ಚಿಕ್ಕಮಗಳೂರು: ಸೈಬರ್ ಕ್ರಿಮಿನಲ್ಗಳ ಜಾಲಕ್ಕೆ ಸಿಲುಕಿ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 3.12 ಲಕ್ಷ ಕಳೆದುಕೊಂಡಿದ್ದಾರೆ. ನಗರದಲ್ಲಿ ವಾಸವಾಗಿರುವ 62 ವರ್ಷದ ವೆಂಕಟೇಶ್ ಇತ್ತೀಚೆಗೆ ಅವರ ಮೊಬೈಲ್ಗೆ ಬಂದಿದ್ದ ಒಂದು ಅಪರಿಚಿತ ಎಪಿಕೆ (APK) ಫೈಲ್ ಲಿಂಕ್ ಅನ್ನು ಅವರು ಅಜಾಗರೂಕತೆಯಿಂದ ಕ್ಲಿಕ್ ಮಾಡಿದ್ದರು.
ಈ ಒಂದು ಸಣ್ಣ ತಪ್ಪನ್ನೇ ಕಾಯುತ್ತಿದ್ದ ಖದೀಮರು, ಅವರ ಫೋನ್ನಲ್ಲಿದ್ದ ಡೇಟಾವನ್ನು ಅಕ್ರಮವಾಗಿ ಪ್ರವೇಶಿಸಿ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಕ್ಷಣಾರ್ಧದಲ್ಲಿ ವರ್ಗಾಯಿಸಿಕೊಂಡಿದ್ದಾರೆ. ಬ್ಯಾಂಕ್ನಿಂದ ಹಣ ಕಡಿತವಾದ ಸಂದೇಶಗಳು ಬಂದಾಗ ಮಾತ್ರ ವೆಂಕಟೇಶ್ ಅವರಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.
ಈ ಕುರಿತು ಬ್ಯಾಂಕ್ ಕಸ್ಟಮರ್ ಕೇರ್ ಸಂಪರ್ಕಿಸಿದಾಗ, ಮಾಲ್ವೇರ್ ಮೂಲಕ ಡೇಟಾ ಕಳವು ಮಾಡಿ ಹಣ ದೋಚಿರುವ ಅಂಶ ದೃಢಪಟ್ಟಿದೆ. ಸದ್ಯ ಈ ಗಂಭೀರ ಪ್ರಕರಣದ ಕುರಿತು ಚಿಕ್ಕಮಗಳೂರು ನಗರದ ಸೈಬರ್ ಕ್ರೈಂ (ಸೆನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಕರ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Senior citizens cheated of Rs 3.12 lakh
Leave a comment