ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ವಾಸಿಸುವ ರೈತರು ಎದುರಿಸುತ್ತಿರುವ ಕಾಡಾನೆ ದಾಳಿ ಮತ್ತು ಬಗರ್ಹುಕುಂ ಸಮಸ್ಯೆಗಳು ತೀವ್ರ ಕಳವಳ. ಈ ವನ್ಯಮೃಗಗಳಿಂದ ಮೃತಪಟ್ಟ ರೈತ ಕುಟುಂ ಬಕ್ಕೆ ಸರ್ಕಾರ ೫೦ ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ನಗರದ ಆಜಾದ್ಪಾರ್ಕ್ ವೃತ್ತದಲ್ಲಿ ಗುರುವಾರ ಜಿಲ್ಲಾ ರೈತ ಸಂಘದಿAದ ಏರ್ಪಡಿಸಿದ್ಧ ರೈತ ಪ್ರತಿ ಭಟನಾ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
೧೯೯೭ರಲ್ಲಿ ಪ್ರೊ.ನಂಜುAಡಸ್ವಾಮಿ ಅವರ ಹೋರಾಟದ ಫಲವಾಗಿ ಆರಂಭವಾದ ಪರಿಹಾರ ಧನ ಇಂ ದು ಹೆಚ್ಚಾಗಬೇಕಾದ ಅನಿವಾರ್ಯವಿದೆ. ಬಗರ್ಹುಕುಂ ಸಾಗುವಳಿದಾರರಿಗೆ ಮತ್ತು ಸರ್ಕಾರಿ ಭೂಮಿಯ ಲ್ಲಿ ಜೀವನ ಸಾಗಿಸುತ್ತಿರುವ ಸಣ್ಣ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ಕುಂಟು ನೆಪಗಳನ್ನು ಹೇ ಳುತ್ತಿದೆ ಎಂದು ದೂರಿದರು.
ಈ ನಡುವೆ ಸರ್ಕಾರಗಳು ಬಲಾಡ್ಯ ಕಾರ್ಪೋರೇಟ್ ಕಂಪನಿಗಳಿಗೆ ಸಾವಿರಾರು ಎಕರೆ ಭೂಪ್ರದೇಶ ನೀಡಲು ಮುಂದಾಗುತ್ತಿರುವುದು ಖಂಡನೀಯ. ಇದು ಭವಿಷ್ಯದಲ್ಲಿ ದೇಶದ ಬೆನ್ನೆಲುಬು ರೈತರು ಬೀದಿಬೀ ಳುವಂತಾಗಲಿದೆ. ಅಲ್ಲದೇ ಭೂಮಿ ಕಳೆದುಕೊಂಡು ರೈತ ಕುಟುಂಬವು ಜೀವನವಿಲ್ಲದೇ ಬದುಕು ದುಸ್ತರವಾ ಗಲಿದೆ ಎಂದು ಎಚ್ಚರಿಸಿದರು.
ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್ಕುಮಾರ್ ಮಾತನಾಡಿ ರೈತ ಸಮಾಜದ ಎಲ್ಲಾ ವರ್ಗಕ್ಕೂ ಸೀಮಿತವಾಗಿದೆ. ಕೆಲವರು ರಾಜಕಾರಣಿಗಳು ರೈತ ಚಳುವಳಿ ಹೊಡೆಯಲು ಬಹಳಷ್ಟ್ಟು ಪ್ರಯತ್ನಿ ಸುತ್ತಿದೆ. ಇದು ರಾಜಕಾರಣದ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳಲು ರಾಜಕಾರಣೀಗಳು ಷಡ್ಯಂತ್ರ ರಚಿಸು ತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸಂಘವು ನಾಡಿನಾದ್ಯಂತ ಸಂಚಾರ ನಡೆಸಿ ಅರಣ್ಯ ಹಕ್ಕು, ಸಣ್ಣಪುಟ್ಟ ರೈತ ಸಮಸ್ಯೆಗಳ ಮುಕ್ತಿ ಗಾಗಿ ಪಾದಯಾತ್ರೆ ನಡೆಸಿದೆ. ರೈತರಿಗೆ ಎದುರಾಗಿರುವ ಬಕರ್ಹುಕುಂ, ಅರಣ್ಯ ಹಕ್ಕು ಕಾಯ್ದೆ ಮುಕ್ತಿಗಾಗಿ ಹೋರಾಡುತ್ತಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆ ತಂದು ಕೊನೆಗೆ ರೈತರ ಹೋರಾಟಕ್ಕೆ ಮಣಿದು ಕಾಯ್ದೆ ಹಿಂಪಡೆದಿದೆ ಎಂದರು.
ರೈತ ಸಂಘದ ಹಿರಿಯ ಮುಖಂಡ ಕೆ.ಕೆ.ಕೃಷ್ಣೇಗೌಡ ಮಾತನಾಡಿ ದೇಶ ಹಾಗೂ ನಾಡಿನ ರೈತರು ಮ ನಸ್ಸು ಮಾಡಿದರೆ ಸರ್ಕಾರವನ್ನು ಉರುಳಿಸುವ ಶಕ್ತಿಯಿದೆ. ರೈತ ಹಕ್ಕಿಗೆ ಚ್ಯುತಿ ಬಾರದಂತೆ ಆಯಾ ಸರ್ಕಾ ರಗಳು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಪ್ರತಿ ಭಾರಿ ರೈತರ ಬೆಳೆಗೆ ಬೆಲೆ ನಿಗಧಿಗೊಳಿಸದೇ ರೈತರ ಸಾವಿಗೆ ಸರ್ಕಾರಗಳು ಮೂಲ ಕಾರಣವಾಗುತ್ತಿವೆ ಎಂದು ಹೇಳಿದರು.
ರೈತ ಹೋರಾಟ, ಆಟದ ವಿಚಾರವಲ್ಲ. ಪ್ರತಿಭಟನೆ ಕುಳಿತ ಮೇಲೆ ನಿರ್ಣಯ ಮಾಡಿಕೊಳ್ಳಬೇಕು. ಈ ಸಂಘಟನೆಯು ಪ್ರತಿ ಹೋಬಳಿ, ಗ್ರಾಮಾಂತರ ಮಟ್ಟದಲ್ಲಿ ಜಾಗೃತಿ ಮೂಡಿಸಿ ದಿಕ್ಕು ತಪ್ಪುತ್ತಿರುವ ರೈತ ರಿಗೆ ಮನವರಿಕೆ ಮಾಡಬೇಕು. ರಾಜಕಾರಣಿಗಳ ಪೊಳ್ಳು ಮಾತಿಗೆ ಬೆರಗಾದರೆ ರೈತರು ಮುಂದೊAದು ದಿನ ದಿ ವಾಳಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಬಸವ ರಾಜ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚAದ್ರಶೇಖರ್, ಮುಖಂಡರುಗಳಾದ ಕುಮಾರಸ್ವಾಮಿ, ದೇವರಾ ಜ್, ಬಸವಣ್ಣ, ರಾಜು ಎಕ್ಕಬೋರನಹಳ್ಳಿ, ಜಯರಾಮ್, ಇದ್ದರು.
Protest district convention by the District Farmers’ Association
Leave a comment