Home Latest News Sachin Meega:ಸಚ್ಚಿನ್ ಮೀಗಾ ಎಂಬ ಮಾಯಾ ಮೃಗನಿಂದ ವೃದ್ದ ದಂಪತಿಗೆ ಹಿಂಸೆ ಕಿರುಕುಳ
Latest NewsHome

Sachin Meega:ಸಚ್ಚಿನ್ ಮೀಗಾ ಎಂಬ ಮಾಯಾ ಮೃಗನಿಂದ ವೃದ್ದ ದಂಪತಿಗೆ ಹಿಂಸೆ ಕಿರುಕುಳ

Share
Share

ಚಿಕ್ಕಮಗಳೂರು: ಕಳೆದ ಹದಿನೈದು ವರ್ಷಗಳಿಂದ ಕಾಂಗ್ರೆಸ್ ರೈತ ವಿಭಾಗದ ರಾಜ್ಯದ ಅಧ್ಯಕ್ಷ. ಸಚಿನ್ ಮೀಗಾ ಎಂಬ ಮಾಯಾ ಮೃಗಾ ವೃದ್ದ ದಂಪತಿಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿರುವ ಬಗ್ಗೆ ರಮೇಶ್ ಭಟ್ ಮತ್ತು ವಾಣಿ ದೂರಿದ್ದಾರೆ.

ಸಚಿನ್ ರೈತ ಸಂಘಟನೆ ಮಾಡಿದ್ದಕ್ಕಿಂತ ಎಲ್ಲಿ,ಎಲ್ಲಿ ಎತ್ತುವಳಿ ಮಾಡಬಹುದು ಎಂದು ಲೆಕ್ಕಾಚಾರ ಮಾಡಿದ್ದೇ ಹೆಚ್ಚು ಎಂದು ಕಾಂಗ್ರೆಸ್ ನವರ ಮಾತು.

ಸದಾಕಾಲವೂ ಬೆಂಗಳೂರಿನಲ್ಲಿ ಠೀಕಾಣಿ ಹೊಡೆದು ಡಿ.ಕೆ. ಹಿಂದೆ, ಮುಂದೆ ಸುತ್ತುವ ಈತ ಲ್ಯಾಂಡ್ ಡೀಲರ್,ಫೈನಾನ್ಸಿಯರ್,ದಲ್ಲಾಳಿಗಳಿಗೆ,ವ್ಯಾಪಾರಿಗಳಿಗೆ ಲೆಟರ್ ಹೆಡ್ ನಾಯಕರುಳನ್ನು ಹುಟ್ಟು ಹಾಕಿದ ಖಳನಾಯಕ ಎಂಬ ಅಪಕೀರ್ತಿ ಈತನ ಮೇಲಿದೆ.

ಈತನ ತಂದೆ ಮೀಗಾ ಚಂದ್ರಶೇಖರ್ ಅತ್ಯಂತ ಪ್ರಾಮಾಣಿಕ ಒಮ್ಮೆ ಜಿ,ಪಂ ಸದಸ್ಯರಾಗಿ ಹೊಲಸು ರಾಜಕೀಯ ಬೇಡ ಎಂದವರ ಮಗನಾಗಿ ಎತ್ತುವಳಿ ಎಕ್ಸ್ ಫರ್ಟ್ ಎಂದು ಕರೆಯಿಸಿ ಕೊಳ್ಳುವ ಈತಾ ರಮೇಶ್ ಭಟ್ ಮತ್ತು ವಾಣಿ ಎಂಬ ವೃದ್ದದಂಪತಿಗಳನ್ನು ಕಣ್ಣೀರಿನಲ್ಲಿ ಮುಳುಗಿಸಿದ್ದಾನೆ.

ಈತನನ್ನು ಕಾಂಗ್ರೆಸ್ ನವರು ಮಳ್ಳಿಗ ಮಸಾಲೆ ದೋಸೆ ಸಚಿನ್ ಎನ್ನುತ್ತಾರೆ ಎಂದರೆ ಯೋಚಿಸಲೇ ಬೇಕು.

ಕೊಪ್ಪ ತಾಲ್ಲೂಕು ಬೇರು ಕೂಡಿಗೆ ರಮೇಶ್ ಭಟ್ ರ ಐದು ಎಕರೆ ಇಪ್ಪತೈದು ಗುಂಟೆ ಜಮೀನು ಖರೀದಿ ಮಾಡಿದ್ದಾನೆ.

ವೃದ್ದ ದಂಪತಿಗೆ ಇನ್ನೂ ಇಪ್ಪತೈದು ಎಕರೆ ಅಡಿಕೆ ಮತ್ತು ಕಾಫಿ ತೋಟವಿದ್ದು ಇದರ ಮೇಲೆ ಕಣ್ಣು ಬಿಟ್ಟಿರುವ ಮಾಯಾ ಮೃಗ ಸಚಿನ್ ವಾಸದ ಮನೆ ಖಾಲಿ ಮಾಡಿಸಲು ತಂತ್ರ, ಕುತಂತ್ರ ಮಾಡುತ್ತಿದ್ದು ಗೇಟ್ ಮುರಿಸುವುದು,ಕರೆಂಟ್ ತೆಗೆಯುವುದು,ನೀರಿನ ಮೋಟರ್ ಕೆಡಿಸಿದ್ದು ಈ ಬಗ್ಗೆ ಇಲಾಖೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ .

ಪೊಲೀಸ್ ರಿಗೆ ದೂರು ನೀಡಲು ಹೋದರು ದೂರು ತೆಗೆದು ಕೊಂಡಿಲ್ಲ. ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ್ದಾರೆ.ಇಂತಹ ಚಿತ್ರ ವಿಚಿತ್ರ ಅನುಭವಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ ಒಂದು ವಾರದಿಂದ ಕತ್ತಲೆಯ ಕೋಣೆಯಲ್ಲಿ ಬಂಧನಕ್ಕೆ ಒಳಗಾದ ಭೀತಿ ಇದ್ದು ಹೆಚ್ಚು ಕಡಿಮೆಯಾದರೆ ಯಾರು ಹೊಣೆ.

ನಮ್ಮ ತೋಟದ ಬೆಳೆಯನ್ನು ಕೊಯ್ಲು ಮಾಡಲು ಬಿಡುತ್ತಿಲ್ಲ.ದಬ್ಬಾಳಿಕೆ ಮೇಲೆ ಆತನೆ ಅಡಿಕೆ ಕೊಯ್ಲು ಮಾಡಿದ್ದು ಈ ಬಗ್ಗೆ ಪೊಲೀಸ್ ರು ದೂರು ಪಡೆಯುತ್ತಿಲ್ಲ.ನಮಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ ಎನ್ನುತ್ತಾರೆ.

ಕಾಂಗ್ರೆಸ್ ನಲ್ಲಿ ಇಂತಹ ಮಾಯಾ ಮೃಗಗಳಿಗೆ ಉಗಿದು ಬುದ್ದಿ ಹೇಳದ ಡೊಂಗಿ ನಾಯಕರುಗಳಿಗೆ ಏನು ಹೇಳಬೇಕು.

ಡಿ.ಕೆ.ಶಿವಕುಮಾರ್ ನ ಜೊತೆಗೆ ಇಂತವರೆ ಇರಬಹುದು ಇನ್ನೂ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡಗೆ ಇವತ್ತು ತಂಗುವುದು ಎಲ್ಲಿ ಎಂಬ ಚಿಂತೆ.ಬ್ರಾಹ್ಮಣ ಸಂಘದ ಮಂಜುನಾಥ್ ಜೋಷಿಗೆ ಯಾರಿಗೆ ಬಕಿಟ್ ಹಿಡಿಯಬೇಕು ಎಂಬ ಲೆಕ್ಕಾಚಾರ ವೃದ್ದ ದಂಪತಿಗಳಿಗೆ ಮಾಧ್ಯಮಗಳೇ ಕೊನೆಯ ಆಯ್ಕೆ. ಇನ್ನಾದರೂ ಪೊಲೀಸ್ ಇಲಾಖೆ ವೃದ್ದರ ನೆರವಿಗೆ ಬರಲಿ.

Sachin Meega

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...