ಚಿಕ್ಕಮಗಳೂರು: ಭಾರತ ಪರಂಪರೆಯಲ್ಲಿ ಮಾತೆ ಸಾವಿತ್ರಿ ಬಾಯಿ ಪುಲೆ ಓರ್ವರು ಅತ್ತುತ್ತಮ ಸಮಾಜ ಸೇವಕಿ. ಅಂದಿನ ದಿನಗಳಲ್ಲಿದ್ದ ಮೌಡ್ಯತೆ ಕಂದಚಾರಗಳ ವಿರುದ್ದ ಹೋರಾಡಿದ ಧೀ ಮಂತ ಮಹಿಳೆ ಎಂದು ವಿಧಾನ ಪರಿ?ತ್ ಸದಸ್ಯ ಸಿ.ಟಿ. ರವಿ ಹೇಳಿದರು.
ನಗರದ ಟಿಎಂಎಸ್ ರೋಟರಿ ಸಭಾಂಗಣದಲ್ಲಿ ಸಾವಿತ್ರಿ ಬಾಯಿ ಫುಲೆ ರಾಷ್ಟ್ರೀಯ ಫೆಡರೇಷನ್ ನವ ದೆಹಲಿ, ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ತಾಲ್ಲೂಕು ಘಟಕದಿಂದ ಆಯೋಜಿಸಿದ್ಧ ಅಕ್ಷರ ಕ್ರಾ ಂತಿ ಮಹಿಳೆ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾ ಡಿದರು.
ಫುಲೆಯವರು ಶತಮಾನಗಳ ಮಧ್ಯೆಯಲ್ಲಿ ತೂರಿಕೊಂಡ ಕಂದಚಾರಗಳಿಂದಾಗಿ ಹೆಣ್ಣುಮಕ್ಕಳು ವಿದ್ಯೆ ಕಲಿಯಬಾರದೆಂದು ಕೆಲವು ಮೌಡ್ಯರು ಸಮಾಜದಲ್ಲಿ ಹೇರಿದ್ದರು. ಇದನ್ನು ಮೀರಿ ಅಂದಿನ ದಿನಗಳಲ್ಲಿ ಪತಿ ಜ್ಯೊತಿಬಾ ಪುಲೆ ಯವರ ಸಹಕಾರದೊಂದಿಗೆ ೧೫೦ ವ?ಗಳ ಹಿಂದೆ ಮಹಿಳೆಯರಿಗೆ ವಿದ್ಯಾದಾನ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟ ಗಾರ್ತಿ ಹಾಗು ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು, ದಣಿವರಿಯದ ಸತ್ಯ ಶೋಧಕಿ, ಆಧುನಿಕ ಶಿಕ್ಷಣದ ತಾಯಿಯಾಗಿ ಅಕ್ಷರ ಕ್ರಾಂತಿ ಮೂಡಿಸಿದವರು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಹಾಗೂ ಗುಣಮಟ್ಟದ ಶಿಕ್ಷಣವನ್ನು ಬೋಧಿಸಬೇಕು. ಆ ಮೂಲಕ ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಮೂಲಕ ರಾಷ್ಟ್ರದ ಭವ್ಯ ತೆ ಕಾಪಾಡಬೇಕು. ಜೊತೆಗೆ ಸಾವಿತ್ರಿಫುಲೆಯವರ ಆದರ್ಶಗಳಡಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿ ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷೆ ಜ್ಯೋತಿ ಶಿಕ್ಷಣದಲ್ಲಿ ದೊ ಡ್ಡ ಕ್ರಾಂತಿ ಮೂಡಿಸಿದ ಸಾವಿತ್ರಿಭಾಯಿ ಫುಲೆಯವರು ಪ್ರತಿ ಶಿಕ್ಷಕ ವರ್ಗಕ್ಕೆ ಪ್ರೇರಣೆಯಾಗಬೇಕು. ಅನಾದಿ ಕಾಲದಲ್ಲಿ ಹೆಣ್ಣುಮಕ್ಕಳು ಹೊರಕಳಿಸದ ಸ್ಥಿತಿಯಲ್ಲಿ ಫುಲೆಯವರು ಗಂಡನ ಸಹಾಯದಿಂದ ಹೆಣ್ಣುಮಕ್ಕಳಿಗೆ ವಿದ್ಯಾದಾನ ಮಾಡಿದವರು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರೇಖಾ ನಾಗರಾಜ್, ಸುನಾ, ಲಕ್ಷ್ಮಣ್, ಕ.ರಾ.ಸ.ನೌಕರರ ಸಂ ಘದ ನಿರ್ದೇಶಕರಗಳು, ಕಾರ್ಯಾಧ್ಯಕ್ಷರು, ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳು, ಸಾವಿ ತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಮತ್ತು ತಾಲೂಕು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Savitribai Phule was a great social worker.
Leave a comment