ಚಿಕ್ಕಮಗಳೂರು: ಫುಟ್ಬಾಲ್ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾಫಿಲ್ಯಾಂಡ್ ಎಫ್ಸಿ ಸೆ.೨೨ ರಿಂದ ಅ.೫ ರವರೆಗೆ ಪ್ರೊ ಸಾಕರ್ಲೀಗ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಲಾಯೆಸ್ಟೆನ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ ಫುಟ್ಬಾಲ್ ಪ್ರತಿಭೆಗಳನ್ನು ಬೆಳೆಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶದಿಂದ ನಡೆಸುತ್ತಿರುವ ಫುಟ್ಬಾಲ್ ಪ್ರಾಂಚೈಸಿ ಪಂದ್ಯಾವಳಿ ಇದಾಗಿದೆ. ಸೀನಿಯರ್ ಜತೆಗೆ ಜ್ಯೂನಿಯರ್ ಪಂದ್ಯಾವಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಸೆ.೨೦ ಮತ್ತು ೨೧, ಸೆ.೨೭ ಮತ್ತು ೨೮ ಹಾಗೂ ಅ.೪ ಮತ್ತು ೫ ರಂದು ಮಧ್ಯಾಹ್ನ ೨ ರಿಂದ ರಾತ್ರಿ ೧೦ ರವರೆಗೆ ನಗರದ ಉಂಡೆದಾಸರಹಳ್ಳಿಯಲ್ಲಿರುವ ಟರ್ಫ್ಕ್ಲಬ್ನಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು ೮ ಪ್ರಾಂಚೈಸಿಗಳು ಪಂದ್ಯದಲ್ಲಿ ಭಾಗವಹಿಸಲಿದ್ದು, ಪ್ರತಿ ಪ್ರಾಂಚೈಸಿ ರೌಂಡ್ರಾಬಿನ್ ಸ್ವರೂಪದಲ್ಲಿ ೭ ಪಂದ್ಯಗಳನ್ನು ಆಡುತ್ತವೆ. ಅಗ್ರ ತಂಡಗಳು ಫೈನಲ್ ತಲುಪುತ್ತವೆ. ಜ್ಯೂನಿಯರ್ ಪಂದ್ಯಗಳು ಸೀನಿಯರ್ ಪಂದ್ಯಗಳ ಸಮನಾಂತರವಾಗಿ ನಡೆಯುತ್ತವೆ ಎಂದರು.
ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾವಳಿಯು ಚಿಕ್ಕಮಗಳೂರಿನ ಫುಟ್ಬಾಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಪಿಎಸ್ಎಲ್ ಸೀಸನ್ ೩ ಹೊಂದಿದೆ. ಕೆಲಚಂದ್ರ ಕಾಫಿ ಸಂಸ್ಥೆ ಪ್ರಾಯೋಜಕತ್ವ ನೀಡಿದೆ ಎಂದರು.
ಪ್ರತಿ ಪಂದ್ಯಕ್ಕೂ ಮ್ಯಾನ್ ಆಫ್ದಿ ಮ್ಯಾಚ್ ಪ್ರಶಸ್ತಿ, ಲೀಗ್ ಚಾಂಪಿಯನ್ಗಾಗಿ ಟ್ರೋಫಿ, ಆಟಗಾರರು ಮತ್ತು ತಂಡಗಳನ್ನು ಪ್ರೇರೇಪಿಸಲು ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಫಿಲ್ಯಾಂಡ್ ಎಫ್ಸಿ ಮತ್ತು ಲೀಗ್ ಕಾರ್ಯದರ್ಶಿ ಲೆಕ್ಸಿ, ವಿಷಯ ಮುಖ್ಯಸ್ಥ ಅದ್ವಿತ್, ಆಟಗಾರ ಬಸವರಾಜ್, ಸಿಡಿಎಫ್ಎ ಅಧ್ಯಕ್ಷ ವಿಕಾಸ್ ಮತ್ತಿತರರಿದ್ದರು.
Pro Soccer League football tournament in the city from September 22
Leave a comment