Home namma chikmagalur chikamagalur ಡಿ.ಸಿ.ಸಿ.ಬ್ಯಾಂಕ್ ನಲ್ಲಿ ಜಾತಿ ” ಘಾಟು” ಮತ್ತು “ಟ್ರಂಕ್” ಸೊಸೈಟಿಗಳ ಆರ್ಭಟ ?
chikamagalurHomeLatest Newsnamma chikmagalur

ಡಿ.ಸಿ.ಸಿ.ಬ್ಯಾಂಕ್ ನಲ್ಲಿ ಜಾತಿ ” ಘಾಟು” ಮತ್ತು “ಟ್ರಂಕ್” ಸೊಸೈಟಿಗಳ ಆರ್ಭಟ ?

Share
Share

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ”ಜಾತಿ” ಗ್ರಹಣ ಮೊದಲಿನಿಂದಲೂ ಇದೆ ಆದರೆ ಈ ಬಾರಿ ಬಹಿರಂಗವಾಗಿ ಕೇಕೆ ಹಾಕುತ್ತಾ ಬೀದಿ,ಬೀದಿಯಲ್ಲಿ ನರ್ತನ ಮಾಡಲು ಚಿಲ್ಟುಪಲ್ಟು ಮುಖಂಡರಿಂದ ಹಿಡಿದು ರಾಷ್ಟ್ರೀಯ ನಾಯಕರವರತನಕ ಹಬ್ಬಿದೆ ಇದರಿಂದ ನೌಕರರಲ್ಲಿ ಹಲವರಿಗೆ ಬಾಡೂಟ ಗ್ಯಾರಂಟಿಯಾಗಿದೆ.ಒಂದಿಬ್ಬರು ನಿರ್ದೇಶಕರಿಗೆ ಅಮ್ಮನ ಹಬ್ಬವನ್ನು ದಿನವೂ ಆಚರಿಸುವಂತಾಗಿದೆ.

ಕಳೆದ ಬಾರಿ ಲಿಂಗಾಯಿತರು ಹಿಡಿತ ಸಾಧಿಸಿದ್ದಾರೆ ಎಂದು ಈ ಬಾರಿ ಚುನಾವಣಾ ಅಜೆಂಡಾ ಮಾಡಿಕೊಂಡು ತಾನೇ ಕುರ್ಚಿಗೆ ಟೆವೆಲ್ ಹಾಕಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ಸಂಬಾಳಿಸಿ ಕೊಂಡು ಹೋಗುವ ಬದಲು ಪುಗ್ಸಟ್ಟೆಗಳ ಮಾತು ಕೇಳಿ ಬ್ಯಾಂಕ್ ನ ಒಳ ಬಣ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ .

ನಿರಂಜನ್ ಸೋತ ನಂತರ ಬಿಜೆಪಿ ಯಿಂದ ಕಿಕ್ ಔಟ್ ಮಾಡಿದಾಗ ಸಹಜವಾಗಿ ಪ್ರತಿಕ್ರಿಯೆ ನೀಡಿ ಇದಕ್ಕೆಲ್ಲ ಕಾರಣ ಸಿ.ಟಿ.ರವಿ ಎಂಬ ಆರೋಪ ಮಾಡಿದ್ದಾರೆ.ಇದಕ್ಕೆ ಸಿ.ಟಿ.ರವಿ ಅಥವಾ ಬಿಜೆಪಿ ಉತ್ತರ ಕೊಡುವುದು ಬಿಟ್ಟು ಬಿಜೆಪಿಯಲ್ಲಿ ಇರುವ ಲಿಂಗಾಯಿತ ಮುಖಂಡರಾದ ಕಲ್ಮರಡಪ್ಪ, ಬೀಕನಹಳ್ಳಿ ಸೋಮಣ್ಣ,ವಿಜಯ್ ಕುಮಾರ್, ಚಿಕ್ಕದೇವನೂರು ರವಿಯಂತಹ ಘಾಟಾನು ಘಟಿಗಳು ನಿರಂಜನ್ ವಿರುದ್ದ ಪತ್ರಿಕಾ ಗೋಷ್ಟಿ ಮಾಡಿ ನಮ್ಮ ನಾಯಕರು ಕೆ.ಎಮ್.ಎಫ್ ಹಾಲು,ಮೊಸರಿದ್ದಂತೆ ಎಂದು ರಾಗ ಎಳೆದಿದ್ದಾರೆ.

ನಿರಂಜನ್ ಲಿಂಗಾಯತ ಆಗಿರುವ ಕಾರಣ ಅವರ ವಿರುದ್ದ ಲಿಂಗಾಯತರನ್ನು ಎತ್ತಿ ಕಟ್ಟಲಾಗಿದೆ ಎಂಬ ಗುರು ತರಹ ಮಾತುಗಳು ಹಾದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಪುಗ್ಸಟ್ಟೆ ಜಾಗಟೆ ಗಂಟೆ ರೆಡಿ ಇಟ್ಟುಕೊಂಡಿರುವ ಟ್ರಂಕ್ ಸೊಸೈಟಿಗಳಿಗೆ ಡಿ.ಸಿ.ಸಿ ಬ್ಯಾಂಕ್ ನಿಂದ ಅಭಿವೃದ್ಧಿಗಾಗಿ ಹಣ ವಿತರಿಸಲಾಗಿದೆ ಇದರಲ್ಲಿ ಗೋಲ್ ಮಾಲ್ ನಡೆದಿದ್ದು ಸಿಕ್ಕವರಿಗೆ ಸೀರುಂಡೆ ಎಂಬಂತೆ ಆಗಿದೆ ಒಂದೇ ಮನೆಯಲ್ಲಿ ಏಳು ಸೊಸೈಟಿಗಳು ಇವೆ ಇವರೆ ಬಿಜೆಪಿಯ ಸಹಕಾರಿ ಪಿತಾಮಹ ಎನ್ನುತ್ತಿದ್ದು ಈ ಬಗ್ಗೆ ದೂರು ನೀಡಲು ಸೋತ ಅಭ್ಯರ್ಥಿ ದಾಖಲೆಗಳನ್ನು ಹುಡುಕುತ್ತಿದ್ದಾರೆ .

ಕಳೆದ ಹತ್ತು ವರ್ಷಗಳಿಂದ ಈಗಲೂ ಮತ್ತೆ ಅಯ್ಕೆಯಾಗಿರುವ ಟಿ.ಎಲ್.ರಮೇಶ್ ಗೆ ಇವುಗಳು ಕಾಣದಿರುವುದು ಆಶ್ಚರ್ಯ ಏಕೆ ಎಂದರೆ ಇವರ ವಿರುದ್ದ ಚುನಾವಣೆ ಮಾಡಿದ ನಿವೃತ್ತ ಡಿ.ಸಿ.ಸಿ.ಬ್ಯಾಂಕ್ ನೌಕರರ ಸಂಘದ ಬಗ್ಗೆ ಕತ್ತಿ,ಗುರಾಣಿ ಹಿಡಿದು ತಿವಿಯಲು ಶುರುಮಾಡಿರುವುದು ಟ್ರಂಕ್ ಸೊಸೈಟಿಗಳಿಗೆ ಎಲ್ಲರೂ ಸೇರಿ ಗುನ್ನಾ ಹೊಡೆಯುವುದು ಕಾಂಗ್ರೆಸ್ ಗ್ಯಾರಂಟಿ ಅಂತಾಗಿದೆ.

ಜೊತೆಗೆ ಹಾದಿ ಬೀದಿಗೆ ಬ್ಯಾಂಕ್ ತಂದು ನಿಲ್ಲಿಸುವ ಬದಲು ಆಗಿರುವ ಲೋಪ ದೋಷಗಳನ್ನು ಸರಿಪಡಿಸುವ ಬದಲಿಗೆ ಅಂತರಘಟ್ಟೆ ಜಾತ್ರೆಯಲ್ಲಿ ಬಾಂಬೆ ನೋಡು,ಡೆಲ್ಲಿ ನೋಡು,ಬೆಂಗಳೂರು ನೋಡು ಎಂಬ ಪೆಟ್ಟಿಗೆ ಸಿನಿಮಾ ತರಹ ಮಜಾ ತೆಗೆದುಕೊಳ್ಳುವವರು ಜೊತೆಯಲ್ಲಿ ಇದ್ದಾರೆ ಎಂದು ತಿಳಿಯುವುದು ಉತ್ತಮ.

ಜಾತಿ ವ್ಯವಸ್ಥೆ ಎಷ್ಟಿದೆ ಎನ್ನಲು ಬಯಲು ಸೀಮೆಯಿಂದ ಅದರಲ್ಲೂ ಲಿಂಗಾಯತ ಜಾತಿಯವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ‌ತರಲು ಪ್ರಯತ್ನ ನಡೆಸಿದರು ಪ್ರಯೋಜನ ಆಗಿಲ್ಲ ಎಂದರೆ ಮುಂದೆ ಕಾದಿದೆ ಮಾರಿ ಹಬ್ಬ ಎಂದು ಮಾತನಾಡುವವರು ಇದ್ದಾರೆ.

The emergence of caste “Ghatu” and “Trunk” societies in DCC Bank?

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದಲ್ಲಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಅಜ್ಜಂಪುರ: ರೈಲ್ವೆ ಹಳಿ ಮೇಲೆ ರೈಲಿಗೆ ಸಿಲುಕಿ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯು ಕೋಲು ಮುಖ, ಸದೃಢ ಮೈಕಟ್ಟು ಮತ್ತು ಎಣ್ಣೆ...

ಶಾಸಕ ತಮ್ಮಯ್ಯ ರಸ್ತೆ ಡಾಂಬರೀಕರಣ ಕಾಮಗಾರಿ ಪರಿಶೀಲನೆ

ಚಿಕ್ಕಮಗಳೂರು: ನಗರಸಭಾ ವ್ಯಾಪ್ತಿಯಲ್ಲಿ ವಿಶೇಷ ಅನುದಾನದಡಿ ಕೈಗೊಂಡಿರುವ ರಸ್ತೆ ಡಾಂಬರೀಕರಣ ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಪರಿಶೀಲಿಸಿದರು. ಅವರು ಇಂದು ನಗರದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು...

Related Articles

ಆಸ್ತಿ ವಿವಾದ – ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಆಸ್ತಿ ವಿವಾದವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಅನಾಥನಾಗಿದ್ದ...

ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್ ಉದ್ಯೋಗ ವಂಚನೆ

ಚಿಕ್ಕಮಗಳೂರು : ಇಂಜಿನಿಯರಿಂಗ್ ಪದವೀಧರೆ ಆನ್‌ಲೈನ್ ಉದ್ಯೋಗ ವಂಚನೆಗೆ ಬಲಿಯಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರದ...

ಆನ್‌ಲೈನ್ ಟ್ರೇಡಿಂಗ್ ಆಸೆಗೆ 4.36 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ

ಕಡೂರು : ಮಹಿಳೆಯೊಬ್ಬರು ಆನ್‌ಲೈನ್ ಟ್ರೇಡಿಂಗ್ ಆಸೆಗೆ ಬಿದ್ದು 4.36 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ...

ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಚಿಕ್ಕಮಗಳೂರು : ಮನುಷ್ಯತ್ವಕ್ಕೆ ಮಸಿ ಬಳಿಯುವಂತೆ ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ...