Home namma chikmagalur chikamagalur ಗಣೇಶನ ಮರ್ಡರ್ ಕೇಸ್ ಗೆ “ಟ್ವಿಸ್ಟ್” ಕೊಡುತ್ತಿರುವ “ಸೆಕ್ಸ್ ಸಿ.ಡಿಗಳು”! ಆರೋಪಿ ಕತ್ತೆಸಂದೀಪನ ಬಂಧನ ಯಾವಾಗ ?
chikamagalurCrime NewsHomeKadurLatest Newsnamma chikmagalur

ಗಣೇಶನ ಮರ್ಡರ್ ಕೇಸ್ ಗೆ “ಟ್ವಿಸ್ಟ್” ಕೊಡುತ್ತಿರುವ “ಸೆಕ್ಸ್ ಸಿ.ಡಿಗಳು”! ಆರೋಪಿ ಕತ್ತೆಸಂದೀಪನ ಬಂಧನ ಯಾವಾಗ ?

Share
Share

ಕಡೂರು: ಸಖರಾಯಪಟ್ಟಣದಲ್ಲಿ ಗಣೇಶನ ಕೊಲೆಯಾಗಿ ಒಂದು ವರೆ ತಿಂಗಳಾಯಿತು ಅದರೂ ಗಣೇಶನ ಬಗ್ಗೆ ಹೊಸ,ಹೊಸ ವಿಷಯಗಳು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವುದು ಹಲವು ವಿಚಾರಗಳು ಹರಿದಾಡುತ್ತಿರುವುದು ಏಕೆ ?

ಗಣೇಶನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಇನ್ನೂ ಕೂಡ ತನಿಖೆ ಮುಂದುವರೆದಿದೆ .ಇಪ್ಪತ್ತಕ್ಕೂ ಹೆಚ್ಚು ಜನರಿಗೆ ನೋಟೀಸ್ ನೀಡಿ ತನಿಖೆ ಮಾಡಿದ್ದಾರೆ.ಆದರೆ ಕೊಲೆ ಪ್ರಯತ್ನದಡಿ ಕತ್ತೆ ಸಂದೀಪ್ ಮತ್ತಿತರನ್ನು ಬಂಧಿಸದಿರುವುದು ಏಕೆ ?

ಗಣೇಶನ ಹೈ ಪೋನ್ ತೆರೆಯಲು ಗಣೇಶ ತನ್ನ ಕಣ್ಣ ರೆಪ್ಪೆ ಬಳಸುತ್ತಿದ್ದ ಹೀಗಾಗಿ ಹೈ ಪೋನ್ ತೆರೆಯಲು ಎಫ್ಎಸ್,ಎಲ್ ಗೆ ಕಳುಹಿಸಲಾಗಿತ್ತು ಆತನ ಸಂಪೂರ್ಣ ವಿಚಾರ ಪೊಲೀಸರಿಗೆ ತಿಳಿದಿದೆ.ಆದರೆ ಕೊಲೆಗೂ ಮೊಬೈಲ್ ನಲ್ಲಿ ಇರುವ ಮಾಹಿತಿಗೂ ಸಂಬಂಧ ವಿಲ್ಲ ಎಂದು ತಿಳಿದುಬಂದಿದೆ.

ಗಣೇಶನ ಮೊಬೈಲ್ ನಲ್ಲಿ ಹಲವು ಪ್ರತಿಷ್ಠಿತರ ಸೆಕ್ಸ್ ಚಿತ್ರಗಳಿವೆ ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ಹಲವರಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿವೆ.ಹಲವರು ಇವನ ಕಿರುಕುಳಕ್ಕೆ ಹೆದರಿದ್ದರು ಜೊತೆಗೆ ಲ್ಯಾಂಡ್ ಡೀಲಿಂಗ್ ನಲ್ಲಿ ಲಕ್ಷಂತರ ರೂಗಳು ಬಂದಿವೆ.ಕೊಲೆಗೆ ಲ್ಯಾಂಡ್ ನ ವ್ಯವಹಾರ ಹಂಚಿಕೆಯ ವ್ಯತ್ಯಾಸ ಕೂಡ ಕಾರಣ ಎಂಬುದು ಪ್ರಮುಖ ಸಂಗತಿ.

ಗಣೇಶನ ಪ್ರತಿಯೊಂದು ವ್ಯವಹಾರ, ಚಲನವಲನಗಳು ವಿಡಿಯೋ ತೆಗೆದಿರುವ ಸಂಪೂರ್ಣ ಮಾಹಿತಿ ಕತ್ತೆ ಸಂದೀಪ್ ಗೆ ಗೊತ್ತಿದೆ ಎಂಬುದು ಬಹಿರಂಗ ಸತ್ಯ. ಕೊಲೆಯಾದ ದಿನ ಕೂಡ ಗಣೇಶನ ಜೊತೆಯಲ್ಲಿ ಇದ್ದ ಸಂದೀಪ್ ನಿಗೆ ಸಣ್ಣ ಪೆಟ್ಟು ಕೂಡ ಬಿದ್ದಿಲ್ಲ ಎಂಬುದು ಹಲವು ಸಂಶಯವನ್ನು ಉಂಟುಮಾಡುತ್ತಿದೆ.ಅಂದು ಊರು ಬಿಟ್ಟವನು ಇಂದಿಗೂ ಊರಿಗೆ ಬಂದಿಲ್ಲ. ಗಣೇಶನ ಹತ್ತಿರ ಹಣ ಮತ್ತು ಬಂಗಾರ ಪಡೆದಿರುವ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ.ದೂರಿನಲ್ಲಿ ಪ್ರಥಮ ಆರೋಪಿ ಆದರೂ ಬಂಧನವಾಗಿಲ್ಲ ಎಂದರೆ ಸಂಶಯ ಸಹಜವಾಗಿಯೇ ಬರುತ್ತದೆ.

ಕತ್ತೆ ಸಂದೀಪ್ ತರೀಕೆರೆಯ ನೆಂಟರ ಮನೆಯಲ್ಲಿ ಇರುವ ಗುಮಾನಿ ಇದೆ.ಹೀಗಾಗಿ ಗಣೇಶನ ಮುಗಿಸಲು ಕೈ ಜೋಡಿಸಿರ ಬಹುದು ಎಂದು ಜನ ಮಾತನಾಡುತ್ತಿದ್ದಾರೆ. ಈತನಿಂದ ಹಲವು ಮಾಹಿತಿಗಳು ಹೊರಬರುವುದು ಖಚಿತವಾಗಿದ್ದರೂ ಪೊಲೀಸ್ ರ ಮೇಲೆ ಒತ್ತಡ ಇರಬಹುದು ಎಂದು ವಿಶ್ಲೇಷಣೆ ನಡೆಯುತ್ತಿದೆ.

ಗಣೇಶನ ಕೊಲೆ ಮಾಡಿದ ಮೇಲೆ ಸಖರಾಯಪಟ್ಟಣದಲ್ಲಿ ಜನ ಸಂಜೆ ಆರು ಗಂಟೆಗೆ ಮನೆ ಸೇರಿಕೊಳ್ಳುತ್ತಿರುವ ಬಗ್ಗೆ ಹಿರಿಯ ಮುಖಂಡ ಮಂಜುನಾಥ್ ಹಂಚಿಕೊಂಡಿದ್ದಾರೆ.ಇಪ್ಪತ್ತೈದಕ್ಕೂ ಹೆಚ್ಚು ಜನ ಡ್ರಗ್ ದಾಸರಾಗಿದ್ದು ಯಾವಾಗ ಏನೋ ಎಂಬ ಆತಂಕ ಇರುವುದರ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.

“Sex CDs” are giving a “twist” to Ganesh’s murder case!

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಅಮಾಯಕ ಜೀವ ಬಲಿ

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಮತ್ತೆ ಮುಂದುವರಿದಿದ್ದು,ನಾಲ್ಕು ದಿನಗಳ ಅಂತರದಲ್ಲಿ ಮತ್ತೊಂದು ಅಮಾಯಕ ಜೀವ ಬಲಿಯಾಗಿದ್ದು, ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ. ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ...

ಹಾಪ್‌ಕಾಮ್ಸ್ ಜಿಲ್ಲಾ ಅಧ್ಯಕ್ಷರಾಗಿ ಕುಮಾರಸ್ವಾಮಿ-ಉಪಾಧ್ಯಕ್ಷ ಹಾಲಪ್ಪ

ಚಿಕ್ಕಮಗಳೂರು: – ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂ ಸ್ಕರಣಾ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಹೆಚ್.ಕುಮಾರಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ಜಿ.ಹಾಲಪ್ಪ ಸೋ ಮವಾರ ಸಂಘದ ಕಚೇರಿಯಲ್ಲಿ ಅವಿರೋಧವಾಗಿ ಆಯ್ಕೆಯಾದರು....

Related Articles

ಡಿ.ಸಿ.ಸಿ.ಬ್ಯಾಂಕ್ ಚುನಾವಣೆಯ ರಂಗೀನಾಟ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಹೈ ಡ್ರಾಮಾ ನೋಡಿದರೆ ಯಾವ ಕಡೆ ನಗಾಡ...

ಬೀರೂರು ಪಟ್ಟಣದಲ್ಲಿ ಚಿರತೆ ಸಂಚಾರ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಚಿರತೆ ಸಂಚಾರ ಹೆಚ್ಚಿರುವುದು ಜನರಲ್ಲಿ ಭಾರೀ ಆತಂಕ ಮೂಡಿಸಿದೆ....

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಂತ ನಾಡಿಗ್ ಗೆ ಅಭಿನಂದನ ಸಮಾರಂಭ

ತರೀಕೆರೆ: ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕತ೯ ಅನಂತ ನಾಡಿಗ್ ಗೆ ತಾಲ್ಲೂಕು ಶರಣ...

ನಾಗರೀಕ ಸೇವಾ ಪರೀಕ್ಷೆ ಎದುರಿಸಲು ಜ್ಞಾನ, ಛಲದ ಅವಶ್ಯ

ಚಿಕ್ಕಮಗಳೂರು: ನಾಗರೀಕ ಸೇವಾ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ವಿ ದ್ಯಾರ್ಥಿಗಳಿಗೆ ಆಸ್ತಿ-ಅಂತಸ್ತಿನ ಅರ್ಹತೆ ಬೇಕಿಲ್ಲ. ಅಪಾರ...