Home namma chikmagalur ಸಾಲಸೌಲಭ್ಯ ಅವಶ್ಯವಿರುವ ಸದಸ್ಯರಿಗೆ ಮೊದಲು ಸ್ಪಂದಿಸಿ
namma chikmagalurchikamagalurHomeLatest News

ಸಾಲಸೌಲಭ್ಯ ಅವಶ್ಯವಿರುವ ಸದಸ್ಯರಿಗೆ ಮೊದಲು ಸ್ಪಂದಿಸಿ

Share
Share

ಚಿಕ್ಕಮಗಳೂರು:  ಸಹಕಾರಿ ಸಂಘವು ಅವಶ್ಯವಿರುವ ಸಂಘದ ಸದಸ್ಯರಿಗೆ ಸಾಲಸೌಲಭ್ಯ ಪೂರೈಸಲು ಮೊದಲ ಆದ್ಯತೆ ಕೊಡಬೇಕು. ಈ ಹೊರತಾಗಿ ಅವಶ್ಯವಿಲ್ಲದ ಸದಸ್ಯರಿಗೆ ಸಾಲ ನೀಡುವ ಕೆಲ ಸಕ್ಕೆ ಮುಂದಾಗದಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ನಗರದ ಎಂ.ಜಿ.ರಸ್ತೆಯ ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡಿ ಜೀವನದಲ್ಲಿ ಸಂಕಷ್ಟದ ದಿನವನ್ನು ಕಳೆ ಯುತ್ತಿರುವ ಸದಸ್ಯರಿಗೆ ಸಾಲವನ್ನು ನೀಡಿದರೆ ನಿಗಧಿತ ಸಮಯಕ್ಕೆ ಹಿಂತಿರುಗಿಸುವ ಜವಾಬ್ದಾರಿ ಹೊರುತ್ತಾ ರೆ ಎಂದರು.

ಸಹಕಾರಿ ರಂಗದಲ್ಲಿ ಪರಿಶಿಷ್ಟರು, ಬಡವರು ಹಾಗೂ ಆರ್ಥಿಕ ಹಿಂದುಳಿದ ವರ್ಗಕ್ಕೆ ಸಾಲವನ್ನು ವಿತರಿ ಸುವ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇದನ್ನು ಹೊರತಾಗಿ ಆಡಳಿತ ಮಂಡಳಿಯೇ ಸದಸ್ಯರನ್ನು ಕರೆದು ಸಾಲ ವಿತರಿಸುವ ಪ್ರವೃತ್ತಿ ಬೆಳೆಸಬಾರದು. ಇದೀಗ ಶತಮಾನ ಪೂರೈಸುವ ಸೊಸೈಟಿ ಇನ್ನಷ್ಟು ಹೆಚ್ಚು ಪ್ರಗತಿ ಹೊಂ ದಲಿ ಎಂದು ಆಶಿಸಿದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಭಾರತೀಯರ ಪವಿತ್ರ ದಿನವಾದ ಶ್ರಾವಣ ಮಾಸದಲ್ಲಿ ಸೊ ಸೈಟಿ ನೂತನ ಕಟ್ಟಡಕ್ಕೆ ಚಾಲನೆ ನೀಡಿರುವುದು ಹೆಮ್ಮೆಯ ಸಂಗತಿ. ನಗರದ ಹೃದಯ ಭಾಗದಲ್ಲಿ ಶತಮಾ ನ ಪೂರೈಸಿ ಉತ್ತಮ ಪ್ರಶಂಸೆಗೆ ಟೌನ್ ಕೋ ಸೊಸೈಟಿ ಪಾತ್ರರಾಗಲು ಹಿರಿಯರು ಹಾಕಿಕೊಟ್ಟ ಮಾರ್ಗದ ರ್ಶನವೇ ಕಾರಣವಾಗಿದೆ ಎಂದು ತಿಳಿಸಿದರು.

ಈ ಸೊಸೈಟಿಯು ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೇ ಎಲ್ಲಾ ಜನಾಂಗವು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ವಿಶೇಷವಾಗಿ ನಗರದ ಗಾಣಿಗಶೆಟ್ಟರು ಹಿಂದಿನ ಕಾಲದಲ್ಲೇ ಮನೆಗೊಬ್ಬ ಸದಸ್ಯರನ್ನಾಗಿ ಸಿ ಸೊಸೈಟಿಯ ಬೆಳವಣಿಗೆಗೆ ಬಹಳಷ್ಟು ಶ್ರಮಿಸಲು ಸಮಾಜ ಪ್ರಮುಖ ಪಾತ್ರ ವಹಿಸಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ೧೧೫ ವರ್ಷಗಳ ಇತಿಹಾಸವಿರುವ ಅತ್ಯಂತ ಹಳೆಯ ಟೌನ್ ಕೋ ಸೊಸೈಟಿಯಾಗಿದೆ. ಈ ಹಿಂದಿನ ಅವಧಿಯಲ್ಲೂ ಸೊಸೈಟಿ ಅಭಿವೃಧ್ದಿಗೆ ಸಾಕಷ್ಟು ನೆರವು ನೀಡಿ ದ್ದು ಮುಂದಿನ ದಿನಗಳಲ್ಲೂ ಸೊಸೈಟಿಯ ಜೊತೆ ಗಟ್ಟಿಯಾಗಿ ನಿಲ್ಲುವುದಾಗಿ ತಿಳಿಸಿದರು.

ಸಹಕಾರ ತತ್ವವು ಪ್ರಕೃತಿಯಲ್ಲಿದೆ. ಆ ಪ್ರಕೃತಿ ತತ್ವವನ್ನು ಮನುಷ್ಯ ಬದುಕಿನಲ್ಲಿ ಅಳವಡಿಸಿಕೊಂಡು ಪರ ಸ್ಪರ ನೆರವಿಗೆ ಧಾವಿಸಬೇಕು. ಅದರಲ್ಲೂ ಕೊರತೆಯಿದ್ದವರು ನೆರವಿಗೆ ಬಂದಲ್ಲಿ ಎಲ್ಲರೂ ಒಟ್ಟಾಗಿ ಇಡೀ ದೇಶವೇ ಒಂದಾಗಿ ಸಾಗುವುದೇ ಸಹಕಾರಿ ತತ್ವದ ಮೂಲ ಧ್ಯೇಯವಾಗಿದೆ ಎಂದು ಹೇಳಿದರು.

ಸೊಸೈಟಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಪ್ರಸ್ತುತ ಸೊಸೈಟಿಯು ಯಾವುದೇ ನಷ್ಟವಿ ಲ್ಲದೇ ಲಾಭಾಂಶದಲ್ಲಿ ನಡೆದುಕೊಂಡು ಸಾಗುತ್ತಿದೆ. ಇದೀಗ ಎಂ.ಜಿ.ರಸ್ತೆಯ ಅಭಿಮುಖವಾಗಿ ನೂತನ ಕಟ್ಟ ಡವನ್ನು ನಿರ್ಮಿಸಲು ಮುಂದಾಗಿದ್ದು ಇದರಿಂದ ಸಂಘವು ಆರ್ಥಿಕವಾಗಿ ಬೆಳವಣಿಗೆ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಬಿ.ಶೀಲಾ ದಿನೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎ.ವಿ. ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಸೊಸೈಟಿ ಉಪಾ ಧ್ಯಕ್ಷೆ ಎಂ.ಎಂ.ಹಾಲಮ್ಮ, ನಿರ್ದೇಶಕರುಗಳಾದ ಸಿ.ವಿ.ಕುಮಾರ್, ಎಂ.ಶ್ರೀನಿವಾಸ್, ಸಿ.ಆರ್.ಕೇಶವಮೂರ್ತಿ, ಬಿ.ಎನ್.ರಾಜಣ್ಣಶೆಟ್ಟಿ, ಸಿ.ಆರ್.ಗಂಗಾಧರ್, ಬಿ.ಎಸ್.ಪ್ರಶಂತ್, ಸಿ.ಡಿ.ರಘು, ಎನ್.ಈಶ್ವರಪ್ಪ, ಅಂಬಿಕಾ, ಜ ಯಂತಿ, ಕೆ.ಪಿ.ಪರಮೇಶ್ವರ್ ಮತ್ತಿತರರು ಹಾಜರಿದ್ದರು.

Respond first to members who need credit facilities.

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...