿಕೊಂಡಿರುವುದು ಸ್ಥಳೀಯರು ಪ್ರಶ್ನೆ ಮಾಡದಿದ್ದರೆ ವಸೂಲಿ ಕೋರರಿಗೆ ದಾರಿ ಮಾಡಿ ಕೊಟ್ಟಂತೆ ಆಗುತ್ತದೆ.
ರಾಷ್ಟ್ರೀಯ ಹೆದ್ದಾರಿ ಮೂಡಿಗೆರೆ ಸಮೀಪ ಪೂರ್ಣ ಗೊಂಡಿಲ್ಲ ಹೀಗಾಗಿ ಟೋಲ್ ನವರಿಗೆ ಬಾಯಿ ಕುಕ್ಕೆ ಹಾಕಿದಂತೆ ಆಗಿದೆ.ರಸ್ತೆ ಕಾಮಗಾರಿ ಮುಗಿಯುವ ಮುಂಚೆ ಬಾಯಿ ಕುಕ್ಕೆ ಬಿಚ್ಚಿಕೊಂಡು ವಸೂಲಿಗೆ ಟೊಂಕ ಕಟ್ಟಿಕೊಂಡು ನಿಲ್ಲುವುದು ಖಚಿತ.
ಸ್ಥಳೀಯರು ಈಗಲೇ ಎಚ್ಚೆತ್ತು ಕೊಂಡು ಸಭೆ ಮಾಡಿ ಸರ್ವೀಸ್ ರಸ್ತೆ ಬಿಡಿಸಿ ಕೊಳ್ಳದಿದ್ದರೆ ಮುಂದೆ ವಸೂಲಿ ಕೋರರು ಜೇಬಿಗೆ ಕೈ ಕಾಕಿ ಕಾಸು ಕಿತ್ತು ಕೊಳ್ಳುವುದು ಖಚಿತ.ಜನಪ್ರತಿನಿಧಿಗಳು ನಮಗೂ ಇದಕ್ಕೂ ಸಂಬಂಧ ವಿಲ್ಲ ಎಂದು ಟೋಲ್ ನವರ ಬಳಿ ವ್ಯವಹಾರ ಮಾಡಿಕೊಳ್ಳ ಬಹುದು.ಇನ್ನೂ ಸಂಘಟನೆಗಳು ಸಮಸ್ಯೆ ಅರಿತು ಕೊಳ್ಳುವಲ್ಲಿ ಸಮಯ ಮೀರಿ ಹೋಗುತ್ತದೆ.
ಸಖರಾಯಪಟ್ಟಣ ಮತ್ತು ಸುತ್ತ ಮುತ್ತಲಿನ ಹಳ್ಳಿಯ ಜನರು ಸಭೆ ನಡೆಸಿ ತೀರ್ಮಾನ ತೆಗೆದುಕೊಂಡು ಸರ್ವೀಸ್ ರಸ್ತೆ ನಿರ್ಮಿಸದೆ ಟೋಲ್ ಗೇಟ್ ಕಟ್ಟಿರುವುದನ್ನು ಮುಚ್ಚಿದರೆ ತಾನು ತಾನಾಗಿಯೇ ಸಮಸ್ಯೆ ಬಗೆಹರಿಯುತ್ತದೆ.ವಸೂಲಿ ಕೋರರನ್ನು ತಡೆಯುವ ಜವಾಬ್ದಾರಿ ಎಲ್ಲರಿಗೂ ಸೇರಿದ್ದು ಈ ಬಗ್ಗೆ ಸ್ಥಳೀಯರು ತಕ್ಷಣ ಸಭೆ ಕರೆದು ಸಮಸ್ಯೆ ಬಗೆಹರಿಸಲು ಮುಂದಾಗ ಬೇಕಿದೆ.
The extortionists are setting up tents and coming to collect!
Leave a comment